ಡೆಹ್ರಾಡೂನ್ : ಉತ್ತರಾಖಂಡದಲ್ಲಿ ಸತತ ಮಳೆಯಿಂದಾಗಿ ಶಾರದಾ ನದಿಯು ಉಕ್ಕಿ ಹರಿಯುತ್ತಿದೆ. ಊರುಕೇರಿ, ರಸ್ತೆಗಳಿಗೆ ನೀರು ನುಗ್ಗುತ್ತಾ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಈ ನಡುವೆ ಸ್ಥಳೀಯ ಆಡಳಿತವರ್ಗ ಮತ್ತು ಪೊಲೀಸರು ಜನರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ.
#WATCH | Uttarakhand: 9 members of the family of a labourer, who were stranded on a truck in Sarda River in Tanakpur of Champawat district, were rescued by the local administration, SDRF and Police. The water level of the river has risen due to incessant rainfall. pic.twitter.com/mQDiHzHkoC
— ANI (@ANI) May 21, 2021
ಒಬ್ಬ ಕಾರ್ಮಿಕನ ಕುಟುಂಬದ 9 ಜನರು ಟ್ರಕ್ ಒಂದರ ಮೇಲೆ ಪ್ರಯಾಣಿಸುತ್ತಿದ್ದ ವೇಳೆ ಚಂಪಾವತ್ ಜಿಲ್ಲೆಯ ತನಕಪುರದಲ್ಲಿ ಶಾರದಾ ನದಿಯಲ್ಲಿ ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ. ನೀರಿನ ಮಧ್ಯದಲ್ಲಿದ್ದ ಅವರನ್ನು ಸ್ಥಳೀಯ ಆಡಳಿತ, ಎಸ್ಡಿಆರ್ಎಫ್ ಮತ್ತು ಪೊಲೀಸರ ಸಹಾಯದೊಂದಿಗೆ ಪಾರು ಮಾಡಿದೆ. ಎಎನ್ಐ ಸುದ್ದಿ ಸಂಸ್ಥೆ ಶೇರ್ ಮಾಡಿರುವ ಈ ವಿಡಿಯೋದಲ್ಲಿ ನೀರಿನ ಹರಿವಿನ ವೇಗ ನೋಡಬಹುದು. (ಏಜೆನ್ಸೀಸ್)
250 ರೂ.ಗೆ ಮನೆಯಲ್ಲೇ ಕರೊನಾ ಪರೀಕ್ಷೆ ! ರಾಪಿಡ್ ಆ್ಯಂಟಿಜನ್ ಹೋಂ ಟೆಸ್ಟ್ ಕಿಟ್ ಬಳಕೆಗೆ ಹಸಿರು ನಿಶಾನೆ