More

    ದೇವಮಾನವನ ಸಂಬಂಧಿ ಮದುವೆಯಲ್ಲಿ ಶೂಟ್‌ಔಟ್‌- ಸರಪಂಚ್‌ ಸಾವು: ಜೈ ಶ್ರೀರಾಮ್‌ ಎಂದು ಕೂಗಿದವರಾರು?

    ಭೋಪಾಲ್​: ಮದುವೆ ನಡೆಯುತ್ತಿದ್ದ ಸಂದರ್ಭದಲ್ಲಿ ಬಂದೂಕು ಹಿಡಿದು ಬಂದವರು ಎರ್ರಾಬಿರ್ರಿಯಾಗಿ ಗುಂಡು ಹೊಡೆದಿರುವ ಭಯಾನಕ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಐದು ಮಂದಿಯ ಕೊಲೆ ಮಾಡಿ ಜೈಲಿನಲ್ಲಿರುವ ಸ್ವಯಂಘೋಷಿತ ದೇವಮಾನವ ರಾಂಪಾಲ್​ ಬೆಂಬಲಿಗರ ಮದುವೆ ನಡೆಯುತ್ತಿತ್ತು ಎನ್ನಲಾಗಿದೆ. ಹರಿಯಾಣದ ರಾಂಪಾಲ್‌ ಮಗು ಸೇರಿ ಐವರು ಮಹಿಳೆಯರ ಹತ್ಯೆ ಪ್ರಕರಣದಲ್ಲಿ ಸದ್ಯ ಜೈಲಿನಲ್ಲಿ ಇದ್ದಾನೆ. ಈ ಮದುವೆಯನ್ನು ಕಾನೂನು ಬಾಹಿರವಾಗಿ ಆಯೋಜಿಸಲಾಗಿದೆ ಎಂದು ಆರೋಪಿಸಿ, ಶಸ್ತ್ರಗಳೊಂದಿಗೆ ಬಂದ ದಾಳಿಕೋರರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಮದುವೆ ವಿರೋಧಿಸಿ ಪ್ರತಿಭಟನೆ ಕೂಡ ನಡೆದಿದ್ದವು.

    ನಮ್ಮ ಪಂಗಡದಲ್ಲಿ 17 ನಿಮಿಷದಲ್ಲಿ ಈ ಮದುವೆಗಳು ನಡೆಯುತ್ತವೆ. ಆದರೆ ಇಂಥ ವಿವಾಹಗಳು ಹಿಂದೂ ಧರ್ಮಕ್ಕೆ ವಿರೋಧ ಎಂದು ದಾಳಿ ಮಾಡಲಾಗಿದೆ ಎಂದು ರಾಂಪಾಲ್‌ ಅನುಯಾಯಿಗಳು ಆರೋಪಿಸುತ್ತಿದ್ದಾರೆ. ಆದ್ದರಿಂದಲೇ ದಾಳಿಯ ವೇಳೆ ಜೈ ಶ್ರೀರಾಮ್‌ ಎಂದು ಘೋಷಣೆ ಕೂಗಲಾಗಿದೆ. ಆದ್ದರಿಂದ ಬಲಪಂಥೀಯರು ಈ ದಾಳಿ ನಡೆಸಿದ್ದಾರೆ ಎನ್ನುವುದು ಅವರ ಆರೋಪ. ಆದರೆ ಈ ಘೋಷಣೆ ಕೂಗಲಾಗಿತ್ತೆ? ಕೂಗಿದವರು ಯಾರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

    ಈ ದಾಳಿಯ ವಿಡಿಯೋ ವೈರಲ್‌ ಆಗುತ್ತಿದೆ. ವಿಡಿಯೋದಲ್ಲಿ ದಾಳಿಕೋರರು ನುಗ್ಗುತ್ತಿದ್ದಂತೆಯೇ ಜನರು ಭಯದಿಂದ ಓಡಿಹೋಗುತ್ತಿರುವುದನ್ನು ನೋಡಬಹುದಾಗಿದೆ. ಮಾಜಿ ಸರ್​ಪಂಚ್​ ದೇವಿಲಾಲ್​ ಮೀನಾ ಅವರಿಗೆ ಗುಂಡು ತಗುಲಿ ಅಸುನೀಗಿದ್ದಾರೆ. ನಂತರ ದಾಳಿಕೋರರನ್ನು ಅತಿಥಿಗಳೇ ಹಿಮ್ಮೆಟ್ಟಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದು.
    ಘಟನೆಗೆ ಸಂಬಂಧಿಸಿದಂತೆ 11 ಮಂದಿ ವಿರುದ್ಧ ಕೇಸ್ ದಾಖಲಾಗಿದ್ದು, ಮೂವರನ್ನು ಬಂಧಿಸಲಾಗಿದೆ.

    ಬೇಡ ಬೇಡವೆಂದರೂ ಲೈಂಗಿಕ ಕ್ರಿಯೆಗೆ ಮುಂದಾದ ಪತಿಯ ಮರ್ಮಾಂಗ ಕತ್ತರಿಸಿದ ಪತ್ನಿ! ಆಸ್ಪತ್ರೆಗೆ ಪತಿಯ ದೌಡು

    VIDEO: ‘ಅಂದು ಅಪಹಾಸ್ಯ ಮಾಡಿದರು, ಖಿನ್ನತೆಗೆ ಜಾರಿದೆ… ನೋವನ್ನೇ ಚಾಲೆಂಜ್‌ ಆಗಿ ಸ್ವೀಕರಿಸಿ ಮಿಸ್‌ ಯೂನಿವರ್ಸ್‌ ಆದೆ!’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts