More

    ಕೊಲೆ ಆರೋಪ ಹೊತ್ತ ಮಾಜಿ ಸಚಿವನಿಗೆ ಜೈಲೇ ಗತಿ- ಜಾಮೀನು ಅರ್ಜಿಯಾಯ್ತು ವಜಾ

    ಧಾರವಾಡ: ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಜೈಲಿನಲ್ಲಿರುವ ಕಾಂಗ್ರೆಸ್​ನ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

    ಕಳೆದ ನವೆಂಬರ್ 5 ರಂದು ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನ ಸಿಬಿಐ ಬಂಧನ ಮಾಡಿತ್ತು. ಇದಾದ ನಂತರ ಧಾರವಾಡ ಜಿಲ್ಲಾ ಪ್ರಧಾನ ಮತ್ತು ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಲಾಗಿತ್ತು. ಅಲ್ಲಿ ಕೂಡ ಇವರಿಗೆ ಜಾಮೀನು ಸಿಕ್ಕಿರಲಿಲ್ಲ.

    ಈ ಆದೇಶ ಪ್ರಶ್ನಿಸಿ ನಂತರ ಹೈಕೋರ್ಟ್ ಮೊರೆ ಹೋಗಿದ್ದರು. ಅನೇಕ ಬಾರಿ ಅರ್ಜಿಯ ವಿಚಾರಣೆ ಮುಂದೂಡುತ್ತ ಬಂದಿತ್ತು. ಇಂದು ವಿಚಾರಣೆ ಸಂಪೂರ್ಣಗೊಳಿಸಿರುವ ಕೋರ್ಟ್​, ಜಾಮೀನು ನೀಡಲು ನಿರಾಕರಿಸಿದೆ. ಜಾಮೀನು ಕೋರಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾ ಮಾಡಿದೆ.

    ವಿನಯ ಕುಲಕರ್ಣಿ ಪರವಾಗಿ ಶಶಿಕಿರಣ ಶೆಟ್ಟಿ ವಾದ ಮಂಡಿಸಿದ್ದರು. ಈ ಆರೋಪ ನಿರಾಧಾರವಾಗಿದ್ದು, ತಮ್ಮ ಕಕ್ಷಿದಾರರಿಗೆ ಜಾಮೀನು ಮಂಜೂರು ಮಾಡುವಂತೆ ಅವರು ಕೋರಿದ್ದರು. ಆದರೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎನ್.ನಟರಾಜ ಅವರು ವಾದವನ್ನು ಮಾನ್ಯ ಮಾಡದೇ ಅರ್ಜಿ ವಜಾಗೊಳಿಸಿದರು.

    VIDEO: ವಿಐಪಿ ಕಾರ್​ ಬಿಟ್ಟು ಆಟೋದಲ್ಲಿ ಪಾಕ್​ ಪ್ರಧಾನಿ​? ಹೀಗೇಕಾಯ್ತೆಂದು ಪ್ರಶ್ನಿಸ್ತಿದ್ದಾರೆ ಜನ!

    ನಶೆ ತಾರೆಗೆ ಅಂತೂ ಸಿಕ್ತು ಬೇಲ್​: 140 ದಿನಗಳ ಜೈಲುವಾಸದಿಂದ ಹೊರಬರಲಿರುವ ನಟಿ

    ವೀರ್ಯಾಣು ಕೊರತೆಯಿಂದ ಮಕ್ಕಳಾಗದಿದ್ದರೆ ಪತ್ನಿಗೆ ಇನ್ನೊಂದು ಮದುವೆಯಾಗಲು ಕೊಡುವಿರಾ?

    ಬೈಡೆನ್​ಗೆ ಕೊನೆಯ ಪತ್ರ ಬರೆದ ಟ್ರಂಪ್​: ಇದು ಸಿಕ್ರೇಟ್​- ನಾನು ಹೇಳಲ್ಲ ಎಂದ ನೂತನ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts