More

    ನರಗುಂದದ ಬಳಿ ಸರಣಿ ಅಪಘಾತ, ಟ್ರ್ಯಾಕ್ಟರ್ ಚಾಲಕ ಸಾವು

    ನರಗುಂದ: ಟಿಪ್ಪರ್, ಟ್ರ್ಯಾಕ್ಟರ್ ಹಾಗೂ ಬೈಕ್​ಗಳ ನಡುವೆ ಪರಸ್ಪರ ಡಿಕ್ಕಿ ಹೊಡೆದುಕೊಂಡ ಪರಿಣಾಮ ಟ್ರ್ಯಾಕ್ಟರ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಪಟ್ಟಣದ ಸವದತ್ತಿ ರಸ್ತೆಯ ದೊಡ್ಡ ಕಾಲುವೆ ಹತ್ತಿರ ಗುರುವಾರ ರಾತ್ರಿ ನಡೆದಿದೆ.
    ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕು ಬಸಿಡೋಣಿ ಗ್ರಾಮದ ವಿಠ್ಠಲ ಹನುಮಂತಪ್ಪ ಮಾದರ (30) ಮೃತ ಟ್ರ್ಯಾಕ್ಟರ್ ಚಾಲಕ. ಹುಕ್ಕೇರಿ ತಾಲೂಕು ನಿಡಸೋಸಿ ಗ್ರಾಮದ ಬೈಕ್ ಸವಾರರಾದ ರಮೇಶ ಅಣ್ಣಪ್ಪ ದುರ್ಗಾಯಿ, ಧನಪಾಲ ರಾಮಚಂದ್ರ ಮುಕ್ಕಣ್ಣವರ ಎಂಬುವವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ನರಗುಂದದ ಬಾಬಾಸಾಹೇಬ ಸರ್ಕಾರಿ ತಾಲೂಕು ಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಡಿಕ್ಕಿ ರಭಸಕ್ಕೆ ಟ್ರ್ಯಾಕ್ಟರ್ ಪಲ್ಟಿಯಾಗಿ ಬಿದ್ದಿದ್ದು, ಟಿಪ್ಪರ್ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ.
    ಘಟನೆ ವಿವರ: ಅಪಘಾತದಲ್ಲಿ ಮೃತಪಟ್ಟಿರುವ ವಿಠ್ಠಲ ಮಾದರ ಅವರು ಬಸಿಡೋಣಿಯಿಂದ ನರಗುಂದಕ್ಕೆ ತಮ್ಮ ಟ್ರ್ಯಾಕ್ಟರ್ ಅನ್ನು ರಿಪೇರಿ ಮಾಡಿಸಿಕೊಳ್ಳಲು ಬಂದಿದ್ದರು. ಗುರುವಾರ ರಾತ್ರಿ ಮರಳಿ ಬಸಿಡೋಣಿಗೆ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ನರಗುಂದದಿಂದ ಮುನವಳ್ಳಿ ಕಡೆಗೆ ಹೋಗುತ್ತಿದ್ದ ಟಿಪ್ಪರ ಟ್ರ್ಯಾಕ್ಟರ್​ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಟ್ರ್ಯಾಕ್ಟರ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ವೇಳೆ ಮುನವಳ್ಳಿ ಕಡೆಯಿಂದ ನರಗುಂದ ಕಡಗೆ ಬೈಕ್​ನಲ್ಲಿ ಆಗಮಿಸುತ್ತಿದ್ದ ಬೈಕ್ ಸವಾರರು ಟಿಪ್ಪರ್ ಮತ್ತು ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದಾರೆ. ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts