ಬೆಂಗಳೂರು: ಅಚ್ಯುತ್ ಕುಮಾರ್ ಇತ್ತೀಚೆಗೆ ಹಲವು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಕೆಜಿಎಫ್ 2’, ‘ಫೋರ್ ವಾಲ್ಸ್’, ‘ಮಾನ್ಸೂನ್ ರಾಗ’, ‘ಕಾಂತಾರ’ ಮುಂತಾದ ಚಿತ್ರಗಳಲ್ಲಿ ಎಲ್ಲರ ಗಮನ ಸೆಳೆದಿರುವ ಅಚ್ಯುತ್, ಈಗ ಇನ್ನೊಂದು ಹೊಸ ಚಿತ್ರದ ಮೂಲಕ ಬರುವುದಕ್ಕೆ ತಯಾರಿ ನಡೆಸಿದ್ದಾರೆ. ಅದೇ ‘ಸದ್ದು ವಿಚಾರಣೆ ನಡೆಯುತ್ತಿದೆ’. ಈ ಚಿತ್ರವು ನ. 25ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದ್ದು, ಮೊದಲ ಹಂತವಾಗಿ ಟ್ರೇಲರ್ ಹೊರಬಂದಿದೆ.
ಇದನ್ನೂ ಓದಿ: ಥಾಯ್ಲೆಂಡ್ ಪ್ರವಾಸದಲ್ಲಿ ಮೇಘನಾ; ಸದ್ದು ಮಾಡುತ್ತಿವೆ ಹಾಟ್ ಫೋಟೋಗಳು!
ಭಾಸ್ಕರ್ ನೀನಾಸಂ ನಿರ್ದೇಶನದ ಈ ಚಿತ್ರವು ನೈಜ ಘಟನೆಯನ್ನು ಆಧರಿಸಿದೆಯಂತೆ. ಸಸ್ಪೆನ್ಸ್ ಥ್ರಿಲ್ಲರ್ ಕಥೆ ಇರುವ ಈ ಚಿತ್ರವನ್ನು ಭಾಸ್ಕರ್ ನೀನಾಸಂ ನಿರ್ದೇಶನ ಮಾಡುತ್ತಿರುವುದಷ್ಟೇ ಅಲ್ಲ, ಕಥೆ-ಚಿತ್ರಕಥೆಯನ್ನು ಸಹ ರಚಿಸಿದ್ದಾರೆ. ರಾಕೇಶ್ ಮಯ್ಯ, ಪಾವನ ಗೌಡ ನಾಯಕ-ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಅಚ್ಯುತ್ ಕುಮಾರ್, ರಾಘು ಶಿವಮೊಗ್ಗ, ಜಾಹಂಗೀರ್ ಸೇರಿದಂತೆ ಹಲವು ಕಲಾವಿದರಿದ್ದಾರೆ.
ಅಚ್ಯುತ್ ಕುಮಾರ್ಗೆ ಭಾಸ್ಕರ್ ನಟನೆ ಮಾಡುತ್ತಾರೆ ಎಂಬ ವಿಷಯ ಗೊತ್ತಿಂತೆ. ಆದರೆ, ನಿರ್ದೇಶನ ಮಾಡುವ ವಿಷಯ ಗೊತ್ತಿರಲಿಲ್ಲವಂತೆ. ‘ಈ ಚಿತ್ರದಲ್ಲಿ ಇನ್ಸ್ಪೆಕ್ಟರ್ ಪಾತ್ರ ಮಾಡಿ ಎಂದು ಅವರು ಹೇಳಿದಾಗ, ಇಲ್ಲಿ ಕೋಳಿ ಕಳ್ಳರ ಪಾತ್ರ ಕೊಡಿ ಎಂದು ಕೇಳಿದೆ. ಕಾರಣ ಆ ಪಾತ್ರ ಬಹಳ ಇಂಟರೆಸ್ಟಿಂಗ್ ಆಗಿತ್ತು. ಆದರೆ, ಇನ್ಸ್ಪೆಕ್ಟರ್ ಪಾತ್ರ ನೀವೇ ಮಾಡಬೇಕು ಎಂದು ಹೇಳಿದ್ದರಿಂದ, ಅದನ್ನು ನಿರ್ವಹಿಸಿದ್ದೆನೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ’ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾರೆ ಅಚ್ಯುತ್ ಕುಮಾರ್.
ಇದನ್ನೂ ಓದಿ: ಜಾಕ್ಲಿನ್ರನ್ನು ಯಾಕೆ ಇನ್ನೂ ಅರೆಸ್ಟ್ ಮಾಡಿಲ್ಲ: ದೆಹಲಿ ಕೋರ್ಟ್ ಪ್ರಶ್ನೆ
ಎಂ. ಎಂ. ಸಿನಿಮಾಸ್ ಬ್ಯಾನರ್ ನಡಿ ಸುರಭಿ ಲಕ್ಷ್ಮಣ್ ಚಿತ್ರ ನಿರ್ಮಿಸಿರುವ ಈ ಚಿತ್ರಕ್ಕೆ ರಾಜ್ ಕಾಂತ ಛಾಯಾಗ್ರಹಣ, ಸಚಿನ್ ಬಸ್ರೂರು ಅವರ ಸಂಗೀತವಿದೆ.