ತಿರುವನಂತಪುರಂ: ಕೇರಳದ ತಿರುವಾಂಕೂರು ದೇವಸ್ವಂ ಬೋರ್ಡ್ನಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರನ್ನೂ ಪಾರ್ಟ್ ಟೈಮ್ ಅರ್ಚಕರನ್ನಾಗಿ ನೇಮಿಸುವ ಐತಿಹಾಸಿಕ ನಿರ್ಧಾರವನ್ನು ಕೇರಳ ಸರ್ಕಾರ ಕೈಗೊಂಡಿದೆ.
ಪರಿಶಿಷ್ಟ ಜಾತಿಯ 18 ಹಾಗೂ ಪರಿಶಿಷ್ಟ ಪಂಗಡದ ಒಬ್ಬರನ್ನು ತಿರುವಾಂಕೂರು ದೇವಸ್ವಂ ಮಂಡಳಿಯಲ್ಲಿ ಪಾರ್ಟ್ ಟೈಮ್ ಅರ್ಚಕರನ್ನಾಗಿ ನೇಮಿಸಿಕೊಳ್ಳಲು ಸರ್ಕಾರ ಶಿಫಾರಸು ಮಾಡಿದೆ ಎಂದು ಸಚಿವ ಕಡಕಂಪಳ್ಳಿ ಸುರೇಂದ್ರನ್ ತಿಳಿಸಿದ್ದಾರೆ.
2017ರ ಆ. 23ರಂದು ಪ್ರಕಟವಾಗಿದ್ದ ರ್ಯಾಂಕ್ ಲಿಸ್ಟ್ ಪ್ರಕಾರ ತಿರುವಾಂಕೂರು ದೇವಸ್ವಂ ಮಂಡಳಿಯಲ್ಲಿ ಇದುವರೆಗೆ 310 ಜನರನ್ನು ಪಾರ್ಟ್ ಟೈಮ್ ಅರ್ಚಕರನ್ನಾಗಿ ನೇಮಿಸಿಕೊಳ್ಳಲಾಗಿತ್ತು. ಆದರೆ ಆ ಸಮಯದಲ್ಲಿ ಪರೀಕ್ಷೆಗೆ ಎಸ್ಸಿ-ಎಸ್ಟಿ ಕೆಟಗರಿಯಿಂದ ಸಾಕಷ್ಟು ಅಭ್ಯರ್ಥಿಗಳು ಬಂದಿರಲಿಲ್ಲ.
ಎಲ್ಡಿಎಫ್ ಸರ್ಕಾರ ರಚನೆಯಾದ ಬಳಿಕ ನೇಮಕ ಮಂಡಳಿಯನ್ನು ಮರು ರಚಿಸಿದ್ದು, ತಿರುವಾಂಕೂರು, ಕೊಚಿನ್ ಮತ್ತು ಮಲಬಾರ್ ದೇವಸ್ವಂ ಬೋರ್ಡ್ಗಳ ವಿವಿಧ ಹುದ್ದೆಗಳಿಗೆ ಸುಮಾರು 815 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)