More

    ಆಹಾರ ಪದಾರ್ಥ ಹಂಚಿದ ಸಂಚಾರಿ ವಿಜಯ್, ಶ್ರುತಿ ನಾಯ್ಡು

    ಕರೊನಾದಿಂದ ಇಡೀ ದೇಶ ಲಾಕ್‌ಡೌನ್ ಆದ ಹಿನ್ನೆಲೆಯಲ್ಲಿ ಆಹಾರ ಸಾಮಗ್ರಿಗಳಿಲ್ಲದೆ ಜನಸಾಮಾನ್ಯರು ಪರದಾಡುವಂತಹ ಪರಿಸ್ಥಿತಿ ಇದೆ. ಇಂಥ ಸಂದರ್ಭದಲ್ಲಿ ನಟ ಸಂಚಾರಿ ವಿಜಯ್, ಕಳೆದ ಒಂದು ವಾರದಿಂದ 200ಕ್ಕೂ ಹೆಚ್ಚು ಬಡಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ಒದಗಿಸಿದ್ದಾರೆ.

    ಈ ಕುರಿತು ಮಾತನಾಡುವ ಅವರು, ‘ಲಾಕ್‌ಡೌನ್ ಆದ ಸಂದರ್ಭದಲ್ಲಿ ಐದಾರು ಕುಟುಂಬಗಳಿಗೆ ನನ್ನ ಕೈಲಾದಷ್ಟು ಸಹಾಯ ಮಾಡುವುದಕ್ಕೆ ಯೋಚಿಸಿದ್ದೆ. ಈ ಕೆಲಸದಲ್ಲಿ ಸಮಾನಮನಸ್ಕರು ಕೈಜೋಡಿಸಿದರು. ಇದರಿಂದಾಗಿ ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ಸುಮಾರು 200 ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ಒದಗಿಸಿದ್ದೇನೆ. ಪ್ರತಿ ಕುಟುಂಬಕ್ಕೂ 5 ಕೆಜಿ ಅಕ್ಕಿ, 2 ಕೆಜಿ ಗೋಧಿ ಹಿಟ್ಟು, ಉಪ್ಪು, ಬೇಳೆ, ಸಕ್ಕರೆ, ಅಡುಗೆ ಎಣ್ಣೆ ತಲಾ ಒಂದೊಂದು ಕೆಜಿ ಕೊಡುತ್ತಿದ್ದೇವೆ. ಬೆಂಗಳೂರಷ್ಟೇ ಅಲ್ಲ, ಮಂಡ್ಯದಲ್ಲೂ ಐದಾರು ಕುಟುಂಬಗಳಿಗೆ ಸಹಾಯ ಮಾಡಿದ್ದೇವೆ. ಬರೀ ಆಹಾರ ಪದಾರ್ಥಗಳಷ್ಟೇ ಅಲ್ಲ, ಔಷಧಿಯನ್ನೂ ವಿತರಸಿದ್ದೇವೆ’ ಎನ್ನುತ್ತಾರೆ ವಿಜಯ್.

    ಒಂದು ಕಡೆ ವಿಜಯ್, ನಗರ ಪ್ರದೇಶಗಳಲ್ಲಿ ನೆರವಿನ ಹಸ್ತ ಚಾಚಿದರೆ, ನಟಿ-ನಿರ್ಮಾಪಕಿ ಶ್ರುತಿ ನಾಯ್ಡು ಅವರು ಕಾಡನ್ನೇ ನಂಬಿ ಬದುಕುತ್ತಿರುವ ಅನೇಕ ಬುಡಕಟ್ಟು ಕುಟುಂಬಗಳಿಗೆ ಸಹಾಯ ಮಾಡಿದ್ದಾರೆ. ನಂಜನಗೂಡಿನ ಸಮೀಪದ ಹಳ್ಳಿಗಳಾದ ಡೋರನಕಟ್ಟೆ, ಕೊಟ್ಟನಹಳ್ಳಿ ಮತ್ತು ಚಿಲಕಹಳ್ಳಿಯ 500 ಕುಟುಂಬಗಳ ಪೈಕಿ, ಅಗತ್ಯವಿರುವ 150 ಕುಟುಂಬಗಳಿಗೆ ಒಂದು ತಿಂಗಳಿಗಾಗುವಷ್ಟು ಅಗತ್ಯ ಆಹಾರ ಪದಾರ್ಥಗಳನ್ನು ಶ್ರುತಿ ನಾಯ್ಡು ಇತ್ತೀಚೆಗೆ ಹಂಚಿದ್ದಾರೆ.

    ರಶ್ಮಿಕಾ ನಟನೆಯ ಈ ಹಿಂದಿ ಸಿನಿಮಾ ಬರೋಬ್ಬರಿ 100 ಮಿಲಿಯನ್​ ವೀಕ್ಷಣೆ ಕಂಡಿದೆ ಅಂದರೆ ಅಚ್ಚರಿಯೇ ಸರಿ!!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts