ಜೈಪುರ: ರಾಜಸ್ಥಾನದಲ್ಲಿ ಸದ್ಯ ಬಿರುಗಾಳಿ ಬಂದು ನಿಂತ ಅನುಭವವಾಗುತ್ತಿದೆ ಕಾಂಗ್ರೆಸ್ ಶಾಸಕರಿಗೆ. ಆದರೆ, ಇದರಲ್ಲಿ ಗಾಳಿಗೆ ತರಗೆಲೆಯಾಗಿದ್ದು ಮಾಜಿ ಡಿಸಿಎಂ ಸಚಿನ್ ಪೈಲಟ್. ಅಶೋಕ್ ಗೆಹ್ಲೋಟ್ ಮತ್ತಷ್ಟು ಗಟ್ಟಿಯಾಗಿ ನೆಲೆಯೂರಿದ್ದಾರೆ.
ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ (ಸಚಿನ್ ಪೈಲಟ್) ಬಿಜೆಪಿ ಜತೆ ಸೇರಿಕೊಂಡು ಶಾಸಕರ ಕುದುರೆ ವ್ಯಾಪಾರದಲ್ಲಿ ಭಾಗಿಯಾಗಿದ್ದರು. ಈ ಬಗ್ಗೆ ನನ್ನ ಬಳಿ ದಾಖಲೆಯಿದೆ ಎಂದು ಸ್ವತಃ ಸಿಎಂ ಅಶೋಕ್ ಗೆಹ್ಲೋಟ್ ಸುದ್ದಿಗಾರರಿಗೆ ಹೇಳಿದ್ದಾರೆ.
ಇದನ್ನೂ ಓದಿ; ನೀರು, ಪಿಪಿಇ ಕಿಟ್ ಕೇಳಿದ ನರ್ಸ್ಗಳಿಗೆ ವಾಟ್ಸ್ಯಾಪ್ನಲ್ಲಿಯೇ ವಜಾ ಆದೇಶ ಕಳುಹಿಸಿದ್ರು…!
ಶಾಸಕರನ್ನು ಖರೀದಿಸುವ ಯತ್ನ ನಡೆದಿತ್ತು. ಅವರಿಗೆ ಹಣದ ಆಮಿಷ ಒಡ್ಡಲಾಗಿತ್ತು. ಇದಕ್ಕೆಲ್ಲ ದಾಖಲೆಗಳಿವೆ. ಯಾವುದೇ ಷಡ್ಯಂತ್ರ ನಡೆದಿಲ್ಲ ಎಂದು ಹೇಳಿದ್ದು ಯಾರು? ಷಡ್ಯಂತ್ರದಲ್ಲಿ ಭಾಗಿಯಾದವರೇ ಏನೂ ನಡೆದಿಲ್ಲ ಹೇಳಿಕೆ ಕೊಟ್ಟಿದ್ದರು ಎಂದು ಗೆಹ್ಲೋಟ್ ಹೇಳಿದ್ದಾರೆ.
ರಾಜ್ಯಸಭೆ ಚುನಾವಣೆಗೂ ಮುನ್ನ ಇಂಥದ್ದೊಂದು ಯತ್ನ ನಡೆದಾಗ ದೂರು ದಾಖಲಾಗಿತ್ತು. ಹೀಗಾಗಿ ಡಿಸಿಎಂ ಸಚಿನ್ ಪೈಲಟ್ಗೆ ನೋಟಿಸ್ ನೀಡಲಾಗಿತ್ತು. ಅಂಥದ್ದೊಂದು ನೋಟಿಸ್ ಸಿಕ್ಕಿದೆ ಎಂದು ಸಚಿನ್ ಪೈಲಟ್ ಕೂಡ ಹೇಳಿದ್ದರು. ಈ ಬೆಳವಣಿಗೆಯಿಂದ ಅವಮಾನಕ್ಕೊಳಗಾಗಿ ಸಿಎಂ ಗೆಹ್ಲೊಟ್ ವಿರುದ್ಧ ಸಚಿನ್ ಪೈಲಟ್ ಬಂಡಾಯವೆದ್ದರು. ಬೆಂಬಲಿಗ ಶಾಸಕರನ್ನು ಸೇರಿಸಿಕೊಂಡು ದೆಹಲಿಯಲ್ಲಿ ಬೀಡು ಬಿಟ್ಟರು. ಮುಂದಿನದೀಗ ಇತಿಹಾಸವಾಗಿದೆ.
ಇದನ್ನೂ ಓದಿ; ಪುರುಚ್ಚಿ ತಲೈವಿ ಜಯಲಲಿತಾ ಮನೆ ಸ್ಮಾರಕವಾಗಲ್ಲ; ಹಾಗಿದ್ದರೆ ಬಳಕೆಯಾಗೋದಾದರೂ ಯಾವುದಕ್ಕೆ?
ಡಿಸಿಎಂ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ವಜಾಗೊಂಡಿರುವ ಸಚಿನ್ ಪೈಲಟ್, ಬಿಜೆಪಿ ಸೇರಲು ನಿರ್ಧರಿಸಿಲ್ಲ. ನಾನಿನ್ನೂ ಕಾಂಗ್ರೆಸ್ ತೊರೆದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ರಾಹುಲ್ ಗಾಂಧಿ ಜತೆಗೆ ಅಪ್ತ ವಲಯದಲ್ಲಿ ಸಚಿನ್ ಗುರುತಿಸಿಕೊಂಡಿದ್ದರು. ಸ್ವತಃ ರಾಹುಲ್ ಗಾಂದಿ ಕೂಡ ಪಕ್ಷ ಬಿಟ್ಟು ಹೋಗುವವರು ಹೋಗಲಿ ಎಂದು ಹೇಳಿರುವುದು ಪೈಲಟ್ಗೆ ಮತ್ತೊಂದು ಹೊಡೆತ ನೀಡಿದಂತಾಗಿದೆ.