ಬೆಂಗಳೂರು: ಸರ್ಕಾರಿ ಇಂಜಿನಿಯರಿಂಗ್ ಹಾಗೂ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳು, ಬೋಧಕರ ಸಾಮರ್ಥ್ಯ ವೃದ್ಧಿಗೆ ನೆರವಾಗುವ ಉದ್ದೇಶದಿಂದ ಕಾಲೇಜು ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯು ಇನ್ಫೋಸಿಸ್ ಸಂಸ್ಥೆಯ ಜತೆಗೆ ಮೂರು ಮಹತ್ವದ ಒಡಂಬಡಿಕೆ ಮಾಡಿಕೊಂಡಿದೆ.
ಶಿಕ್ಷಣಕ್ಕೆ ನೆರವು ಉಪಕ್ರಮ ಹಾಗೂ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯಡಿ ಈ ಒಪ್ಪಂದ ಏರ್ಪಟ್ಟಿದ್ದು, ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸಮಕ್ಷಮ ಇಲಾಖೆ ಆಯುಕ್ತ ಪಿ.ಪ್ರದೀಪ್, ಇನ್ಫೋಸಿಸ್ ನ ಸಿಒಒ ಪ್ರವೀಣ್ ರಾವ್ ಸಹಿ ಹಾಕಿ, ಕಡತವನ್ನು ವಿನಿಮಯ ಮಾಡಿಕೊಂಡರು. ಇದೇ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ರಾಜೇಂದ್ರ ರಾಯನ್ ತಿಳಿವಳಿಕೆ ಪತ್ರ ರುಜು ಹಾಕಿ ಕಡತ ವಿನಿಮಯ ಮಾಡಿಕೊಂಡರು
ಒಪ್ಪಂದಗಳು
* ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಇನ್ಫೋಸಿಸ್ನ ಸ್ಪ್ರಿಂಗ್ ಬೋರ್ಡ್ ಡಿಜಿಟಲ್ ವೇದಿಕೆ ಬಳಕೆಗೆ ಅವಕಾಶ.
* ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ಶಿಕ್ಷಕರಿಗೆ ತರಬೇತಿ, ವರ್ಚುವಲ್ ವೇದಿಕೆ ಮೂಲಕವು ವೃತ್ತಿ ಮಾರ್ಗದರ್ಶನ ಹಾಗೂ 15,000 ಡಿ-ಬಾಂಡೆಡ್ ಕಂಪ್ಯೂಟರ್ ಗಳ ಕೊಡುಗೆ ನೀಡಲಿದೆ.
* ಈ ಕಂಪ್ಯೂಟರ್ ಗಳಿಗೆ ಬೇಕಾದ ಸಾಫ್ಟ್ವೇರ್ ಅಳವಡಿಕೆ ಹಾಗೂ ಕಾಲೇಜುಗಳಿಗೆ ಸಾಗಣೆ ಜವಾಬ್ದಾರಿಯನ್ನು ರೋಟರಿ ಸಂಸ್ಥೆ ನಿರ್ವಹಿಸಲಿದೆ.
* ಈ ಒಡಂಬಡಿಕೆಯಿಂದ 75000ಕ್ಕೂ ಹೆಚ್ಚು ಪಾಲಿಟೆಕ್ನಿಕ್, 15,000 ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದ್ದು, ಉದ್ಯಮಗಳ ಬೇಡಿಕೆಗೆ ತಕ್ಕಂತೆ ಕೌಶಲಪೂರ್ಣ ಉದ್ಯೋಗಿಗಳ ಪೂರೈಕೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿ ಇರಬೇಕೆಂಬ ಸರ್ಕಾರದ ಒತ್ತಾಸೆಗೆ ಇಂಬು ನೀಡಿದಂತಾಗಿದೆ ಎಂದು ಅಶ್ವತ್ಥ ನಾರಾಯಣ ಹರ್ಷ ವ್ಯಕ್ತಪಡಿಸಿದರು.
ಉದ್ಯೋಗ ಪಡೆಯಲು ಲಕ್ಷಲಕ್ಷ ಲಂಚ ಕೊಡ್ತೀರಾ? ನೇಮಕಾತಿ ಪತ್ರ ಹಿಡಿದು ಹೋದವರಿಗೆ ಏನ್ ಗತಿಯಾಯ್ತು ನೋಡಿ…
ಕಳ್ಳತನ ಮಾಡಲು ಬೆತ್ತಲಾಗಿ ಹೋಗ್ತಿದ್ದ, ಹೊರಗೆ ಹೆಂಡ್ತಿ ಕಾಯ್ತಿದ್ಲು! ಬಾಗಲಕೋಟೆ ಖತರ್ನಾಕ್ ದಂಪತಿ ಅರೆಸ್ಟ್