ಉತ್ತರಕನ್ನಡ: ರಾಜ್ಯದಲ್ಲಿ ಈಗಾಗಲೇ ಕೆಲವು ಕೋ-ಆಪರೇಟಿವ್ ಬ್ಯಾಂಕ್ಗಳ ಅವ್ಯವಹಾರ ಬೆಳಕಿಗೆ ಬಂದಿದ್ದು, ಮತ್ತಷ್ಟು ಬ್ಯಾಂಕ್ಗಳ ವಹಿವಾಟು ಕುರಿತಂತೆ ಊಹಾಪೋಹಗಳು ಕೇಳಿ ಬರುತ್ತಿವೆ. ಈ ಮಧ್ಯೆ ಇನ್ನೊಂದು ಸಹಕಾರಿ ಸಂಘದಲ್ಲಿ ಅವ್ಯವಹಾರ ಆಗಿರಬಹುದು ಎನ್ನುವಂಥ ಅನುಮಾನ ಮೂಡಿಸುವ ಬೆಳವಣಿಗೆ ನಡೆದಿದೆ.
ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಅಭ್ಯುದಯ ಮಹಿಳಾ ಪತ್ತಿನ ಸಹಕಾರಿ ಸಂಘ ನಿಯಮಿತಕ್ಕೆ ಸಂಬಂಧಿಸಿದಂತೆ ಇಂಥದ್ದೊಂದು ಬೆಳವಣಿಗೆ ನಡೆದಿದೆ. ಈ ಸಂಘದ ಅಧ್ಯಕ್ಷರು ಹಾಗೂ ಸದಸ್ಯರೇ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ರೈಲೊಳಗೆ ಎಸ್ಐ ಸೇರಿ ನಾಲ್ವರನ್ನು ಗುಂಡಿಟ್ಟು ಕೊಂದ ಪೊಲೀಸ್ ಕಾನ್ಸ್ಟೆಬಲ್!
ಇಂದು ಸಹಕಾರಿ ಸಂಘದ ನೂತನ ಸಮಿತಿ ಸಭೆ ಕರೆದಿದ್ದು, ಅಲ್ಲಿ ಸಂಘದ ಪ್ರಧಾನ ವ್ಯವಸ್ಥಾಪಕಿ ಸಭೆಯ ನಡಾವಳಿ ಪುಸ್ತಕ ನೀಡದ ಹಿನ್ನೆಲೆಯಲ್ಲಿ ಈ ಎಲ್ಲ ಬೆಳವಣಿಗೆ ನಡೆದಿದೆ. ನಡಾವಳಿ ಪುಸ್ತಕ ನೀಡದ ಆಕೆ, ಸಂಘದ ಕಟ್ಟಡದ ಬೀಗ ಹಾಕಿ ಹೊರ ನಡೆದಿದ್ದಾರೆ. ಸಂಘದ ಅವ್ಯವಹಾರ ಬಯಲಾಗುವ ಭೀತಿಯಿಂದ ಆಕೆ ನಡಾವಳಿ ಪುಸ್ತಕ ನೀಡದೆ ಹೋಗಿದ್ದಾರೆ ಎಂದು ನೂತನ ಅಧ್ಯಕ್ಷೆ ನಯನಾ ನಾಯ್ಕ ಆರೋಪಿಸಿದ್ದಾರೆ.
ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!