ಕಿಚ್ಚ ಸುದೀಪ್ ಡ್ರಗ್ ಮಾಫಿಯಾ ಬಗ್ಗೆ ಮಾತನಾಡಿದ್ದಾರೆ. ಚಿತ್ರರಂಗದಲ್ಲಿ ಕೇಳಿಬರುತ್ತಿರುವ ಮಾತುಗಳಿಗೆ ಪ್ರತಿಕ್ರಿಯಿಸಿದ್ದಾರೆ. ನಿರ್ದೇಶಕ ಇಂದ್ರಜಿತ್ ಲಂಕೇಶ್ ಜತೆ ತುಮಕೂರಿನ ಸಿದ್ಧಗಂಗಾ ಮಠಕಕೆ ಭೇಟಿ ಕೊಟ್ಟು ಮಾತನಾಡಿರುವ ಅವರು, ‘ಏನೂ ನಡೆಯುತ್ತಿಲ್ಲ ಅನ್ನೋಕೆ ನಾವು ಸ್ವರ್ಗದಲ್ಲಿಲ್ಲ, ಅಲ್ವಸ್ವಲ್ಪ ಇದ್ದೇ ಇರುತ್ತೆ’ ಎಂದಿದ್ದಾರೆ.
ಇದನ್ನೂ ಓದಿ: ಸುದೀಪ್ ವಿರುದ್ಧ ಪರೋಕ್ಷವಾಗಿ ಟಾಂಗ್ ಕೊಟ್ರಾ ಚೇತನ್?
‘ಚಿತ್ರರಂಗಕ್ಕೆ ಇದಕ್ಕಿಂತ ದೊಡ್ಡ ದೊಡ್ಡ ಗಂಡಾಂತರಗಳು ಬಂದೋಗಿವೆ. ಆವಾಗ ಆವಾಗ ಏನಾದರೊಂದು ಏಟು ಬಿಳ್ಳುತ್ತಲೇ ಇದೆ. ಟ್ಯಾಕ್ಸ್ ವಿಚಾರ ಇರಬಹುದು, ಭಾಷೆ ವಿಚಾರ ಎಲ್ಲವೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿವೆ. ಆ ಎಲ್ಲವನ್ನು ಎದುರಿಸಿ ಫೈಟ್ ಮಾಡಿ ಚಿತ್ರರಂಗ ಇಲ್ಲಿಯವರೆಗೂ ಬಂದಿದೆ. ಅದ್ಬುತವಾದ ಇಂಡಸ್ಟ್ರಿಯಾಗಿ ಬೆಳೆದು ನಿಂತಿದೆ. ಈ ಥರದ ಚಿಕ್ಕ ಚಿಕ್ಕ ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ. ಏನೂ ನಡೆಯುತ್ತಿಲ್ಲ ಅನ್ನೋಕೆ ನಾವು ಸ್ವರ್ಗದಲ್ಲಿಲ್ಲ, ಅಲ್ವಸ್ವಲ್ಪ ಇದ್ದೇ ಇರುತ್ತೆ’ ಎಂದು ಪ್ರತಿಕ್ರಿಯಿಸಿದ್ದಾರೆ.
ಡ್ರಗ್ ಮಾಫಿಯಾ ಬಗ್ಗೆ ನಟ ಸುದೀಪ್ ಹೇಳಿದ್ದೇನು? | Actor Sudeep react on Sandalwood drug mafia
ಡ್ರಗ್ ಮಾಫಿಯಾ ಬಗ್ಗೆ ನಟ ಸುದೀಪ್ ಹೇಳಿದ್ದೇನು? #ActorSudeep #Sandalwooddrugmafia #Tumkur
Posted by Dighvijay News – ದಿಗ್ವಿಜಯ ನ್ಯೂಸ್ on Tuesday, September 1, 2020
ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮ ಬೇಡ; ಅಭಿಮಾನಿಗಳಿಗೆ ಸುದೀಪ್ ಮನವಿ
‘ಮೂರು ತಿಂಗಳ ಹಿಂದೆ ಕರೊನಾ ಎಂದಾಗ ಎಲ್ಲರೂ ಭಯದಲ್ಲೇ ಕಾಲಕಳೆದಿದ್ವಿ. ಇದೀಗ ಆ ಕಾಲ ಬದಲಾಗಿದೆ. ಭಯ ಬದಿಗಿಟ್ಟು, ಕರೊನಾವನ್ನೇ ಫೇಸ್ ಮಾಡುತ್ತಿದ್ದೇವಲ್ಲ. ಸಿನಿಮಾದಲ್ಲಿ ನಾನು ಹೀರೋ ಇರಬಹುದು, ಆದರೆ, ನನಗೂ ಆ ಭಯ ಇದೆ. ನನಗೂ ಅಪ್ಪ, ಅಮ್ಮ, ಹೆಂಡತಿ ಮಕ್ಕಳಿದ್ದಾರೆ. ಎದುರಿಸಬೇಕು ಎಂಬ ದೃಷ್ಟಿಯಿಂದಲೇ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದೇನೆ’ ಎಂದೂ ಹೇಳಿದ್ದಾರೆ.
ಸುದೀಪ್ ಮತ್ತು ಇಂದ್ರಜಿತ್ ಒಟ್ಟಿಗೆ ಸಿದ್ಧಗಂಗಾ ಮಠಕ್ಕೆ ಭೇಟಿ!; ಇದರ ಹಿಂದಿನ ಮರ್ಮವೇನು?