ಟೊರೊಂಟೋ: ಸೌದಿ ಅರೇಬಿಯಾದ ಯುವರಾಜ ಮಹಮ್ಮದ್ ಬಿನ್ ಸಲ್ಮಾನ್ ವಿರುದ್ಧ ಮತ್ತೊಂದು ಕೊಲೆ ಯತ್ನದ ಆರೋಪ ಕೇಳಿ ಬಂದಿದೆ.
ತನ್ನ ವಿರೋಧಿ ರಾಜಕುಮಾರನ ಗುಪ್ತಚರ ವಿಭಾಗದ ಪ್ರಮುಖನೊಬ್ಬನನ್ನು ಕೊಲ್ಲಿಸಲು 50 ಜನರನ್ನು ಕಳುಹಿಸಿದ್ದರು ಎಂದು ಕೋರ್ಟ್ಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಹೇಳಲಾಗಿದೆ.
ಸೌದಿ ಯುವರಾಜಕುಮಾರ ಮಹಮ್ಮದ್ ಬಿನ್ ಸಲ್ಮಾನ್ ಹಾಗೂ ರಾಜಕುಟುಂಬದ ಪ್ರಮುಖ ಮಹಮ್ಮದ್ ಬಿನ್ ನಯೀಫ್ ನಡುವಣ ವೈರತ್ವ ಹೊಸದೇನಲ್ಲ ಎಂದು ಹೇಳಲಾಗಿದೆ. ಈ ಕಾರಣಕ್ಕಾಗಿಯೇ ಆತನ ಗುಪ್ತಚರ ವಿಭಾಗದ ಪ್ರಮುಖ ಸಾದ್ ಅಲ್ಜಬ್ರಿಯನ್ನು ಹತ್ಯೆ ಮಾಡಲು ಟೈಗರ್ ಸ್ಕ್ವಾಡ್ನ 50 ಜನರನ್ನು ಕೆನಡಾಗೆ ಕಳುಹಿಸಿದ್ದ ಎಂದು ಟೊರಂಟೋ ಕೋರ್ಟ್ಗೆ ಸಲ್ಲಿಸಿದ ದಾಖಲೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ; ಎರಡು ಮದುವೆಗಳಿಂದ 1.5 ಕೋಟಿ ರೂ. ಕಮಾಯಿ; ಮೂರನೇ ಮದುವೆಯಾಗಿ ವಿದೇಶಕ್ಕೆ ಹಾರಬೇಕಿದ್ದ ವಧುವಿಗೆ ಕೈಕೊಟ್ಟಿದ್ದೇನು ?
ಟರ್ಕಿ ರಾಜಧಾನಿ ಇಸ್ತಾನ್ಬುಲ್ನಲ್ಲಿರುವ ಸೌದಿ ರಾಯಭಾರ ಕಚೇರಿಯಲ್ಲಿ ಪತ್ರಕರ್ತ ಜಮಾಲ್ ಖಸ್ತೋಗಿಯನ್ನು ಹತ್ಯೆ ಮಾಡಿಸಿದ ಆರೋಪವೂ ಸೌದಿ ಯುವರಾಜನ ಮೇಲಿದೆ.
ಖಸ್ತೋಗಿಯನ್ನು ಹತ್ಯೆಗೈದ ಒಂದು ವಾರದಲ್ಲಿಯೇ ತನ್ನನ್ನು ಹತ್ಯೆ ಮಾಡಲು 50 ಜನರನ್ನು ಸೌದಿ ಯುವರಾಜ ಕಳುಹಿಸಿದ್ದ ಎಂದು ಕೋರ್ಟ್ಗೆ ನೀಡಿದ ದಾಖಲೆಯಲ್ಲಿ ಸಾದ್ ಅಲ್ಜಬ್ರಿ ಹೇಳಿಕೆ ನೀಡಿದ್ದಾನೆ.
ಇದನ್ನೂ ಓದಿ; ರಿಯಾಳಿಂದ 2 ಐಷಾರಾಮಿ ಫ್ಲ್ಯಾಟ್ಸ್ ಖರೀದಿ; ವಿಚಾರಣೆಗೆ ಬಂದಿದ್ದು ಯಾರ ಕಾರಿನಲ್ಲಿ?; ಇ.ಡಿಯಿಂದ ಬಯಲಾಗಲಿದೆ ಸತ್ಯ
ತನ್ನ ಲೋಕೇಷನ್ ಪತ್ತೆ ಹಚ್ಚಿದ ಹತ್ಯೆಕೋರರು ಕೆನಡಾಕ್ಕೆ ಬರುತ್ತಿದ್ದಾಗ ಅಮೆರಿಕ- ಕೆನಡಾ ಗಡಿಭಾಗದಲ್ಲಿ ಕೆನಡಾ ಪೊಲೀಸರಿಂದ ಬಂಧನಕ್ಕೊಳಗಾದರು ಎಂದು ಜಬ್ರಿ ಹೇಳಿದ್ದಾನೆ.
ಸೆ.1ರಿಂದ ಶಾಲಾ- ಕಾಲೇಜು ಆರಂಭ ಪ್ರಕ್ರಿಯೆ; ಅರ್ಧದಷ್ಟು ಮಕ್ಕಳು, ಶಿಕ್ಷಕರಿಗಷ್ಟೇ ಅವಕಾಶ; ಹೀಗಿರಲಿದೆ ಮಾರ್ಗಸೂಚಿ?