ನವದೆಹಲಿ: ಕರೊನಾ ವೈರಸ್ ಸೋಂಕಿನ ಹರಡುವಿಕೆ ತಡೆಗಟ್ಟಲು ದೇಶಾದ್ಯಂತ ಲಾಕ್ಡೌನ್ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಮನೆಗಳಲ್ಲೇ ಬಂಧಿಗಳಾಗಿರುವ ಜನರ ಬೇಸರ ನೀಗಿಸಲು ಕೇಂದ್ರ ಸರ್ಕಾರ 80ರ ದಶಕದ ಕೊನೆಯ ಭಾಗದಲ್ಲಿ ಜನಪ್ರಿಯವಾಗಿದ್ದ ರಾಮಾಯಣ ಮತ್ತು ಮಹಾಭಾರತ ಧಾರವಾಹಿಗಳನ್ನು ದೂರದರ್ಶನ ಚಾನೆಲ್ಗಳಲ್ಲಿ ಮರುಪ್ರಸಾರ ಆರಂಭಿಸಿದೆ. ಇದರ ಜತೆಗೀಗ ಕ್ರಿಕೆಟ್ ಸರಣಿಯ ಮರುಪ್ರಸಾರವನ್ನು ಆರಂಭಿಸಲು ಮುಂದಾಗಿದೆ.
2000ದ ನಂತರದಲ್ಲಿ ಭಾರತ ಕ್ರಿಕೆಟ್ ತಂಡ ಪಾಲ್ಗೊಂಡಿದ್ದ ದ್ವಿಪಕ್ಷೀಯ ಕ್ರಿಕೆಟ್ ಸರಣಿಯ ಪಂದ್ಯಗಳನ್ನು ಡಿಡಿ ಸ್ಪೋರ್ಟ್ಸ್ ಚಾನೆಲ್ ಮೂಲಕ ಮರುಪ್ರಸಾರ ಮಾಡಲಾಗುತ್ತಿದೆ. ಭಾರತಿಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಕೇಂದ್ರ ಸರ್ಕಾರ ಜಂಟಿ ಹೇಳಿಕೆ ನೀಡಿವೆ.
ಟ್ವೀಟ್ ಮೂಲಕ ಈ ವಿಷಯ ತಿಳಿಸಿರುವ ಬಿಸಿಸಿಐ, 2000 ದಶಕದ ಕ್ರಿಕೆಟ್ನ ಮರುಪ್ರಸಾರ, ಬಿಸಿಸಿಐ ಮತ್ತು ಕೇಂದ್ರ ಸರ್ಕಾರ ಹಳೆಯ ಕ್ರಿಕೆಟ್ ಪಂದ್ಯಗಳನ್ನು ಮರುಪ್ರಸಾರ ಮಾಡಲಿವೆ. ಮನೆಯಲ್ಲಿ ಆರಾಮವಾಗಿ ಕುಳಿತು, ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುತ್ತಾ ಆನಂದಿಸಿ ಎಂದು ಹೇಳಿದೆ.
ಹಿಮಾಚ್ಛಾದಿತ ಬೆಟ್ಟದಲ್ಲಿ ಐವರು ಉಗ್ರರನ್ನು ಹೊಡೆದುರುಳಿಸಿದ ವಿಶೇಷ ಪಡೆ ಯೋಧರು, ಐವರು ಹುತಾತ್ಮ