More

    ರಸ್ತೆ ರಿಪೇರಿಯಾಗುವವರೆಗೂ ಮದ್ವೆಯಾಗಲ್ಲ ಎಂದು ಶಿಕ್ಷಕಿ ಶಪಥ: ಓಡೋಡಿ ಬಂದ ದಾವಣಗೆರೆ ಜಿಲ್ಲಾಧಿಕಾರಿ

    ದಾವಣಗೆರೆ: ತಾಲೂಕಿನ ಎಚ್.ರಾಂಪುರ ಗ್ರಾಮದ ಆರ್.ಡಿ. ಬಿಂದು ಎಂಬ ಶಿಕ್ಷಕಿ ತಮ್ಮೂರಿಗೆ ಹೋಗಲು ರಸ್ತೆ ನಿರ್ಮಾಣವಾಗಿ, ಬಸ್ ಸೌಲಭ್ಯ ಕಲ್ಪಿಸುವವರೆಗೆ ಮದುವೆಯಾಗುವುದಿಲ್ಲ ಎಂದು ಶಪಥ ಮಾಡಿದ್ದರು.  50 ಮನೆ, 200 ಜನಸಂಖ್ಯೆ, 180 ಮತದಾರರು ಇರುವ ಪುಟ್ಟ ಗ್ರಾಮ. ಅಲ್ಲಿಗೆ ಹೋಗಲು ರಸ್ತೆಯೇ ಇಲ್ಲ, ಬಸ್ ಸಂಚಾರ ಕನಸಿನ ಮಾತು. ಇದೇ ಕಾರಣಕ್ಕೆ ಇಲ್ಲಿನ ಬಹುತೇಕ ಜನ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಎಚ್.ರಾಂಪುರದಿಂದ ಹೆದ್ನೆ ಗ್ರಾಮದವರೆಗೆ 5 ಕಿ.ಮೀ. ಅಂತರವಿದ್ದು, 2 ಕಿ.ಮೀ. ವರೆಗೆ ಮಾತ್ರ ರಸ್ತೆ ನಿರ್ಮಾಣವಾಗಿದ್ದು, ಅದೂ ಸುಸ್ಥಿತಿಯಲ್ಲಿಲ್ಲ. ಇನ್ನೂ 3 ಕಿ.ಮೀ. ರಸ್ತೆ ಅಭಿವೃದ್ಧಿಯಾಗಬೇಕಿದೆ. ಈ ಬೇಡಿಕೆಯೊಂದಿಗೆ ಗ್ರಾಮದ ಜನರು 3 ಚುನಾವಣೆಗಳಲ್ಲಿ ಮತದಾನ ಬಹಿಷ್ಕಾರ ಮಾಡಿದ್ದರು. ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಖಾಸಗಿ ಶಾಲೆಯ ಶಿಕ್ಷಕಿಯಾಗಿರುವ ಬಿಂದು ವಿವರಿಸಿದ್ದರು.

    ರಸ್ತೆಯ ಕಾರಣಕ್ಕೆ ಈ ಗ್ರಾಮಕ್ಕೆ ಹೆಣ್ಣು ಕೊಡುವುದು, ಇಲ್ಲಿಯ ಹೆಣ್ಣನ್ನು ಮದುವೆಯಾಗಲು ಹಿಂಜರಿಯುತ್ತಿದ್ದಾರೆ. ಶಿಕ್ಷಕಿ ಬಿಂದು ಅವರಿಗೂ ಎರಡು ಬಾರಿ ನೋಡಲು ಬಂದಿದ್ದ ವರನ ಕಡೆಯವರು ಇದೇ ಕಾರಣಕ್ಕೆ ಮದುವೆಗೆ ಒಪ್ಪಿರಲಿಲ್ಲ. ಇದರಿಂದ ಬೇಸತ್ತಿದ್ದ ಬಿಂದು ಅವರು, ಶಪಥ ಮಾಡಿದ್ದರು. ರಸ್ತೆ ರಿಪೇರಿ ಆಗುವವರೆಗೂ ತಾವು ಮದುವೆಯಾಗುವುದಿಲ್ಲ ಎಂದಿದ್ದರು. ಇದಕ್ಕೆ ಗ್ರಾಮಸ್ಥರೂ ನೈತಿಕ ಬೆಂಬಲ ಸೂಚಿಸಿದ್ದರು.
    ಈ ಬೇಡಿಕೆಯೊಂದಿಗೆ ಗ್ರಾಮದ ಜನರು 3 ಚುನಾವಣೆಗಳಲ್ಲಿ ಮತದಾನ ಬಹಿಷ್ಕಾರ ಮಾಡಿದ್ದರು.

    ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಮೂಲಕ ತಿಳಿಸಿದ್ದರು. ಕಳೆದ ವರ್ಷ ಪ್ರಧಾನಿ ಮೋದಿ ಅವರಿಗೂ ಬಿಂದು ಪತ್ರ ಬರೆದಿದ್ದರಂತೆ. ಆದರೆ ಏನೂ ಪ್ರಯೋಜನವಾಗಲಿಲ್ಲ ಎನ್ನುವುದು ಗ್ರಾಮಸ್ಥರ ದೂರು.

    ಬಿಂದು ಅವರು ಮಾಡಿರುವ ಶಪಥದ ಕುರಿತು ಮಾಧ್ಯಮಗಳಲ್ಲಿ ಪ್ರಚಾರ ಆಗುತ್ತಿದ್ದಂತೆಯೇ ದಾವಣಗೆರೆ ಜಿಲ್ಲಾಧಿಕಾರಿ ಗ್ರಾಮಕ್ಕೆ ಇಂದು ದೌಡಾಯಿಸಿದ್ದಾರೆ. ಜಿಲ್ಲಾಧಿಕಾರಿ ಮಹಾಂತೇಶ್ ಹಾಗೂ ಅಧಿಕಾರಿ ಆರ್. ಬೀಳಗಿ ಎಚ್. ರಾಂಪುರ ಗ್ರಾಮಕ್ಕೆ ಅಧಿಕಾರಿಗಳ ಜತೆ ಭೇಟಿ ನೀಡಿ ಗ್ರಾಮಸ್ಥರ ಸಂಕಷ್ಟ ಆಲಿಸಿದ್ದಾರೆ. ಅಷ್ಟೇ ಅಲ್ಲದೇ, ರಸ್ತೆ ನಿರ್ಮಾಣ ಮಾಡಿಕೊಡುವ ಭರವಸೆಯನ್ನು ಜಿಲ್ಲಾಧಿಕಾರಿಗಳು ನೀಡಿದರು. ಇದೇ ಸಂದರ್ಭದಲ್ಲಿ ಕಾಡು ಪ್ರಾಣಿಗಳ ಕಾಟ, ನೆಟ್‌ವರ್ಕ್ ತೊಂದರೆ, ಗುಡ್ಡಗಾಡು ಪ್ರದೇಶದ ಸಂಕಷ್ಟಗಳು, ರಸ್ತೆ ಹಾಳಾಗಿರುವುದು, ಬಸ್ ಬಾರದಿರುವುದೂ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಒಟ್ಟಿನಲ್ಲಿ ಶಿಕ್ಷಕಿಯ ಶಪಥ ಸ್ವಲ್ಪ ಮಟ್ಟಿಗಾದರೂ ಕೆಲಸ ಮಾಡಿದ್ದು, ಗ್ರಾಮದ ಉದ್ಧಾರಕ್ಕೆ ಮುನ್ನಡಿ ಬರೆದಿದೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

    ನನ್ನ ಸಾವಿಗೆ ನಟ ಸಾಹಿಲ್‌ ಕಾರಣ- ನೋಟ್‌ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ ‘ಮಿಸ್ಟರ್ ಇಂಡಿಯಾ ಬಾಡಿ ಬಿಲ್ಡರ್‌’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts