ನವದೆಹಲಿ: ಜನಪ್ರತಿನಿಧಿಗಳ ಕೇಸ್ಗಳನ್ನು ನಡೆಸುವ ಸಂಬಂಧ ಹಲವು ರಾಜ್ಯಗಳಲ್ಲಿ ವಿಶೇಷ ಜನಪ್ರತಿನಿಧಿಗಳ ಕೋರ್ಟ್ಗಳು ಕಾರ್ಯ ನಿರ್ವಹಿಸುತ್ತಿವೆ. ಇವಲ್ಲದೇ ಇವರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಸಿಬಿಐ ವಿಶೇಷ ಕೋರ್ಟ್ಗಳಲ್ಲಿಯೂ ನಡೆಸಲಾಗುತ್ತದೆ.
ಆದರೆ ಇಂಥ ಕೋರ್ಟ್ಗಳಲ್ಲಿ ದಾಖಲಾಗಿರುವ ಕೇಸ್ಗಳ ಪೈಕಿ ಕೆಲವು ಕೇಸ್ಗಳು ಯಾವ್ಯಾವುದೋ ಕಾರಣಕ್ಕೆ ವಾಪಸ್ ತೆಗೆದುಕೊಳ್ಳುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪೊಂದನ್ನು ಹೊರಡಿಸಿದೆ.
ಅದೇನೆಂದರೆ, ಈ ಕೋರ್ಟ್ಗಳಲ್ಲಿ ದಾಖಲಾಗುವ ಸಂಸದರು, ಶಾಸಕರ ವಿರುದ್ಧದ ಕೇಸ್ಗಳನ್ನು ಯಾವುದೇ ಕಾರಣಕ್ಕೂ ಹಿಂದಕ್ಕೆ ಪಡೆಯುವಂತಿಲ್ಲ. ಒಂದು ವೇಳೆ ಹಾಗೆ ಪಡೆಯುವುದೇ ಆಗಿದ್ದಲ್ಲಿ ಸಂಬಂಧಿತ ರಾಜ್ಯಗಳ ಹೈಕೋರ್ಟ್ನ ಅನುಮತಿ ಕಡ್ಡಾಯ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ, ನ್ಯಾಯಮೂರ್ತಿಗಳಾದ ವಿನೀತ್ ಶರಣ್ ಮತ್ತು ಸೂರ್ಯ ಕಾಂತ್ ಅವರನ್ನೊಳಗೊಂಡ ನ್ಯಾಯಪೀಠವು ಹೇಳಿದೆ.
ಇದರಿಂದಾಗಿ ಈಗ ಶಾಸಕರು, ಸಂಸದರಿಗೆ ಕೋರ್ಟ್ ಶಾಕ್ ಕೊಟ್ಟಿದೆ. ಕೇರಳ ಸೇರಿದಂತೆ ಕೆಲವು ಕಡೆಗಳಲ್ಲಿ ಜನಪ್ರತಿನಿಧಿಗಳ ಕೋರ್ಟ್ಗಳಲ್ಲಿ ದಾಖಲಾಗುತ್ತಿರುವ ಮೊಕದ್ದಮೆಗಳನ್ನು ಏಕಾಏಕಿ ಹಿಂದಕ್ಕೆ ಪಡೆಯುತ್ತಿರುವುದು ಕಂಡುಬಂದಿದೆ.
’ಇದೇ ರೀತಿ ಎಂಎಲ್ಎ, ಎಂಪಿಗಳ ವಿರುದ್ಧ ಈ ಕೋರ್ಟ್ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಗಳು ಸದ್ಯ ಅದೇ ಸ್ಥಳದಲ್ಲಿ ಮುಂದುವರೆಯಬೇಕು. ಒಂದು ವೇಳೆ ನಿವೃತ್ತಿ ಹೊಂದಿದರೆ ಅಥವಾ ನಿಧನರಾದರೆ ಮಾತ್ರ ಈ ನಿಯಮ ಅನ್ವಯ ಆಗುವುದಿಲ್ಲ. ಇಲ್ಲದಿದ್ದರೆ ಅವರು ಸದ್ಯ ಬೇರೆ ಸ್ಥಳಗಳಿಗೆ ವರ್ಗಾವಣೆಯಾಗದೇ ಅಲ್ಲಿಯೇ ಕೇಸನ್ನು ಅಲಿಸಬೇಕು ಎಂದಿದೆ ಕೋರ್ಟ್. ಈ ಕೇಸ್ಗಳ ವಿಚಾರಣೆಯನ್ನು ಶೀಘ್ರದಲ್ಲಿ ಮುಗಿಸುವ ಸಂಬಂಧ ಈ ಆದೇಶ ಹೊರಡಿಸಲಾಗಿದೆ.
ದಿಢೀರ್ ನಾಪತ್ತೆಯಾದ 6ನೇ ಕ್ಲಾಸ್ ಬಾಲಕಿ: ಆಕೆಯ ಮೊಬೈಲ್ನಲ್ಲಿ ಸಿಕ್ತು ಬೆಚ್ಚಿಬೀಳೋ ಕಥೆ…
ನನ್ನ ನಗ್ನ, ಕಾಮಪ್ರಚೋದಕ ವಿಡಿಯೋ ನೋಡಿ ಶಿಲ್ಪಾ ಖುಷಿ ಪಟ್ಟಿದ್ರು: ತನಿಖೆಯಲ್ಲಿ ನಟಿಯ ಸ್ಫೋಟಕ ಹೇಳಿಕೆ