ಜೈಪುರ: ನಿನ್ನೆ (ಏ.22) ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಬಹುದಿನಗಳ ನಂತರ ಕಮ್ಬ್ಯಾಕ್ ಮಾಡಿದ ಆರ್ಆರ್ ವೇಗಿ ಸಂದೀಪ್ ಶರ್ಮಾ, ತನಗೆ ಕೊಟ್ಟ 4 ಓವರ್ಗಳಲ್ಲಿ ಕೇವಲ 18 ರನ್ ಕೊಟ್ಟು, ಬರೋಬ್ಬರಿ ಐದು ವಿಕೆಟ್ಗಳನ್ನು ಕಬಳಿಸುವ ಮೂಲಕ ತಂಡಕ್ಕೆ ಆಸರೆಯಾಗುವುದರ ಜತೆಗೆ ಕ್ರಿಕೆಟ್ ಅಭಿಮಾನಿಗಳ ಹುಬ್ಬೇರಿಸಿದರು.
ಇದನ್ನೂ ಓದಿ: ಸಂವಿಧಾನವನ್ನು ನಮ್ಮ ಮೇಲೆ ಬಲವಂತವಾಗಿ ಹೇರಲಾಗಿದೆ: ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡು 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 179 ರನ್ಗಳನ್ನು ಕಲೆಹಾಕುವಲ್ಲಿ ಶಕ್ತವಾಯಿತು. ಈ ಸಾಧಾರಣ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ ಪಡೆಗೆ ಆರಂಭಿಕ ಹಂತದಲ್ಲೇ ಜಾಸ್ ಬಟ್ಲರ್ ವಿಕೆಟ್ ಕಳೆದುಕೊಂಡಿದ್ದು ಬಿಟ್ಟರೆ ಇನ್ಯಾವ ವಿಕೆಟ್ ಕಳೆದುಕೊಳ್ಳದೆ, ಅತ್ಯಂತ ‘ಯಶಸ್ವಿ’ಯಾಗಿ 8 ಬಾಲ್ಗಳಿಗೂ ಮುನ್ನವೇ ಪಂದ್ಯವನ್ನು ವಶಪಡಿಸಿಕೊಂಡಿತು. ತನ್ನ ತಂಡಕ್ಕೆ ಭರ್ಜರಿ ಕೊಡುಗೆ ನೀಡಿದ್ದು, 60 ಎಸೆತಗಳಲ್ಲಿ ಅಜೇಯ 104 ರನ್ ಸಿಡಿಸಿದ ಜೈಸ್ವಾಲ್ ಮಾತ್ರ. ಆರ್ಆರ್ ಪರ ಸೂಪರ್ಸ್ಟಾರ್ ಆಗಿ ಮಿಂಚಿದ್ದು, ಯಶಸ್ವಿ ಮತ್ತು ಸಂದೀಪ್.
ಬೌಲಿಂಗ್ನಲ್ಲಿ ಮುಂಬೈ ಇಂಡಿಯನ್ಸ್ ಬ್ಯಾಟ್ಸ್ಮನ್ಗಳನ್ನು ಕಟ್ಟಿಹಾಕಿದ ಸಂದೀಪ್ ಶರ್ಮಾ, ಇಂಜುರಿಯ ಕಾರಣದಿಂದ ಈ ಸೀಸನ್ನಲ್ಲಿ ತಂಡದಿಂದ ಹೊರಗುಳಿದಿದ್ದರು. ಚೇತರಿಕೆಯ ಬಳಿಕ ನಿನ್ನೆ ನಡೆದ ಮುಂಬೈ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದರು. ಇದು ಈ ಸೀಸನ್ನಲ್ಲಿ ಸಂದೀಪ್ ಆಡಿದ ಮೊದಲ ಪಂದ್ಯವಾಗಿದ್ದೇ ಆದರೂ ಅತ್ಯುತ್ತಮ ಕಮ್ಬ್ಯಾಕ್ ಮಾಡಿದ್ದು ಮಾತ್ರ ನೋಡುಗರ ಕಣ್ಮನಸೆಳೆಯಿತು. ಈ ಪಂದ್ಯವು ಸಹ ರೋಚಕವಾಗಿ ಮೂಡಿಬಂದಿತು. ಸದ್ಯ ಈ ಖುಷಿಯ ಬಗ್ಗೆ ಮಾತನಾಡಬೇಕಿದ್ದ ಸಂದೀಪ್ ಶರ್ಮಾ, ಅದರ ಹಿಂದಿದ್ದ ನೋವಿನ ಸಂಗತಿಯೊಂದನ್ನು ಮುಕ್ತವಾಗಿ ಹಂಚಿಕೊಂಡರು.
ಇದನ್ನೂ ಓದಿ: ಸಾಲ ಮರುಪಾವತಿ ಮಾಡಲು ವಿಫಲ; ಮಹಿಳೆಯ ಕಪಾಳಕ್ಕೆ ಹೊಡೆದು, ಸ್ಥಳದಿಂದ ಕಾಲ್ಕಿತ್ತ ಬ್ಯಾಂಕ್ ಸಿಬ್ಬಂದಿ!
ಎರಡು ವರ್ಷಗಳ ಹಿಂದೆ ನಾನು ಐಪಿಎಲ್ ಆಕ್ಷನ್ನಲ್ಲಿ ಅನ್ಸೋಲ್ಡ್ ಆಟಗಾರನಾಗಿ ಹೊರಹೊಮ್ಮಿದೆ. ಆದರೂ ಸಹ ರಿಪ್ಲೇಸ್ಮೆಂಟ್ ಬೌಲರ್ ಆಗಿ ಆರ್ಆರ್ ಪರ ಆಡುವುದು ನನಗೆ ಖುಷಿ ತಂದಿದೆ. ಸದ್ಯ ಮುಂಬರುವ ಪ್ರತಿ ಪಂದ್ಯವನ್ನು ಆನಂದಿಸುವ ಬಗ್ಗೆ ಹೆಚ್ಚು ಆಸಕ್ತಿ ಇದೆ ಎಂದು ಸಂದೀಪ್ ಶರ್ಮಾ ಹೇಳಿಕೊಂಡಿದ್ದಾರೆ,(ಏಜೆನ್ಸೀಸ್).
4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು