ಬೆಂಗಳೂರು: ಕರೊನಾ ಸೋಂಕು ಹರಡಿರುವ ಹಿನ್ನೆಲೆಯಲ್ಲಿ ರಾಜ್ಯ ವಕ್ಫ್ಬೋರ್ಡ್ ಶಬ್ ಇ ಬರಾತ್ ಪ್ರಾರ್ಥನೆಗೆ ಬ್ರೇಕ್ ಹಾಕಿದೆ.
ಏಪ್ರಿಲ್ 9 ರಂದು ಶಬ್ ಇ ಬರಾತ್ ಪ್ರಾರ್ಥನೆ ಇದ್ದು, ಮಸೀದಿಯಲ್ಲಿ ಪ್ರಾರ್ಥನೆ ಮಾಡುವ ಬದಲು ಮನೆಯಲ್ಲೇ ಪ್ರಾರ್ಥನೆ ಮಾಡಬೇಕು ಹಾಗೂ ಖಬರ್ಸ್ತಾನಕ್ಕೆ ಪ್ರವೇಶ ನಿಷೇಧಿಸಲಾಗಿದೆ ಎಂದು ವಕ್ಫ್ಬೋರ್ಡ್ ತಿಳಿಸಿದೆ.
ಪ್ರಾರ್ಥನೆ ರದ್ದು ಮಾಡಿರುವ ವಿಷಯವನ್ನು ಬೋರ್ಡ್ ರಾಜ್ಯದ ಎಲ್ಲ ಮಸೀದಿ ಹಾಗೂ ಖಬರ್ಸ್ತಾನ ಮುಖ್ಯಸ್ಥರಿಗೆ ರವಾನಿಸಿದೆ.
ರಾಜ್ಯದಲ್ಲಿ ಕರೊನಾ ವೈರಸ್ ಸೋಂಕು ತೀವ್ರವಾಗಿ ಹರಡಿರುವ ಹಿನ್ನೆಲೆಯಲ್ಲಿ ಪ್ರಾರ್ಥನೆ ಹಾಗೂ ಖಬರ್ಸ್ತಾನಕ್ಕೆ ಭೇಟಿ ನೀಡುವುದನ್ನು ನಿಷೇಧಿಸಲಾಗಿದೆ.
ದೆಹಲಿಯಲ್ಲಿ ನಡೆದ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ್ದವರಿಗೆ ಕರೊನಾ ಸೋಂಕು ಹರಡಿ ತೀವ್ರ ವಿವಾದ ಸೃಷ್ಟಿಯಾದ ಹಿನ್ನೆಲೆಯಲ್ಲಿ ಬೋರ್ಡ್ ಈ ನಿರ್ಧಾರ ಕೈಗೊಂಡಿದೆ.
ಕೋವಿಡ್ 19 ಲಾಕ್ಡೌನ್ ವಿಶೇಷ: 2000ದ ನಂತರದಲ್ಲಿ ಭಾರತ ಪಾಲ್ಗೊಂಡ ಕ್ರಿಕೆಟ್ ಸರಣಿಯ ಮರುಪ್ರಸಾರ