ಮುಂಬೈ: ಆಯಸ್ಸು ಇದ್ದರೆ ಎಂಥ ಬಂಡೆಗಲ್ಲು ಉರುಳಿಬಿದ್ದರೂ ಸಾಯುವುದಿಲ್ಲ, ಎಷ್ಟೇ ಎತ್ತರದಿಂದ ಧುಮುಕಿದರೂ ಉಸಿರು ಹೋಗುವುದಿಲ್ಲ ಎಂಬಿತ್ಯಾದಿ ಮಾತುಗಳಿವೆ. ಅಂಥದ್ದೇ ಒಂದು ಉದಾಹರಣೆಗೆ ಸಾಕ್ಷಿಯಾಗಿದೆ ಇಲ್ಲೊಂದು ಲೈವ್ ಆತ್ಮಹತ್ಯೆ ಪ್ರಯತ್ನ.
ಇದು ನಡೆದಿರುವುದು ಮುಂಬೈನ ದುಲೆ ಎಂಬಲ್ಲಿ. 23 ವರ್ಷದ ವ್ಯಕ್ತಿಯೊಬ್ಬ ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಈಗೆಲ್ಲಾ ಆತ್ಮಹತ್ಯೆ ಮಾಡಿಕೊಳ್ಳುವವರು ಫೇಸ್ಬುಕ್ ಲೈವ್ ಮಾಡುವುದು ಸಾಮಾನ್ಯ ಎನಿಸಿಬಿಟ್ಟಿದೆ. ಅದೇ ರೀತಿ ಈ ಯುವಕ ಕೂಡ ಫೇಸ್ಬುಕ್ ಲೈವ್ಗೆ ಬಂದಿದ್ದಾನೆ. ಅಳುತ್ತಲೇ ತನಗಾಗಿರುವ ಕಷ್ಟ, ತನ್ನ ನೋವು, ತಾನೇಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಇತ್ಯಾದಿ ಕಥೆ ಹೇಳಿದ್ದಾನೆ.
ಇಷ್ಟು ಹೇಳುತ್ತಲೇ ಕುತ್ತಿಗೆಯನ್ನು ರೇಸರ್ನಿಂದ ಕತ್ತರಿಸಿಕೊಂಡುಬಿಟ್ಟಿದ್ದಾನೆ. ಎಲ್ಲೋ ಕುಳಿತು ಈ ಯುವಕನ ಕಷ್ಟ ಕೇಳುತ್ತಿದ್ದವರು ತಡೆಯಲು ಪ್ರಯತ್ನಿಸುವುದಾದರೂ ಹೇಗೆ? ಆದ್ದರಿಂದ ಎಲ್ಲರೂ ಆತನ ಕಥೆ ಮುಗಿಯಿತು ಎಂದೇ ಭಾವಿಸಿ ಮರುಕಪಡುತ್ತಲಿದ್ದರು.
ಆದರೆ ಅಲ್ಲಿ ಆಯಿತೊಂದು ವಿಚಿತ್ರ. ಇನ್ನೇನು ಅವನ ಉಸಿರು ಹೋಗುತ್ತದೆ ಎನ್ನುವಾಗಲೇ ನಡೆದ ವಿಚಿತ್ರವಿದು.
ಅದೇನೆಂದರೆ ಈ ಲೈವ್ ವೀಡಿಯೋ ಅನ್ನು ಐರ್ಲ್ಯಾಂಡ್ನಲ್ಲಿನ ಫೇಸ್ಬುಕ್ ಮುಖ್ಯ ಕಚೇರಿಯ ಸಿಬ್ಬಂದಿ ನೋಡಿದ್ದಾರೆ. ಈ ಯುವಕನನ್ನು ಕಾಪಾಡಲು ಪ್ರಯತ್ನಿಸಿದ ಸಿಬ್ಬಂದಿ ಕೂಡಲೇ ಮುಂಬೈ ಸೈಬರ್ ಡಿಸಿಪಿ ರಶ್ಮಿ ಕರಂಡಿಕರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ. ಮುಂಬೈನ ವ್ಯಕ್ತಿಯೊಬ್ಬ ಫೇಸ್ಬುಕ್ ಲೈವ್ನಲ್ಲಿ ಬಂದಿದ್ದು, ಆತನನ್ನು ಪತ್ತೆ ಹಚ್ಚಿ ರಕ್ಷಿಸುವಂತೆ, ಆತನ ಪೋಟೋ ಹಾಕೂ ಲೈವ್ ವೀಡಿಯೋ ಲಿಂಕ್ ಶೇರ್ ಮಾಡಿದ್ದಾರೆ.
ತಡ ಮಾಡದ ಮುಂಬೈನ ಸೈಬರ್ ಪೊಲೀಸರು, ಈ ಯುವಕನ ಲೊಕೇಷನ್ ಪತ್ತೆ ಹಚ್ಚಿದ್ದಾರೆ. ದುಲೆ ಪ್ರಾಂತದಲ್ಲಿ ಆತನ ಮನೆ ಇರೋದನ್ನು ಪತ್ತೆ ಹಚ್ಚಿದ ಅವರು, ಹತ್ತೇ ನಿಮಿಷದಲ್ಲಿ ಅಲ್ಲಿಗೆ ತೆರಳಿದ್ದಾರೆ. ಅದಾಗಲೇ ಯುವಕ ಕತ್ತು ಕುಯ್ದುಕೊಂಡು, ರಕ್ತದ ಮಡುವಿನಲ್ಲಿ ಬಿದ್ದಿದ್ದ. ಆದರೆ ಆತ ಉಸಿರಾಡುತ್ತಿದ್ದ. ಆತನನ್ನು ಕೂಡಲೇ ಅಂಬ್ಯುಲೆನ್ಸ್ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ.
ಸದ್ಯ ಯುವಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟಿನಲ್ಲಿ, ಫೇಸ್ಬುಕ್ ಲೈವ್ ಬಂದುದಕ್ಕೆ ಯುವಕನ ಪ್ರಾಣ ಉಳಿದಿದೆ. 10-15 ನಿಮಿಷದಲ್ಲಿಯೇ ದೂರದ ದೇಶದಿಂದ ಮುಂಬೈ ನಿವಾಸಿಯೊಬ್ಬನ ಪ್ರಾಣ ಉಳಿದಿರುವುದು ವಿಚಿತ್ರವೇ ಸರಿ.
ಅರ್ಚಕರ ಮದುವೆಯಾಗುವ ವಧುಗಳಿಗೆ ಬಂಪರ್: ಸಿಗಲಿದೆ ಭರ್ಜರಿ ಮೊತ್ತ- ನಾಳೆ ಸಿಎಂ ಚಾಲನೆ
ಮಗಳು ದೊಡ್ಡವಳಾಗಿದ್ದಾಳೆ, ಅವಳ ಆರೈಕೆ ಹೇಗೆ ಮಾಡುವುದು? ತಿಂಡಿ ಯಾವುದು ಕೊಡಬೇಕು?
ವಿಚ್ಛೇದನ ನೀಡದೇ ಮರುವಿವಾಹವಾದಾಕೆಗೆ ಮಗುವಿನ ಹಕ್ಕು ಇದ್ಯಾ? ಹೈಕೋರ್ಟ್ ಏನು ಹೇಳಿದೆ ನೋಡಿ…
ಒಬ್ಬನ ಅಂತ್ಯಸಂಸ್ಕಾರಕ್ಕೆ ಬಂದು ಹೆಣವಾದ 16 ಮಂದಿ: ₹10 ಲಕ್ಷ ಪರಿಹಾರ, ಉದ್ಯೋಗದ ಭರವಸೆ