ಬಳ್ಳಾರಿ: ಅತ್ಯಾಚಾರಿಗಳು ಎಂದು ಹೇಳಲಾಗುವ ಇಬ್ಬರು ವ್ಯಕ್ತಿಗಳು ಮಾತನಾಡಿದ್ದಾರೆ ಎನ್ನಲಾದ ಭಯಾನಕ ಮಾಹಿತಿ ಇರುವ ಆಡಿಯೋ ಒಂದು ಇದೀಗ ವೈರಲ್ ಆಗಿದ್ದು, ಜನರಲ್ಲಿ ಆತಂಕ ಹುಟ್ಟಿಸಿದೆ.
ಅತ್ಯಾಚಾರಿ ಎಂದು ಎನಿಸಿಕೊಂಡಿರುವ ಆರೋಪಿಯೊಬ್ಬ ರೇಪ್ಗೆ ಸಂಬಂಧಿಸಿದಂತೆ ಯಾರಿಗೋ ಮಾಡಿದ ಕರೆಯೊಂದು ವೈರಲ್ ಆಗಿದೆ. ಅದರಲ್ಲಿ ಆತ ‘ನಾನು ಬಳ್ಳಾರಿವ. ನಿಮ್ಮ ಹಾಗೆ ನಮ್ಮದೂ ಒಂದು ಗ್ಯಾಂಗ್ ಇದೆ. ರೇಪ್ ಮಾಡೋದೇ ನಮ್ಮ ಕೆಲಸ. ಹೀಗೆ ಒಮ್ಮೆ ರೇಪ್ ಮಾಡೋವಾಗ ಓರ್ವ ಯುವತಿ ಸಾವನ್ನಪ್ಪಿದ್ದಳು. ಹೀಗಾಗಿ ಸ್ನೇಹಿತರ ಗುಂಪು ಚದುರಿ ಹೋಗಿದೆ. ಗೃಹಿಣಿಯರೇ ನಮ್ಮ ಟಾರ್ಗೆಟ್ ಆಗಿದ್ದಾರೆ’ ಎಂದಿದ್ದಾನೆ.
ಇದರ ಬೆನ್ನಟ್ಟಿ ಹೋಗಿರುವ ಪೊಲೀಸರಿಗೆ ಸದ್ಯ ಆರೋಪಿ ಸಿಕ್ಕಿದ್ದಾನೆ. ಈತ ಬಳ್ಳಾರಿಯಿಂದ ಅಲ್ಲ, ಬದಲಿಗೆ ವಿಜಯಪುರ ಜಿಲ್ಲೆಯವನು ಎಂದು ತಿಳಿದುಬಂದಿದೆ. ಸದ್ಯ ಅವನನ್ನು ಬಂಧಿಸಲಾಗಿದೆ. ಈತ ಲಾರಿ ಮತ್ತು ಹಿಟಾಚಿ ನಡೆಸುವ ಚಾಲಕ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.
ಈ ಕುರಿತು ಮಾಹಿತಿ ನೀಡಿರುವ ಬಳ್ಳಾರಿ ಎಸ್ಪಿ ಸೈದುಲ್ ಅದಾವತ್, ನಾವು ಒಂದು ಟೀಂ ಮಾಡಿ ತನಿಖೆ ಮಾಡಿದ್ದೇವೆ. ಈತ ವಿಜಯಪುರದ ಮುದ್ದೇಬಿಹಾಳ ತಾಲೂಕಿನ ನಾಲ್ವತ್ ವಾಡ್ನ ಆರೋಪಿ. ಬಳ್ಳಾರಿಗೆ ಆತ ಬಂದಿಲ್ಲ. ಆದರೆ ತಾನು ಬಳ್ಳಾರಿ ಎಂದು ಏಕೆ ಹೇಳಿದ್ದಾನೋ ಗೊತ್ತಿಲ್ಲ. ಮೇಲ್ನೋಟಕ್ಕೆ ಈತ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವಂತೆ ಕಾಣಿಸುತ್ತದೆ. ಇದೇ ರೀತಿ ಮಾತನಾಡುವುದು ಆತನಿಗೆ ಆಭ್ಯಾಸವಾಗಿದೆ. ಇದೇ ರೀತಿ ಅನೇಕರಿಗೆ ಕಾಲ್ ಮಾಡಿ ಮಾತನಾಡುತ್ತಾನೆ. ಆತನನ್ನ ವೈದ್ಯರ ಬಳಿ ಕರೆದೊಯ್ದು ಚೆಕ್ ಮಾಡಿಸಲಾಗುವುದು ಎಂದಿದ್ದಾರೆ.
ಆದರೂ ಈತ ನಿಜವಾಗಿಯೂ ಮಾನಸಿಕ ಅಸ್ವಸ್ಥನೇ ಅಥವಾ ಪೊಲೀಸರು ಬಂಧಿಸಿದ ಮೇಲೆ ಹೀಗೆ ಮಾಡುತ್ತಿದ್ದಾನೆಯೆ? ಈತನ ಹಿಂದೆ ಇನ್ನೆಷ್ಟು ಮಂದಿ ಇದ್ದಿರಬಹುದು ಎಂಬೆಲ್ಲಾ ಭಯದಲ್ಲಿ ಜನರಿದ್ದಾರೆ.
ಬರ್ಬರ ಹತ್ಯೆಯಾದ ನನ್ನ ತಂದೆಯ ಕೊಲೆಗಾರರನ್ನು ಬಂಧಿಸಿ ನ್ಯಾಯ ಕೊಡಿಸಿ: ನಾಲ್ಕರ ಪೋರನ ಕಣ್ಣೀರು
ಹುಟ್ಟುಹಬ್ಬದಂದೇ ಕಾದುಕುಳಿತಿದ್ದ ಜವರಾಯ! ಕೇಕ್ ಕಟ್ ಮಾಡುವಷ್ಟರಲ್ಲೇ ಪುಟಾಣಿಯ ಜೀವ ಹೋಯ್ತು