More

    ಸರ್ವಜ್ಞ ವಿದ್ಯಾಪೀಠ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

    ತಾಳಿಕೋಟೆ: ಪಟ್ಟಣದ ಸರ್ವಜ್ಞ ವಿದ್ಯಾಪೀಠ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಯಲ್ಲಿ ಭಾಗವಹಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

    ಗುರುವಾರ ನಡೆದ ಹಾಸ್ಯ ಸ್ಪರ್ಧೆಯಲ್ಲಿ ಓಂಕಾರ ಸಂಬಾಳ ಪ್ರಥಮ, ಸ್ಪಂದನಾ ಶೆಟ್ಟಿ ಭಕ್ತಿಗೀತೆಯಲ್ಲಿ ಪ್ರಥಮ, ಮುಮ್‌ತಾಜ್ ದೊಡಮನಿ ಹಿಂದಿ ಕಂಠಪಾಠದಲ್ಲಿ ದ್ವಿತೀಯ, ಖುಷಿ ಪಾಟೀಲ ಚಿತ್ರಕಲೆ ಸ್ಪರ್ಧೆಯಲ್ಲಿ ದ್ವಿತೀಯ, ವೀರೇಶ ಚೌದ್ರಿ ಛದ್ಮವೇಷದಲ್ಲಿ ದ್ವಿತೀಯ, ಸುರಭಿ ಪಾಟೀಲ ಲಘು ಸಂಗೀತದಲ್ಲಿ ತೃತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

    ವಿದ್ಯಾರ್ಥಿಗಳ ಸಾಧನೆಗೆ ಶಾಲೆ ಅಧ್ಯಕ್ಷ ಸಿದ್ದನಗೌಡ ಮಂಗಳೂರ, ಮುಖ್ಯಗುರು ಸಂತೋಷ ಪವಾರ, ದೈಹಿಕ ಶಿಕ್ಷಕ ಬಸವರಾಜ ಚಳ್ಳಗಿ, ಶಾಂತಗೌಡ ಬಿರಾದಾರ, ಬಸವರಾಜ ಸವದತ್ತಿ, ರುದ್ರಗೌಡ ಮಾಲಿಪಾಟೀಲ, ರವಿಕುಮಾರ ಮಲ್ಲಾಬಾದಿ, ಶಿವಲೀಲಾ ಚುಂಚುರ, ಶಿವಲೀಲಾ ಕೆಂಭಾವಿ, ರೇಣುಕಾ ಮಸರಕಲ್ಲ, ಭಾರತಿ, ರೂಪಾ ಪಾಟೀಲ ಹಾಗೂ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts