More

    ಮಧ್ಯಪ್ರದೇಶದ ವೈರಸ್​ ಮಹಾರಾಷ್ಟ್ರಕ್ಕೆ ಬರಲು ಸಾಧ್ಯವೇ ಇಲ್ಲ: ಸರ್ಕಾರದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಸಂಜಯ್​ ರಾವತ್​

    ಮುಂಬೈ: ಕರೊನಾ ವೈರಸ್​ ದೇಶದ ಜನರಿಗೆ ಯಮರೂಪಿಯಾಗಿ ಕಾಡಲಾರಂಭಿಸಿದೆ. ಆದರೆ ಮಧ್ಯಪ್ರದೇಶದ ಕಾಂಗ್ರೆಸ್​ಗೆ ಮಾತ್ರ ಕರೊನಾಕ್ಕಿಂತ ಭಯಾನಕವಾಗಿ ಬಿಜೆಪಿ ಕಾಡಲಾಂಭಿಸಿದೆ. ಕಾಂಗ್ರೆಸ್​ನ ಮಾಜಿ ಕೇಂದ್ರ ಸಚಿವಾ ಜ್ಯೋತಿರಾದಿತ್ಯ ಸಿಂಧ್ಯಾ ಸೇರಿದಂತೆ ಒಟ್ಟು 22 ಶಾಸಕರು ಕೈಗೆ ಕೈ ಕೊಟ್ಟು ಪಕ್ಷದಿಂದ ಹೊರನಡೆದಿದ್ದಾರೆ. ಶಾಸಕರ ಈ ನಡೆಗೆ ಅಕ್ಕ ಪಕ್ಕದ ರಾಜ್ಯಗಳಲ್ಲಿಯೂ ಸಹ ಭಯ ಹುಟ್ಟಿದ್ದು, ನೆರೆ ರಾಜ್ಯಗಳು ತಮ್ಮ ಸರ್ಕಾರದ ಬಲವನ್ನು ಸಮರ್ಥಿಸಿಕೊಳ್ಳಲಾರಂಭಿಸಿದ್ದಾರೆ.

    ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್​ ಪಕ್ಷಗಳ ಮೈತ್ರಿ ಆಡಳಿತದಲ್ಲಿದೆ. ತಮ್ಮ ಮೈತ್ರಿ ಸರ್ಕಾರದ ಬಲದ ಕುರಿತಾಗಿ ಇಂದು ಶಿವಸೇನೆಯ ಮುಖಂಡ ಸಂಜಯ್​ ರಾವತ್​ ಮಾತನಾಡಿದ್ದಾರೆ. ಮಧ್ಯಪ್ರದೇಶದ ವೈರಸ್​ ಮಹಾರಾಷ್ಟ್ರಕ್ಕೆ ಬರಲು ಸಾಧ್ಯವಿಲ್ಲ. ಇಲ್ಲಿನ ಶಕ್ತಿ ವಿಭಿನ್ನವಾಗಿದೆ ಎಂದು ಅವರು ತಿಳಿಸಿದ್ದಾರೆ.

    ನೂರು ದಿನಗಳ ಹಿಂದೆ ಇದೇ ರೀತಿಯ ತಂತ್ರ ಇಲ್ಲಿ ನಡೆದಿದ್ದು, ಆ ತಂತ್ರ ವಿಫಲವಾಗಿದೆ. ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಾಚರಣೆಗಳು ನಮ್ಮನ್ನು ಉಳಿಸಿದೆ ಎಂದು ಅವರು ಟ್ವಿಟ್ಟರ್​ನಲ್ಲಿ ಹೇಳಿದ್ದಾರೆ.

    ಕಾಂಗ್ರೆಸ್​ನ ಮಾಜಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಸೋಮವಾರ ರಾತ್ರಿ ಕಾಂಗ್ರೆಸ್​ ಪಕ್ಷಕ್ಕೆ ರಾಜೀನಾಮೆ ನೀಡಿರುವುದಾಗಿ ಮಂಗಳವಾರದಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಮಾಜಿ ಸಚಿವನ ರಾಜೀನಾಮೆಯ ಬೆನ್ನಲ್ಲೇ 21 ಶಾಸಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. (ಏಜೆನ್ಸೀಸ್)

    ‘ಕೈ’ ಬಿಡಿಸಿಕೊಂಡು ಹೋಗಿ ‘ಕಮಲ’ ಹಿಡಿದ ಜ್ಯೋತಿರಾದಿತ್ಯ ಸಿಂಧಿಯಾ…ಅಂತೂ ಬಿಜೆಪಿಗೆ ಸೇರ್ಪಡೆಯಾಗಿಯೇ ಬಿಟ್ಟರು…

    ಪ್ರಪಂಚದ ಕೊನೆಯ ಬಿಳಿ ಜಿರಾಫೆಯ ಕುಟುಂಬವೀಗ ಬರಿದು: ಕಳ್ಳ ಬೇಟೆಗಾರರಿಗೆ ಬಲಿಯಾದ ತಾಯಿ-ಮಗು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts