ಮುಂಬೈ: ದಿಗ್ಗಜ ಸಚಿನ್ ತೆಂಡುಲ್ಕರ್, ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ರಾಷ್ಟ್ರೀಯ ತಂಡದ ಬಹುತೇಕ ಸದಸ್ಯರಿಗೆ ಬ್ಯಾಟ್ ಫಿಕ್ಸ್ ಮಾಡಿಕೊಡುತ್ತಿದ್ದ ಅಶ್ರಫ್ ಚೌಧರಿ ಆರೋಗ್ಯ ಪರಿಸ್ಥಿತಿ ಬಿಗಡಾಯಿಸಿದೆ. ಸೋಮವಾರವಷ್ಟೇ ನಟ ಸೋನು ಸೂದ್ ನೆರವಿಗೆ ಧಾವಿಸಿದ್ದರು. ಇದೀಗ ದಿಗ್ಗಜ ಸಚಿನ್ ತೆಂಡುಲ್ಕರ್ ಕೂಡ ನೆರವಾಗಿದ್ದಾರೆ. ಮದುಮೇಹದಿಂದ ಬಳಲುತ್ತಿರುವ ಅಶ್ರಫ್ ಆಸ್ಪತ್ರೆಗೆ ಸೇರ್ಪಡೆಯಾಗಿದ್ದು, ಆಥಿರ್ಕವಾಗಿ ತೀವ್ರ ಸಂಕಷ್ಟದಲ್ಲಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಶ್ರಫ್ ಮಿತ್ರ ಪ್ರಶಾಂತ್ ಹಂಚಿಕೊಂಡಿದ್ದರು.
ಇದನ್ನೂ ಓದಿ: ಕ್ರಿಕೆಟ್ನಲ್ಲಿ 24 ಸಾವಿರ ರನ್, 66ನೇ ಶತಕ ಪೂರೈಸಿದ ಅಲಸ್ಟೈರ್ ಕುಕ್
ಕ್ರಿಕೆಟ್ ವಲಯದಲ್ಲಿಅಶ್ರಫ್ ಚಾಚಾ ಎಂದೇ ಕರೆಸಿಕೊಳ್ಳುವ ಅಶ್ರಫ್, ಕಳೆದ 12 ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಚಿನ್ ತೆಂಡುಲ್ಕರ್, ಚಾಚಾ ಜತೆ ಮಾತನಾಡಿದ್ದು, ಹಣಕಾಸಿನ ನೆರವು ನೀಡುವುದಾಗಿ ತಿಳಿಸಿದ್ದಾರೆ. ದಿಗ್ಗಜ ನೆರವಿನಿಂದ ಅಶ್ರಫ್ಗೆ ಉತ್ತಮ ಚಿಕಿತ್ಸೆ ಸಿಗುವ ನಿರೀಕ್ಷೆಯಿದೆ ಎಂದು ಅಶ್ರಫ್ ಸ್ನೇಹಿತ ಪ್ರಶಾಂತ್ ತಿಳಿಸಿದ್ದಾರೆ.
ಇದನ್ನೂ ಓದಿ: VIDEO |ದುಬೈನಲ್ಲಿ ರೋಹಿತ್ ಶರ್ಮ ಕ್ವಾರಂಟೈನ್ ವರ್ಕ್ಔಟ್ಗೆ ಪತ್ನಿ ರಿತಿಕಾ ಸಾಥ್
ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿಯಂಥ ದಿಗ್ಗಜರಿಗೆ ಬ್ಯಾಟ್ ತಯಾರಿಸಿಕೊಟ್ಟಿರುವ ಅಶ್ರಫ್ , ಕೋವಿಡ್-19ರ ಲಾಕ್ಡೌನ್ನಿಂದಾಗಿ ಸಂಕಷ್ಟದಲ್ಲಿ ಸಿಲುಕಿದರು. ಈ ವೇಳೆ ಸಂಪೂರ್ಣ ವ್ಯಾಪಾರ ನಿಂತಿದ್ದಲ್ಲದೆ, ಆರೋಗ್ಯದ ಪರಿಸ್ಥಿತಿಯೂ ಬಿಗಡಾಯಿಸಿತ್ತು. ವಾಂಖೆಡೆಯಲ್ಲಿ ನಡೆಯಲಿರುವ ಐಪಿಎಲ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ಅಶ್ರಫ್ ತಪ್ಪದೇ ಹಾಜರಿರುತ್ತಾರೆ. ಕೇವಲ ಭಾರತೀಯ ಕ್ರಿಕೆಟಿಗರಲ್ಲದೆ, ವೆಸ್ಟ್ ಇಂಡೀಸ್ ದೈತ್ಯರಾದ ಕ್ರಿಸ್ ಗೇಲ್, ಕೈರಾನ್ ಪೊಲ್ಲಾರ್ಡ್, ಆಸೀಸ್ ತಂಡದ ಸ್ಟೀವ್ ಸ್ಮಿತ್ಗೂ ಅಶ್ರಫ್ ಬ್ಯಾಟ್ ತಯಾರಿಸಿಕೊಟ್ಟಿದ್ದಾರೆ. ಯುವ ಕ್ರಿಕೆಟಿಗರಿಗೆ ಉಚಿತವಾಗಿಯೂ ಬ್ಯಾಟ್ ರಿಪೇರಿ ಮಾಡಿಕೊಟ್ಟಿದ್ದಾರೆ.
ಸಚಿನ್ ನಿವೃತ್ತಿ ಬಳಿಕ ಐಪಿಎಲ್ ನೋಡುವುದನ್ನೇ ನಿಲ್ಲಿಸಿದ್ದಾರೆ ಈ ಮಹಿಳಾ ಕ್ರಿಕೆಟರ್..!