ಮೈಸೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಉಂಟಾದ ಜಗಳದಲ್ಲಿ ಬಾವನನ್ನೇ ಕೊಂದ ಬಾಮೈದ ಆತನ ಕೈಯನ್ನು ಕತ್ತರಿಸಿ ಚೀಲದೊಳಕ್ಕೆ ಪೊಲೀಸ್ ಠಾಣೆಗೆ ತಂದ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಗೌಸಿಯಾನಗರದಲ್ಲಿ ಈ ಬೆಚ್ಚಿಬೀಳಿಸುವ ಘಟನೆ ನಡೆದಿದೆ.
ಕಳೆದ ಐದು ತಿಂಗಳ ಹಿಂದೆಯಷ್ಟೇ ಮಹಮ್ಮದ್ ಸರಾನ್ ಮತ್ತು ರುಬೀನಾ ಮದುವೆಯಾಗಿದ್ದರು. ಇವರಿಬ್ಬರ ನಡುವೆ ಯಾವುದೋ ಕಾರಣಕ್ಕೆ ಜಗಳವಾಗಿದೆ. ಈ ಸಂದರ್ಭದಲ್ಲಿ ಬಾಮೈದ ಸರಾನ್ (27) ಮತ್ತು ಇತರರು ಜಗಳ ಬಿಡಿಸಲು ಹೋಗಿದ್ದಾರೆ.
ಇದರಿಂದ ಸಿಟ್ಟುಕೊಂಡ ರುಬಿನಾ ಸಹೋದರ ಖದೀರ್, ಬಾವನ ಕೈ ಕತ್ತರಿಸಿ ಕೊಲೆ ಮಾಡಿದ್ದಾನೆ. ನಂತರ ಚೀಲಕ್ಕೆ ಹಾಕಿಕೊಂಡು ಪೊಲೀಸ್ ಠಾಣೆಗೆ ತಂದಿದ್ದಾನೆ. ತಾನು ಕೊಲೆ ಮಾಡಿರುವುದಾಗಿ ಹೇಳಿ ಪೊಲೀಸರಿಗೆ ಶರಣಾಗಿದ್ದಾನೆ. ಈ ಬಗ್ಗೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆ.
ತಾಲಿಬಾನ್ ವಶಕ್ಕೆ ಸಂಪೂರ್ಣ ಅಫ್ಘಾನ್ : ರಕ್ತದೋಕುಳಿ ಹರಿಸಿದ್ದ ಉಗ್ರರಿಗೆ ಶರಣಾದ ಸರ್ಕಾರ!
ಅವಳು ಅಫ್ಘಾನಿಸ್ತಾನಿ, ಇವನು ಫ್ರಾನ್ಸ್ ಕುವರ: ಭಾರತದಲ್ಲಿ ಪ್ರೀತಿ- ಅಪರೂಪದ ಲವ್ ಸ್ಟೋರಿಗೆ ಕೋರ್ಟ್ನಿಂದ ಅಂಕಿತ