ಮುಂಬೈ: ಮೀನು ಹಿಡಿಯಲಿಕ್ಕೆಂದು ನದಿಗೆ ಹೊಂದಿಕೊಂಡ ತೊರೆಗೆ ಇಳಿದ ವ್ಯಕ್ತಿ ಮೇಲೆ ಶಾರ್ಕ್ ಡೆಡ್ಲಿ ಅಟ್ಯಾಕ್ ಮಾಡಿ, ಕಾಲನ್ನು ಕಚ್ಚಿ ಕಿತ್ತುಕೊಂಡಿದೆ. ಇದರಿಂದ ಆ ವ್ಯಕ್ತಿ ಕಾಲು ಕಳೆದುಕೊಂಡಿದ್ದು, ಬಳಿಕ ಸ್ಥಳೀಯರು ನದಿಗೆ ಇಳಿದು 200 ಕೆಜಿಯ ಶಾರ್ಕ್ಮೀನನ್ನು ಸೆರೆಹಿಡಿದಿದ್ದಾರೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ನದಿಗೆ ಸಂಪರ್ಕವಿರುವ ತೊರೆಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ‘ಉಕ್ರೇನ್ ಯುದ್ಧದಿಂದ ಹಿಂದೆ ಸರಿದರೆ ಪುತಿನ್ ಹತ್ಯೆ’: ಮಸ್ಕ್
ಮೀನುಗಾರ ವಿಕ್ಕಿ ಸುರೇಶ್ ಗೊವಾರಿ (32) ಶಾರ್ಕ್ನಿಂದ ಕಾಲನ್ನು ಕಳೆದುಕೊಂಡ ವ್ಯಕ್ತಿ. ವಿಕ್ಕಿ ಸೇರಿ ಹಲವು ಮೀನುಗಾರರು ರಾತ್ರಿ ಸಮಯದಲ್ಲಿ ಮೀನುಗಳನ್ನು ಹಿಡಿಯಲೆಂದು ತೊರೆಯ ನೀರಿಗೆ ಇಳಿದಿದ್ದಾರೆ.
ಈ ವೇಳೆ ಶಾರ್ಕ್ಆತನ ಮೇಲೆರಗಿ ಕಾಲನ್ನು ಕಿತ್ತುಕೊಂಡಿದೆ. ಕೂಡಲೇ ಗಂಭೀರವಾಗಿ ಗಾಯಗೊಂಡಿರುವ ಸುರೇಶ್ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕಿತ್ಸೆ ಪಡೆಯುತ್ತಿರುವ ಆತನ ಸ್ಥಿತಿ ಗಂಭೀರವಾಗಿದೆ.
ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರೆಲ್ಲ ಒಟ್ಟುಗೂಡಿ ರಾತ್ರಿಯಲ್ಲೇ ಶಾರ್ಕ್ಮೀನನ್ನು ಸೆರೆಹಿಡಿದು ಕೊಂದಿದ್ದಾರೆ.