More

    ಆಗಸ್ಟ್​ 15ರ ನಂತರ ರಾಷ್ಟ್ರಾದ್ಯಂತ ಶಾಲೆ-ಕಾಲೇಜು ಪುನರಾರಂಭ

    ನವದೆಹಲಿ: ಕೋವಿಡ್​-19 ಪಿಡುಗಿನ ಹಿನ್ನೆಲೆಯಲ್ಲಿ ರಾಷ್ಟ್ರಾದ್ಯಂತ ಅನಿರ್ದಿಷ್ಟಾವಧಿವರೆಗೆ ಮುಚ್ಚಲ್ಪಟ್ಟಿರುವ ಶಾಲೆ-ಕಾಲೇಜುಗಳು ಆಗಸ್ಟ್​ 15ರ ನಂತರದಲ್ಲಿ ಪುನರಾರಂಭಗೊಳ್ಳಲಿವೆ ಎಂದು ಮಾನವಸಂಪನ್ಮೂಲ ಸಚಿವ ರಮೇಶ್​ ಪೋಖ್ರಿಯಾಲ್​ ತಿಳಿಸಿದ್ದಾರೆ.

    ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ವಿಷಯ ತಿಳಿಸಿರುವ ಅವರು, ಆಗಸ್ಟ್​ 15ರ ವೇಳೆಗೆ ದೇಶದ ಎಲ್ಲ ಬೋರ್ಡ್​ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸಲಾಗುವುದು. ಆನಂತರದಲ್ಲಿ ಶಾಲೆ-ಕಾಲೇಜುಗಳನ್ನು ಪುನರಾರಂಭಿಸಲಾಗುವುದು ಎಂದು ಹೇಳಿದರು.

    ಇದನ್ನೂ ಓದಿ: ಸೆಪ್ಟೆಂಬರ್​ಗೆ ಸಿದ್ಧವಾಗಲಿದೆ ಕೋವಿಡ್​ ಚುಚ್ಚುಮದ್ದು, ಹೆಚ್ಚಿನ ಉತ್ಪಾದನೆಗೆ ಭಾರತದ ಸಾಥ್​

    ಕೋವಿಡ್​-19 ಪಿಡುಗಿನ ಹಿನ್ನೆಲೆಯಲ್ಲಿ ಮಾರ್ಚ್​ 16ರಿಂದ ರಾಷ್ಟ್ರಾದ್ಯಂತ ಶಾಲೆ-ಕಾಲೇಜುಗಳು ಮುಚ್ಚಲ್ಪಟ್ಟಿವೆ. ಇತ್ತೀಚೆಗೆ ಕೇಂದ್ರ ಸರ್ಕಾರ ದೇಶವನ್ನು ಅನ್​ಲಾಕ್​ ಮಾಡುತ್ತಾ ಮಾಲ್​, ದೇವಾಲಯಗಳು, ಹೋಟೆಲ್​, ಬಾರ್​ ಆ್ಯಂಡ್​ ರೆಸ್ಟೋರೆಂಟ್​ ಸೇರಿ ವಿವಿಧ ಸೌಲಭ್ಯಗಳ ಪುನರಾರಂಭಕ್ಕೆ ಹಸಿರು ನಿಶಾನೆ ತೋರಿದೆ.

    ಮೇ 30ರಂದು ಅನ್​ಲಾಕ್​ 1.0 ಘೋಷಿಸಿದ್ದ ಕೇಂದ್ರ ಗೃಹ ಸಚಿವಾಲಯ, ಶಾಲೆ-ಕಾಲೇಜು, ಶೈಕ್ಷಣಿಕ ಕೇಂದ್ರಗಳು, ಕೋಚಿಂಗ್​ ಮತ್ತು ತರಬೇತಿ ಸಂಸ್ಥೆಗಳ ಪುನರಾರಂಭದ ಬಗ್ಗೆ ಜುಲೈನಲ್ಲಿ ನಿರ್ಧರಿಸಲಾಗುವುದು. ಸೂಕ್ತ ಮಾರ್ಗಸೂಚಿ ರೂಪಿಸಿದ ನಂತರದಲ್ಲಿ ಅವುಗಳನ್ನು ಪುನರಾರಂಭಿಸಲಾಗುವುದು ಎಂದು ಹೇಳಿತ್ತು.

    ಅಳಿಯನ ಸಾವಿನ ಬೆನ್ನಲ್ಲೇ ಫೇಸ್​ಬುಕ್​ ಕವರ್​, ಪ್ರೊಫೈಲ್​ಗೆ ಕಪ್ಪು ಫೋಟೋ ಅಪ್ಲೋಡ್ ಮಾಡಿದ ಅರ್ಜುನ್​ ಸರ್ಜಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts