More

    ಶಾಸಕರೆಲ್ಲರೂ ಮಂತ್ರಿಯಾಗಲ್ಲ: ಈಶ್ವರಪ್ಪ ಯೂಟರ್ನ್!

    ಶಿವಮೊಗ್ಗ: ಶಾಸಕರಾದವರೆಲ್ಲರೂ ಸಚಿವರಾಗಲು ಸಾಧ್ಯವಿಲ್ಲ. ಮತ್ತೆ ಸಚಿವ ಸ್ಥಾನ ಕೇಳುವ ಮೂಲಕ ಪಕ್ಷಕ್ಕೆ ಹಾಗೂ ನಾಯಕರಿಗೆ ಮತ್ತೊಂದು ಸಮಸ್ಯೆ ಸೃಷ್ಟಿಸುವ ಇರಾದೆಯೂ ನನಗಿಲ್ಲ. ಇದು ಶಾಸಕ ಕೆ.ಎಸ್.ಈಶ್ವರಪ್ಪ ಅವರ ಸ್ಪಷ್ಟ ನುಡಿಗಳು. ತೀರಾ ಇತ್ತೀಚಿನವರೆಗೂ ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿದ್ದ ಈಶ್ವರಪ್ಪ ಈಗ ಒಂದು ಹೆಜ್ಜೆ ಹಿಂದೆ ಸರಿದಿದ್ದಾರೆ.
    ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದರು. ನನಗೆ ಈಗಲೂ ಅವರ ಬಗ್ಗೆ ನಂಬಿಕೆಯಿದೆ. ಆದರೆ ಸಚಿವ ಸಂಪುಟಕ್ಕೆ ಕೈ ಹಾಕುವುದು ಈಗಿನ ಸಂದರ್ಭದಲ್ಲಿ ಅಷ್ಟೊಂದು ಸುಲಭವಲ್ಲ. ನನ್ನಿಂದ ಇನ್ನೊಂದು ಸಮಸ್ಯೆ ಹುಟ್ಟಿಕೊಳ್ಳುವುದು ಬೇಡ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ನನ್ನನ್ನು ಮತ್ತೆ ಮಂತ್ರಿ ಮಾಡುವ ಬಗ್ಗೆ ಸಿಎಂ ಈಗಾಗಲೇ ಕೇಂದ್ರ ನಾಯಕರೊಂದಿಗೆ ಚರ್ಚಿಸಿರಬಹುದು. ಅತ್ತ ಕಡೆಯಿಂದ ಯಾವ ಸಂದೇಶ ಬಂದಿದೆ ಎಂಬುದು ನನಗೆ ಗೊತ್ತಿಲ್ಲ. ಆಡಳಿತ ನಡೆಸುವುದು ಅಷ್ಟು ಸುಲಭವಲ್ಲ ಎಂಬುದರ ಪರಿಕಲ್ಪನೆ ನನಗಿದೆ. ಸಿಎಂ ಹಾಗೂ ಕೇಂದ್ರ ನಾಯಕರು ಸಚಿವ ಸ್ಥಾನದ ವಿಷಯದಲ್ಲಿ ಯಾವ ತೀರ್ಮಾನ ಕೈಗೊಂಡರೂ ನಾನು ಅದಕ್ಕೆ ಬದ್ಧನಾಗಿದ್ದೇನೆ ಎಂದರು.
    ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ನನಗೆ ಕ್ಲೀನ್‌ಚಿಟ್ ಸಿಕ್ಕ ಬಳಿಕ ಮತ್ತೆ ಸಚಿವನಾಗಿ ಜನರ ಮುಂದೆ ಹೋಗಬೇಕೆಂಬ ಆಸೆ ಇದ್ದದ್ದು ನಿಜ. ಆದರೆ ಈಗ ಅಂತಹ ಅಪೇಕ್ಷೆಗಳಿಲ್ಲ. ಆದರೆ ಪ್ರತಿ ದಿನ ರಾಜ್ಯದ ವಿವಿಧ ಭಾಗಗಳಿಂದ ಅಭಿಮಾನಿಗಳು, ಕಾರ್ಯಕರ್ತರು ಫೋನ್ ಮಾಡಿ ನೀವು ಇನ್ನೊಮ್ಮೆ ಸಚಿವರಾಗಬೇಕೆಂಬು ಹೇಳುತ್ತಿದ್ದಾರೆ ಎಂದು ತಿಳಿಸಿದರು.

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts