More

    ಮೈಸೂರಲ್ಲೊಂದು ಭಯಾನಕ ಕೃತ್ಯ: ಜಗಳ ಬಿಡಿಸಲು ಬಂದ ಬಾಮೈದುನನ ಕೈ ಕತ್ತರಿಸಿ ಠಾಣೆಗೆ ತಂದ ಬಾವ!

    ಮೈಸೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಉಂಟಾದ ಜಗಳದಲ್ಲಿ ಬಾವನನ್ನೇ ಕೊಂದ ಬಾಮೈದ ಆತನ ಕೈಯನ್ನು ಕತ್ತರಿಸಿ ಚೀಲದೊಳಕ್ಕೆ ಪೊಲೀಸ್​ ಠಾಣೆಗೆ ತಂದ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಗೌಸಿಯಾನಗರದಲ್ಲಿ ಈ ಬೆಚ್ಚಿಬೀಳಿಸುವ ಘಟನೆ ನಡೆದಿದೆ.

    ಕಳೆದ ಐದು ತಿಂಗಳ ಹಿಂದೆಯಷ್ಟೇ ಮಹಮ್ಮದ್ ಸರಾನ್ ಮತ್ತು ರುಬೀನಾ ಮದುವೆಯಾಗಿದ್ದರು. ಇವರಿಬ್ಬರ ನಡುವೆ ಯಾವುದೋ ಕಾರಣಕ್ಕೆ ಜಗಳವಾಗಿದೆ. ಈ ಸಂದರ್ಭದಲ್ಲಿ ಬಾಮೈದ ಸರಾನ್ (27) ಮತ್ತು ಇತರರು ಜಗಳ ಬಿಡಿಸಲು ಹೋಗಿದ್ದಾರೆ.

    ಇದರಿಂದ ಸಿಟ್ಟುಕೊಂಡ ರುಬಿನಾ ಸಹೋದರ ಖದೀರ್​, ಬಾವನ ಕೈ ಕತ್ತರಿಸಿ ಕೊಲೆ ಮಾಡಿದ್ದಾನೆ. ನಂತರ ಚೀಲಕ್ಕೆ ಹಾಕಿಕೊಂಡು ಪೊಲೀಸ್ ಠಾಣೆಗೆ ತಂದಿದ್ದಾನೆ. ತಾನು ಕೊಲೆ ಮಾಡಿರುವುದಾಗಿ ಹೇಳಿ ಪೊಲೀಸರಿಗೆ ಶರಣಾಗಿದ್ದಾನೆ. ಈ ಬಗ್ಗೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆ.

    ತಾಲಿಬಾನ್​ ವಶಕ್ಕೆ ಸಂಪೂರ್ಣ ಅಫ್ಘಾನ್​ : ರಕ್ತದೋಕುಳಿ ಹರಿಸಿದ್ದ ಉಗ್ರರಿಗೆ ಶರಣಾದ ಸರ್ಕಾರ!

    ಅವಳು ಅಫ್ಘಾನಿಸ್ತಾನಿ, ಇವನು ಫ್ರಾನ್ಸ್​ ಕುವರ: ಭಾರತದಲ್ಲಿ ಪ್ರೀತಿ- ಅಪರೂಪದ ಲವ್​ ಸ್ಟೋರಿಗೆ ಕೋರ್ಟ್​ನಿಂದ ಅಂಕಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts