ರಮೇಶ್ ಅರವಿಂದ್ ಅಭಿನಯದ ‘ಶಿವಾಜಿ ಸುರತ್ಕಲ್’ ಈ ವರ್ಷದ ಫೆಬ್ರವರಿಯಲ್ಲಿ ಬಿಡುಗಡೆಯಾಗಿತ್ತು. ಒಳ್ಳೆಯ ಪ್ರತಿಕ್ರಿಯೆ ಮತ್ತು ವಿಮರ್ಶೆಗಳು ಸಹ ಸಿಕ್ಕಿತ್ತು. ಇನ್ನೇನು ಚಿತ್ರ ಯಶಸ್ವಿ ಪ್ರದರ್ಶನ ಕಾಣಬೇಕು ಎನ್ನುವಷ್ಟರಲ್ಲಿ ಕರೊನಾ ಬಂದು ಚಿತ್ರ ಪ್ರದರ್ಶನವೇ ರದ್ದಾಗಿ ಹೋಯಿತು.
ಈ ಮಧ್ಯೆ ‘ಶಿವಾಜಿ ಸುರತ್ಕಲ್’ ಚಿತ್ರವನ್ನು ಓವರ್ ದಿ ಟಾಪ್ನಲ್ಲಿ (ಓಟಿಟಿ) ಬಿಡುಗಡೆ ಮಾಡಬೇಕು, ಚಾನಲ್ಗಳಲ್ಲಿ ಪ್ರದರ್ಶಿಸಬೇಕು ಎಂಬ ಒತ್ತಾಯ ಜನರಿಂದ ಬಂದಿತ್ತಾದರೂ ಚಿತ್ರ ಇದುವರೆಗೂ ಓಟಿಟಿಯಲ್ಲಾಗಲೀ, ಟಿವಿಯಲ್ಲಾಗಲೀ ಬಿಡುಗಡೆಯಾಗಿಲ್ಲ.
ಇದನ್ನೂ ಓದಿ: ಕಾರು ಅಪಘಾತದಲ್ಲಿ ಗಾಯಗೊಂಡು ನಟಿ ರಿಷಿಕಾ ಸಿಂಗ್ ಆಸ್ಪತ್ರೆಗೆ ದಾಖಲು
ಇದೀಗ ಚಿತ್ರದ ಓಟಿಟಿ ಬಿಡುಗಡೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ‘ಶಿವಾಜಿ ಸುರತ್ಕಲ್’ ಆಗಸ್ಟ್ 7ರಂದು ಜೀ5ನಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಇದಾಗಿ ಕೆಲವು ದಿನಗಳ ನಂತರ ಜೀ ಕನ್ನಡದಲ್ಲೂ ಬಿಡುಗಡೆಯಾಗಲಿದೆ.
‘ಶಿವಾಜಿ ಸುರತ್ಕಲ್ – ರಣಗಿರಿ ರಹಸ್ಯ’ ಚಿತ್ರವು ಒಂದು ಪತ್ತೇದಾರಿ ಚಿತ್ರವಾಗಿದ್ದು, ಶಿವಾಜಿ ಸುರತ್ಕಲ್ ಎಂಬ ಪತ್ತೇದಾರನ ಸಾಹಸಗಳನ್ನು ಹೇಳುತ್ತದೆ. ಪ್ರಸಿದ್ಧ ಪತ್ತೇದಾರಿ ಕಾದಂಬರಿಕಾರ್ತಿ ಅಗಾತ ಕ್ರಿಸ್ಟಿ ಅವರ ‘ಮರ್ಡರ್ ಆನ್ ದಿ ಒರಿಯಂಟೆಲ್ ಎಕ್ಸ್ಪ್ರೆಸ್’ ಎಂಬ ಕಾದಂಬರಿಯಿಂದ ಸ್ಫೂರ್ತಿ ಪಡೆದು ಈ ಚಿತ್ರವನ್ನು ರೂಪಿಸಲಾಗಿದೆ.
ಈ ಹಿಂದೆ ‘ಬದ್ಮಾಶ್’ ಚಿತ್ರವನ್ನು ನಿರ್ದೇಶಿಸಿದ್ದ ಆಕಾಶ್ ಶ್ರೀವತ್ಸ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ರಮೇಶ್ ಅರವಿಂದ್ ಜತೆಗೆ ರಾಧಿಕಾ ನಾರಾಯಣ್, ಆರೋಹಿ ನಾರಾಯಣ್ ಮುಂತಾದವರು ಅಭಿನಯಿಸಿದ್ದಾರೆ.
ಇದನ್ನೂ ಓದಿ: ಬಿಗ್ಬಾಸ್ ಶೋ ಪ್ರತಿ ಎಪಿಸೋಡ್ಗೆ ನಾಗಾರ್ಜುನ್ ಪಡೆಯುವ ಸಂಭಾವನೆ ಕೇಳಿದ್ರೆ ಶಾಕ್ ಆಗ್ತಿರಾ!
ಈಗಾಗಲೇ ಈ ಚಿತ್ರದ ಹಿಂದಿ ರೀಮೇಕ್ ಹಕ್ಕುಗಳು ಮತ್ತು ಉತ್ತರ ಭಾರತದ ಡಬ್ಬಿಂಗ್ ಹಕ್ಕುಗಳನ್ನು ಬಾಲಿವುಡ್ನ ಜನಪ್ರಿಯ ಪ್ರೊಡಕ್ಷನ್ ಸಂಸ್ಥೆಯೊಂದು ಪಡೆದಿದ್ದು, ಮುಂದಿನ ದಿನಗಳಲ್ಲಿ ಚಿತ್ರವು ಹಿಂದಿಯಲ್ಲಿ ರೀಮೇಕ್ ಆಗುವ ಸಾಧ್ಯತೆ ಇದೆ.
ಇದಲ್ಲದೆ ತೆಲುಗು ಮತ್ತು ತಮಿಳಿಗೂ ರೀಮೇಕ್ ಆಗುವ ಬಗ್ಗೆ ಮಾತುಕಥೆ ನಡೆದಿದ್ದು, ಸದ್ಯದಲ್ಲೇ ಈ ಬಗ್ಗೆ ಹೆಚ್ಚಿನ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.