ಬಾಗಲಕೋಟೆ: ಬೈಕ್ನಲ್ಲಿ ಹೋಗುತ್ತಿರುವ ಸಮಯದಲ್ಲಿ ವಿಡಿಯೋಕಾಲ್ನಲ್ಲಿ ಮಾತನಾಡುತ್ತಾ ಹೋದ ಕಾರಣ, ಯೋಧನ ಪತ್ನಿಯೊಬ್ಬರು ಬೈಕ್ನಿಂದ ಬಿದ್ದು ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಮೂಗನೂರು ಬಳಿ ನಡೆದಿದೆ.
ಬಾದಾಮಿ ತಾಲೂಕಿನ ತಿಮ್ಮಸಾಗರ ಗ್ರಾಮದ ನಿವಾಸಿ ಯೋಧ ಶೇಖರಯ್ಯ ವಿಭೂತಿ ಅವರ ಪತ್ನಿ ಪುಷ್ಪಲತಾ (35) ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ.
ಶೇಖರಯ್ಯ ಅವರು ಪತ್ನಿಯನ್ನು ಬೈಕ್ನಲ್ಲಿ ಕೂಡಿಸಿಕೊಂಡು ಬಾದಾಮಿ ತಾಲೂಕಿನ ತಿಮ್ಮಸಾಗರದಿಂದ ಹುನಗುಂದ ತಾಲೂಕಿನ ಹಿರೇಮಳಗಾವಿ ಗ್ರಾಮಕ್ಕೆ ಹೊರಟಿದ್ದರು. ಅವರು ಮನೆಗೆ ಬರುವುದು ವಿಳಂಬ ಆಯಿತು ಎನ್ನುವ ಕಾರಣಕ್ಕೆ ಅವರ ಮಗ ತಂದೆಗೆ ವಿಡಿಯೋ ಕಾಲ್ ಮಾಡಿದ್ದಾನೆ.
ಇದನ್ನೂ ಓದಿ: ಭೀಮಾ ನದಿಗೆ ಉರುಳಿದ ಕಬ್ಬು ತುಂಬಿದ ಟ್ರಾಕ್ಟರ್
ಬೈಕ್ ಚಲಾಯಿಸುತ್ತಲೇ ಶೇಖರಯ್ಯ ವಿಡಿಯೋಕಾಲ್ ಅಟೆಂಡ್ ಮಾಡಿದ್ದಾರೆ. ಅವರು ಮಾತನಾಡುತ್ತಿದ್ದ ಸಮಯದಲ್ಲಿ ಹಂಪ್ಸ್ ಬಂದದ್ದು ಅವರ ಗಮನಕ್ಕೆ ಬರಲಿಲ್ಲ. ಹಂಪ್ಸ್ ದಾಟುತ್ತಿದ್ದ ವೇಳೆ ಆಯತಪ್ಪಿ ಹಿಂದೆ ಕುಳಿತಿದ್ದ ಪುಷ್ಪಲತಾ ಅವರು ಕೆಳಕ್ಕೆ ಬಿದ್ದಿದ್ದಾರೆ.
ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಇಂದು ಶೇಖರಯ್ಯ ಅವರು ಜಮ್ಮುಕಾಶ್ಮೀರಕ್ಕೆ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಆದರೆ ನಿನ್ನೆ ಈ ದುರ್ಘಟನೆ ನಡೆದಿದೆ.
ಲವ್ ಜಿಹಾದ್ ಕಾನೂನು- ವಿವಾಹದ ಹಿಂದಿನ ಪಿತೂರಿ ತಡೆಯುವ ಉದ್ದೇಶದ್ದು ಬಿಜೆಪಿ ನಾಯಕ ವಿಜಯವರ್ಗೀಯ