More

    ಪ್ರಾಣಿಗಳಿಗೆ ಪ್ರತ್ಯೇಕ ಚಿತಾಗಾರ

    ಹುಬ್ಬಳ್ಳಿ: ನೆಲದಡಿ ಹೂತ ಮೃತ ಪ್ರಾಣಿಗಳ ದೇಹಗಳನ್ನು ನಾಯಿ, ನರಿಗಳು ಕೆದರಿ ತೆಗೆಯುತ್ತವೆ. ಇದರಿಂದ ಸುತ್ತಲಿನ ಪ್ರದೇಶದಲ್ಲಿ ದುರ್ವಾಸನೆ ಬೀರುತ್ತದೆ. ಎಲುಬುಗಳು ಚೆಲ್ಲಾಪಿಲ್ಲಿಯಾಗಿರುತ್ತವೆ. ಇದರಿಂದ ನಾಗರಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಲ್ಪಿಸಲು ಮಹಾನಗರ ಪಾಲಿಕೆ ಮುಂದಾಗಿದೆ. ಮೃತ ಪ್ರಾಣಿಗಳನ್ನು ದಹಿಸುವುದಕ್ಕಾಗಿ (ಎನಿಮಲ್ ಕ್ರಿಮಿಟೋರಿಯಂ) ಪ್ರತ್ಯೇಕ ವಿದ್ಯುತ್ ಚಿತಾಗಾರ ನಿರ್ವಿುಸಲು ಯೋಜನೆ ರೂಪಿಸಿದೆ.

    ಮೃತ ಪ್ರಾಣಿಗಳನ್ನು ದಹಿಸಲು ಹುಬ್ಬಳ್ಳಿಯ ಕಾರವಾರ ರಸ್ತೆಯ ಹಾಗೂ ಧಾರವಾಡದ ಹೊಸಯಲ್ಲಾಪುರದಲ್ಲಿರುವ ತ್ಯಾಜ್ಯ ಸಂಗ್ರಹ ಘಟಕಗಳಲ್ಲಿ ವಿದ್ಯುತ್ ಚಿತಾಗಾರ ನಿರ್ವಿುಸಲಾಗುತ್ತಿದೆ. ತಲಾ 5 ಲಕ್ಷ ರೂ. ವೆಚ್ಚದ ಈ ವಿದ್ಯುತ್ ಚಿತಾಗಾರಗಳು, 10/10 ಚ. ಅಡಿಯ 2 ಪ್ರತ್ಯೇಕ ಸ್ಥಳಗಳಲ್ಲಿ ನಿರ್ವಣವಾಗಲಿದೆ. ವಿಸõತ ಯೋಜನಾ ವರದಿಯನ್ನು ಪಾಲಿಕೆಯ ಇಲೆಕ್ಟ್ರಿಕ್ ಇಂಜಿನಿಯರಿಂಗ್ ವಿಭಾಗದವರು ಸಿದ್ಧಪಡಿಸುತ್ತಿದ್ದಾರೆ. ಕೆಲವೇ ದಿನಗಳಲ್ಲಿ ವಿದ್ಯುತ್ ಚಿತಾಗಾರ ಉಪಕರಣ ಖರೀದಿಗೆ ಟೆಂಡರ್ ಕರೆಯಲಾಗುತ್ತದೆ. ಪಾಲಿಕೆ ಇಲೆಕ್ಟ್ರಿಕ್ ಇಂಜಿನಿಯರಿಂಗ್ ವಿಭಾಗದ ಸಿಬ್ಬಂದಿಯೇ ವಿದ್ಯುತ್ ಚಿತಾಗಾರವನ್ನು ನಿರ್ವಹಿಸಲಿದ್ದಾರೆ.

    ಅವಳಿ ನಗರದಲ್ಲಿ ನಿತ್ಯ ನಾಯಿ, ಹಂದಿ, ಬಿಡಾಡಿ ದನ ಹೀಗೆ ಹಲವಾರು ಪ್ರಾಣಿಗಳು ರಸ್ತೆಯಲ್ಲಿ ಸಾಯುತ್ತಿರುತ್ತವೆ. ನಾಗರಿಕರು ನೀಡುವ ದೂರುಗಳನ್ನು ಆಧರಿಸಿ ಸದ್ಯ ಹುಬ್ಬಳ್ಳಿ-ಧಾರವಾಡದಲ್ಲಿರುವ 2 ಪ್ರತ್ಯೇಕ ಕ್ಯಾಟ್ ವೆಹಿಕಲ್​ಗಳಲ್ಲಿ ಮೃತ ಪ್ರಾಣಿಗಳನ್ನು ತೆಗೆದುಕೊಂಡು ಹೋಗಿ, ಅವಳಿ ನಗರದ ಕಾರವಾರ ರಸ್ತೆ ಹಾಗೂ ಹೊಸಯಲ್ಲಾಪುರದಲ್ಲಿರುವ ತ್ಯಾಜ್ಯ ಸಂಗ್ರಹ ಘಟಕದಲ್ಲಿ ಪ್ರಾಣಿಗಳನ್ನು ಹೂಳಲಾಗುತ್ತದೆ. ನಿತ್ಯ 200 ರಿಂದ 250 ಕೆಜಿ ತೂಕದವರೆಗೆ ಮೃತ ಪ್ರಾಣಿಗಳನ್ನು ದಹಿಸುವ ಸಾಮರ್ಥ್ಯ ಹೊಂದಿರುವ ವಿದ್ಯುತ್ ಚಿತಾಗಾರ ನಿರ್ವಿುಸಲು ಮಹಾನಗರ ಪಾಲಿಕೆ ಯೋಜನೆ ರೂಪಿಸಿದೆ.

    ಹೆಚ್ಚು ವಿದ್ಯುತ್ ಉಷ್ಣ ನೀಡಿ ಮೃತ ಪ್ರಾಣಿಗಳನ್ನು ದಹಿಸುವುದಕ್ಕಾಗಿ ಅವಳಿನಗರದ ತ್ಯಾಜ್ಯ ಸಂಗ್ರಹ ಘಟಕದಲ್ಲಿ ಚಿತಾಗಾರ ನಿರ್ವಿುಸಲಾಗುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಮೃತ ಪ್ರಾಣಿಗಳ ದಹಿಸುವ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ. ಅದೇ ಮಾದರಿಯಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿಯೂ ಪ್ರಾಣಿಗಳ ಚಿತಾಗಾರ ನಿರ್ವಿುಸಲು ಉದ್ದೇಶಿಸಲಾಗಿದೆ.

    | ಡಾ. ರವಿ ಸಾಲಿಗೌಡರ, ಮಹಾನಗರ ಪಾಲಿಕೆಯ ಮುಖ್ಯ ಪಶು ವೈದ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts