More

    ಏನೂ ನಡೆಯುತ್ತಿಲ್ಲ ಅನ್ನೋಕೆ ನಾವು ಸ್ವರ್ಗದಲ್ಲಿಲ್ಲ, ಅಲ್ವಸ್ವಲ್ಪ ಇದ್ದೇ ಇರುತ್ತೆ; ಸುದೀಪ್​

    ಕಿಚ್ಚ ಸುದೀಪ್​ ಡ್ರಗ್​ ಮಾಫಿಯಾ ಬಗ್ಗೆ ಮಾತನಾಡಿದ್ದಾರೆ. ಚಿತ್ರರಂಗದಲ್ಲಿ ಕೇಳಿಬರುತ್ತಿರುವ ಮಾತುಗಳಿಗೆ ಪ್ರತಿಕ್ರಿಯಿಸಿದ್ದಾರೆ. ನಿರ್ದೇಶಕ ಇಂದ್ರಜಿತ್​ ಲಂಕೇಶ್ ಜತೆ ತುಮಕೂರಿನ ಸಿದ್ಧಗಂಗಾ ಮಠಕಕೆ ಭೇಟಿ ಕೊಟ್ಟು ಮಾತನಾಡಿರುವ ಅವರು, ‘ಏನೂ ನಡೆಯುತ್ತಿಲ್ಲ ಅನ್ನೋಕೆ ನಾವು ಸ್ವರ್ಗದಲ್ಲಿಲ್ಲ, ಅಲ್ವಸ್ವಲ್ಪ ಇದ್ದೇ ಇರುತ್ತೆ’ ಎಂದಿದ್ದಾರೆ.

    ಇದನ್ನೂ ಓದಿ: ಸುದೀಪ್​ ವಿರುದ್ಧ ಪರೋಕ್ಷವಾಗಿ ಟಾಂಗ್​ ಕೊಟ್ರಾ ಚೇತನ್​?

    ‘ಚಿತ್ರರಂಗಕ್ಕೆ ಇದಕ್ಕಿಂತ ದೊಡ್ಡ ದೊಡ್ಡ ಗಂಡಾಂತರಗಳು ಬಂದೋಗಿವೆ. ಆವಾಗ ಆವಾಗ ಏನಾದರೊಂದು ಏಟು ಬಿಳ್ಳುತ್ತಲೇ ಇದೆ. ಟ್ಯಾಕ್ಸ್ ವಿಚಾರ ಇರಬಹುದು, ಭಾಷೆ ವಿಚಾರ ಎಲ್ಲವೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿವೆ. ಆ ಎಲ್ಲವನ್ನು ಎದುರಿಸಿ ಫೈಟ್ ಮಾಡಿ ಚಿತ್ರರಂಗ ಇಲ್ಲಿಯವರೆಗೂ ಬಂದಿದೆ. ಅದ್ಬುತವಾದ ಇಂಡಸ್ಟ್ರಿಯಾಗಿ ಬೆಳೆದು ನಿಂತಿದೆ. ಈ ಥರದ ಚಿಕ್ಕ ಚಿಕ್ಕ ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ. ಏನೂ ನಡೆಯುತ್ತಿಲ್ಲ ಅನ್ನೋಕೆ ನಾವು ಸ್ವರ್ಗದಲ್ಲಿಲ್ಲ, ಅಲ್ವಸ್ವಲ್ಪ ಇದ್ದೇ ಇರುತ್ತೆ’ ಎಂದು ಪ್ರತಿಕ್ರಿಯಿಸಿದ್ದಾರೆ.

    ಡ್ರಗ್ ಮಾಫಿಯಾ ಬಗ್ಗೆ ನಟ ಸುದೀಪ್ ಹೇಳಿದ್ದೇನು? | Actor Sudeep react on Sandalwood drug mafia

    ಡ್ರಗ್ ಮಾಫಿಯಾ ಬಗ್ಗೆ ನಟ ಸುದೀಪ್ ಹೇಳಿದ್ದೇನು? #ActorSudeep #Sandalwooddrugmafia #Tumkur

    Posted by Dighvijay News – ದಿಗ್ವಿಜಯ ನ್ಯೂಸ್ on Tuesday, September 1, 2020

    ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮ ಬೇಡ; ಅಭಿಮಾನಿಗಳಿಗೆ ಸುದೀಪ್​ ಮನವಿ

    ‘ಮೂರು ತಿಂಗಳ ಹಿಂದೆ ಕರೊನಾ ಎಂದಾಗ ಎಲ್ಲರೂ ಭಯದಲ್ಲೇ ಕಾಲಕಳೆದಿದ್ವಿ. ಇದೀಗ ಆ ಕಾಲ ಬದಲಾಗಿದೆ. ಭಯ ಬದಿಗಿಟ್ಟು, ಕರೊನಾವನ್ನೇ ಫೇಸ್​ ಮಾಡುತ್ತಿದ್ದೇವಲ್ಲ. ಸಿನಿಮಾದಲ್ಲಿ ನಾನು ಹೀರೋ ಇರಬಹುದು, ಆದರೆ, ನನಗೂ ಆ ಭಯ ಇದೆ. ನನಗೂ ಅಪ್ಪ, ಅಮ್ಮ, ಹೆಂಡತಿ ಮಕ್ಕಳಿದ್ದಾರೆ. ಎದುರಿಸಬೇಕು ಎಂಬ ದೃಷ್ಟಿಯಿಂದಲೇ ಶೂಟಿಂಗ್​ನಲ್ಲಿ ಪಾಲ್ಗೊಂಡಿದ್ದೇನೆ’ ಎಂದೂ ಹೇಳಿದ್ದಾರೆ.

    ಸುದೀಪ್​ ಮತ್ತು ಇಂದ್ರಜಿತ್​ ಒಟ್ಟಿಗೆ ಸಿದ್ಧಗಂಗಾ ಮಠಕ್ಕೆ ಭೇಟಿ!; ಇದರ ಹಿಂದಿನ ಮರ್ಮವೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts