More

    ಮಾಸ್ಕ್​ ವಿವಾದ : ಗ್ರಾಹಕನ ಮೇಲೆ ಗುಂಡು ಹಾರಿಸಿದ ಸೆಕ್ಯುರಿಟಿ ಗಾರ್ಡ್!

    ಬರೇಲಿ : ಮಾಸ್ಕ್​ ಹಾಕದ ಬಗ್ಗೆ ನಡೆದ ಚರ್ಚೆಯ ಹಿನ್ನೆಲೆಯಲ್ಲಿ ಬ್ಯಾಂಕ್​​ ಸೆಕ್ಯುರಿಟಿ ಗಾರ್ಡ್, ಗ್ರಾಹಕನ ಮೇಲೆ ಗುಂಡು ಹಾರಿಸಿರುವ ಆಘಾತಕಾರಿ ಪ್ರಸಂಗ ನಡೆದಿದೆ. ಉತ್ತರಪ್ರದೇಶದ ಬರೇಲಿಯ ಬ್ಯಾಂಕ್​ ಆಫ್​ ಬರೋಡಾದ ಜಂಕ್ಷನ್​ ರೋಡ್​ ಶಾಖೆಯಲ್ಲಿ ಈ ದುರ್ಘಟನೆ ನಡೆದಿದೆ.

    ರೈಲ್ವೇ ಇಲಾಖೆ ನೌಕರ ರಾಜೇಶ್ ಎಂಬುವರ ಕಾಲಿಗೆ ಬ್ಯಾಂಕ್​ ಸೆಕ್ಯುರಿಟಿ ಗಾರ್ಡ್​ ಕೇಶವಕುಮಾರ್ ಎಂಬುವರು ಗುಂಡು ಹಾರಿಸಿದ್ದಾರೆ. ಈರ್ವರ ನಡುವೆ ಮಾಸ್ಕ್​ ಧರಿಸದ ಬಗ್ಗೆ ವಾದವಿವಾದ ನಡೆದಿತ್ತು ಎನ್ನಲಾಗಿದೆ.

    ಬರೇಲಿಯ ಕೊತ್ವಾಲಿ ಠಾಣೆಯ ಪೊಲೀಸರು ಗಾರ್ಡ್​ ಕೇಶವ್​ಕುಮಾರ್​​ನನ್ನು ಬಂಧಿಸಿದ್ದಾರೆ. ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಗುಂಡು ಬಿದ್ದು ರಕ್ತ ಕಳೆದುಕೊಳ್ಳುತ್ತಿದ್ದ ರಾಜೇಶ್​ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. (ಏಜೆನ್ಸೀಸ್)

    ತುರ್ತುಪರಿಸ್ಥಿತಿಯ ಕರಾಳ ದಿನಗಳನ್ನ ಮರೆಯೋಕಾಗಲ್ಲ: ಪ್ರಧಾನಿ ಮೋದಿ

    ದೇಶದ್ರೋಹ ಪ್ರಕರಣ : ನಟಿ ಆಯಿಷಾ ಸುಲ್ತಾನಗೆ ನಿರೀಕ್ಷಣಾ ಜಾಮೀನು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts