More

    ಆಸೆಪಟ್ಟಿದ್ದು ಕೋಳಿ ಕಳ್ಳನ ಪಾತ್ರ; ಸಿಕ್ಕಿದ್ದು ಇನ್​ಸ್ಪೆಕ್ಟರ್​ ಪಾತ್ರ …

    ಬೆಂಗಳೂರು: ಅಚ್ಯುತ್​ ಕುಮಾರ್​ ಇತ್ತೀಚೆಗೆ ಹಲವು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಕೆಜಿಎಫ್​ 2’, ‘ಫೋರ್​ ವಾಲ್ಸ್​’, ‘ಮಾನ್ಸೂನ್​ ರಾಗ’, ‘ಕಾಂತಾರ’ ಮುಂತಾದ ಚಿತ್ರಗಳಲ್ಲಿ ಎಲ್ಲರ ಗಮನ ಸೆಳೆದಿರುವ ಅಚ್ಯುತ್​, ಈಗ ಇನ್ನೊಂದು ಹೊಸ ಚಿತ್ರದ ಮೂಲಕ ಬರುವುದಕ್ಕೆ ತಯಾರಿ ನಡೆಸಿದ್ದಾರೆ. ಅದೇ ‘ಸದ್ದು ವಿಚಾರಣೆ ನಡೆಯುತ್ತಿದೆ’. ಈ ಚಿತ್ರವು ನ. 25ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದ್ದು, ಮೊದಲ ಹಂತವಾಗಿ ಟ್ರೇಲರ್​ ಹೊರಬಂದಿದೆ.

    ಇದನ್ನೂ ಓದಿ: ಥಾಯ್ಲೆಂಡ್ ಪ್ರವಾಸದಲ್ಲಿ ಮೇಘನಾ; ಸದ್ದು ಮಾಡುತ್ತಿವೆ ಹಾಟ್ ಫೋಟೋಗಳು!

    ಆಸೆಪಟ್ಟಿದ್ದು ಕೋಳಿ ಕಳ್ಳನ ಪಾತ್ರ; ಸಿಕ್ಕಿದ್ದು ಇನ್​ಸ್ಪೆಕ್ಟರ್​ ಪಾತ್ರ …ಭಾಸ್ಕರ್​ ನೀನಾಸಂ ನಿರ್ದೇಶನದ ಈ ಚಿತ್ರವು ನೈಜ ಘಟನೆಯನ್ನು ಆಧರಿಸಿದೆಯಂತೆ. ಸಸ್ಪೆನ್ಸ್ ಥ್ರಿಲ್ಲರ್ ಕಥೆ ಇರುವ ಈ ಚಿತ್ರವನ್ನು ಭಾಸ್ಕರ್ ನೀನಾಸಂ ನಿರ್ದೇಶನ ಮಾಡುತ್ತಿರುವುದಷ್ಟೇ ಅಲ್ಲ, ಕಥೆ-ಚಿತ್ರಕಥೆಯನ್ನು ಸಹ ರಚಿಸಿದ್ದಾರೆ. ರಾಕೇಶ್ ಮಯ್ಯ, ಪಾವನ ಗೌಡ ನಾಯಕ-ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಅಚ್ಯುತ್ ಕುಮಾರ್, ರಾಘು ಶಿವಮೊಗ್ಗ, ಜಾಹಂಗೀರ್ ಸೇರಿದಂತೆ ಹಲವು ಕಲಾವಿದರಿದ್ದಾರೆ.

    ಅಚ್ಯುತ್​ ಕುಮಾರ್​ಗೆ ಭಾಸ್ಕರ್ ನಟನೆ ಮಾಡುತ್ತಾರೆ ಎಂಬ ವಿಷಯ ಗೊತ್ತಿಂತೆ. ಆದರೆ, ನಿರ್ದೇಶನ ಮಾಡುವ ವಿಷಯ ಗೊತ್ತಿರಲಿಲ್ಲವಂತೆ. ‘ಈ ಚಿತ್ರದಲ್ಲಿ ಇನ್ಸ್​ಪೆಕ್ಟರ್ ಪಾತ್ರ ಮಾಡಿ ಎಂದು ಅವರು ಹೇಳಿದಾಗ, ಇಲ್ಲಿ ಕೋಳಿ ಕಳ್ಳರ ಪಾತ್ರ ಕೊಡಿ ಎಂದು ಕೇಳಿದೆ. ಕಾರಣ ಆ ಪಾತ್ರ ಬಹಳ ಇಂಟರೆಸ್ಟಿಂಗ್​ ಆಗಿತ್ತು. ಆದರೆ, ಇನ್​ಸ್ಪೆಕ್ಟರ್​ ಪಾತ್ರ ನೀವೇ ಮಾಡಬೇಕು ಎಂದು ಹೇಳಿದ್ದರಿಂದ, ಅದನ್ನು ನಿರ್ವಹಿಸಿದ್ದೆನೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ’ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾರೆ ಅಚ್ಯುತ್​ ಕುಮಾರ್​.

    ಇದನ್ನೂ ಓದಿ: ಜಾಕ್​ಲಿನ್​ರನ್ನು ಯಾಕೆ ಇನ್ನೂ ಅರೆಸ್ಟ್​ ಮಾಡಿಲ್ಲ: ದೆಹಲಿ ಕೋರ್ಟ್​ ಪ್ರಶ್ನೆ

    ಎಂ. ಎಂ. ಸಿನಿಮಾಸ್ ಬ್ಯಾನರ್ ನಡಿ ಸುರಭಿ ಲಕ್ಷ್ಮಣ್ ಚಿತ್ರ ನಿರ್ಮಿಸಿರುವ ಈ ಚಿತ್ರಕ್ಕೆ ರಾಜ್ ಕಾಂತ ಛಾಯಾಗ್ರಹಣ, ಸಚಿನ್​ ಬಸ್ರೂರು ಅವರ ಸಂಗೀತವಿದೆ.

    ಕೋಟಿ ದಾಟಿದ ವೀವ್ಸ್: ವಿಜಯಾನಂದ ಹಾಡಿಗೆ ಎಲ್ಲೆಡೆ ಉತ್ತಮ ರೆಸ್ಪಾನ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts