More

    ನವಯುಗದಿಂದ ಎಲ್ಲ ಚುನಾವಣೆಯಲ್ಲೂ ಸ್ಪರ್ಧೆ; ಸಂತೋಷಕುಮಾರ ಪಾಟೀಲ

    ರಾಣೆಬೆನ್ನೂರ: ಧಾರವಾಡ ಕೆಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನವಯುಗ ಬೆಂಬಲಿತ ಅಭ್ಯರ್ಥಿ ಹನುಮಂತರಾಜ ಶೇ. 7.50ರಷ್ಟು ಮತಗಳಿಸಿದ್ದಾರೆ. ಮುಂದಿನ ದಿನದಲ್ಲಿ ನವಯುಗ ತಂಡದ ವತಿಯಿಂದ ತಾಪಂ, ಜಿಪಂ ಚುನಾವಣೆಗೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು ಎಂದು ಜಿಪಂ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ ಹೇಳಿದರು.
    ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಮತದಾರರು ಶೇ. 7.50ರಷ್ಟು ಮತ ನೀಡಿದ್ದಾರೆ ಎಂದರೆ ವಿಧಾನಸಭೆ ಚುನಾವಣೆಯ ನಂತರದಲ್ಲಿ ನವಯುಗ ಪ್ರಣಾಳಿಕೆಗೆ ಜನತೆ ಮನ್ನಣೆ ನೀಡುತ್ತಿದ್ದಾರೆ ಎಂದರ್ಥ.
    ಮುಂದಿನ ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಬಹಳಷ್ಟು ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿಕೊಂಡು ಸಂಘಟನೆ ಮಾಡಲಾಗುವುದು. ವಿಧಾನಸಭೆ ಕ್ಷೇತ್ರದ ಪ್ರತಿಯೊಂದು ಬೂತ್‌ನಲ್ಲಿ ನವಯುಗದ ಮುಖಂಡರನ್ನು ಬೆಳೆಸಲಾಗುವುದು ಎಂದರು.
    ಪ್ರಮುಖರಾದ ಯುವರಾಜ ಬಾರಾಟಕ್ಕೆ, ಸೋಮಶೇಖರ ಹಲಗೇರಿ, ಗಣೇಶ ನಾಡಿಗೇರ, ಪ್ರಕಾಶ ಹರಿಯಾಳದವರ, ಕುಬೇರಪ್ಪ ಅಟವಾಳಗಿ, ಸಿದ್ದನಗೌಡ ಪಾಟೀಲ, ಗಂಗಾಧರ ಬೂದನೂರ, ಬಸವರಾಜ ಕುರವತ್ತಿ, ಚಂದ್ರು ನಾಯಕ, ಬಸವರಾಜ ಕರೂರ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts