ಬೆಂಗಳೂರು: ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಕಾಂಗ್ರೆಸ್ನ ಮಾಜಿ ಮೇಯರ್ ಸಂಪತ್ ಕುಮಾರ್ ಅವರನ್ನು ಎರಡು ದಿನಗಳವರೆಗೆ ಸಿಸಿಬಿ ವಶಕ್ಕೆ ನೀಡಿ ಕೋರ್ಟ್ ಆದೇಶಿಸಿದೆ.
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸೇರಿದಂತೆ ಹಲವಾರು ಮನೆಗಳಿಗೆ ಬೆಂಕಿ ಇಟ್ಟು, ಲಕ್ಷಾಂತರ ರೂಪಾಯಿ ಆಸ್ತಿ ಪಾಸ್ತಿ ಹಾನಿ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಆರೋಪಿಯಾಗಿರುವ ಸಂಪತ್ಕುಮಾರ್, ತಲೆಮರೆಸಿಕೊಂಡಿದ್ದರು. ನಿನ್ನೆ ಅವರನ್ನು ಕೊನೆಗೂ ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅವರನ್ನು 67ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಸದ್ಯದ ಮಟ್ಟಿಗೆ ಎರಡು ದಿನಗಳವರೆಗೆ ಅವರನ್ನು ಪೊಲೀಸರ ವಶಕ್ಕೆ ನೀಡಿ ಕೋರ್ಟ್ ಆದೇಶಿಸಿದೆ.
ಬೃಹತ್ ಮಹಾನಗರ ಪಾಲಿಕೆಯ ಮೇಯರ್ ಆಗಿ ಆಯ್ಕೆಯಾದವರನ್ನು ಆ ನಗರದ ಪ್ರಥಮ ಪ್ರಜೆ ಎನ್ನಲಾಗುತ್ತದೆ. ಭಾರತ ದೇಶಕ್ಕೆ ರಾಷ್ಟ್ರಪತಿಗಳು ಪ್ರಥಮ ಪ್ರಜೆ ಇದ್ದಂತೆ, ಮಹಾನಗರಗಳಿಗೆ ಆಯಾ ಮೇಯರ್ಗಳೇ ಪ್ರಥಮ ಪ್ರಜೆ. ಇಂಥ ಒಂದು ಗೌರವ ಸ್ಥಾನಕ್ಕೆ ಕಪ್ಪುಚುಕ್ಕೆ ತಂದಿದ್ದಾರೆ ಸಂಪತ್ಕುಮಾರ್ ಎಂದು ಇದೀಗ ಭಾರಿ ಚರ್ಚೆಯಾಗುತ್ತಿದೆ.
ಇದನ್ನೂ ಓದಿ: ಮಾಜಿ ಮೇಯರ್ ಸಂಪತ್ ರಾಜ್ ಬಂಧನ; ಕೊನೆಗೂ ಸಿಕ್ಕಿಬಿದ್ದ ‘ಹಳ್ಳಿ ಗಲಭೆ’ ಕಿಂಗ್ಪಿನ್
ಇದಕ್ಕೆ ಕಾರಣ, ಇದುವರೆಗೆ ಮೇಯರ್ ಸ್ಥಾನದಲ್ಲಿ ಇದ್ದ ಯಾರು ಕೂಡ ಬಂಧನಕ್ಕೆ ಒಳಗಾಗಿರಲಿಲ್ಲ ಎನ್ನಲಾಗಿದೆ. ಟೌನ್ ಮುನ್ಸಿಪಲ್ ಆಗಿದ್ದ ಬೆಂಗಳೂರು ನಂತರ ನಗರಸಭೆ, ಕಾರ್ಪೋರೇಷನ್, ಬಿಎಂಪಿ ಹಾಗೂ ನಂತರ ಬಿಬಿಎಂಪಿ ಆಗಿ ಪುನಾರಚನೆಗೊಂಡಿದೆ. ಅಲ್ಲಿಂದ ಇಲ್ಲಿಯವರೆಗೆ ಒಟ್ಟೂ 53 ಮಂದಿ ಮೇಯರ್ ಆಗಿ ಆಯ್ಕೆಯಾಗಿದ್ದು, ಇಂಥದ್ದೊಂದು ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಯಾದವರು ಸಂಪತ್ರಾಜ್ ಅವರೇ ಮೊದಲಿಗರು ಎನ್ನಲಾಗಿದೆ.
ಈ ನಡುವೆಯೇ ಅವರನ್ನು ಬಂಧಿಸಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಚಾರ್ಜ್ಷೀಟ್ ಸಲ್ಲಿಸಿದ ಮಾತ್ರಕ್ಕೆ ಯಾರೂ ಅಪರಾಧಿಯಲ್ಲ, ಸದ್ಯ ಸಂಪತ್ಕುಮಾರ್ ಆರೋಪಿಯಷ್ಟೇ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ಸಂಪತ್ರಾಜ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
ಗಲಭೆ ಆರೋಪಿ ಸಂಪತ್ರಾಜ್ ಬಗ್ಗೆ ಡಿಕೆಶಿಗೆ ಮೊದಲೇ ಗೊತ್ತಿತ್ತಾ? ಏನು ಹೇಳಿದ್ದಾರೆ ಕೇಳಿ…
ದಿನಕ್ಕೊಂದು ಮೊಟ್ಟೆ- ಶುರುವಾಗುವುದು ಶುಗರ್: ಅಧ್ಯಯನದಲ್ಲಿ ಆತಂಕದ ವಿಷಯ ಬಹಿರಂಗ!
ಇಸ್ಲಾಂನಲ್ಲಿ ಇರುವುದೇನು? ಆಗುತ್ತಿರುವುದೇನು? ದಾಖಲೆ ನಿರ್ಮಿಸಿ ಕಾಶ್ಮೀರಕ್ಕೆ ಹೊರಟ ಹಿಂದೂ ಯುವಕ…