More

    ನಸುಕಿನಲ್ಲಿ ನಿದ್ದೆಗೆ ಜಾರಿದ ಬಸ್ಸಿನ ಚಾಲಕ- ನದಿಗೆ ಉರುಳಿದ ಬಸ್‌, ಮೂವರ ಸಾವು; ಹಲವರ ಸ್ಥಿತಿ ಚಿಂತಾಜನಕ

    ಅಲಿರಾಜ್‌ಪುರ (ಮಧ್ಯಪ್ರದೇಶ): ಮಧ್ಯಪ್ರದೇಶದ ಅಲಿರಾಜ್‌ಪುರಕ್ಕೆ ತೆರಳುತ್ತಿದ್ದ ಬಸ್‌ವೊಂದು ನದಿಗೆ ಉರುಳಿ ಬಿದ್ದು ಮೂವರು ಪ್ರಯಾಣಿಕರು ಮೃತಪಟ್ಟಿರುವ ಘಟನೆ ನಡೆದಿದೆ. ಈ ಘಟನೆಯಲ್ಲಿ 28 ಮಂದಿ ಗಾಯಗೊಂಡಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

    ನಸುಕಿನ ವೇಳೆ ಈ ಘಟನೆ ಸಂಭವಿಸಿದೆ. ಗುಜರಾತ್‌ನ ಛೋಟಾ ಉದೇಪುರ್‌ನಿಂದ ಇವರೆಲ್ಲಾ ತೆರಳುತ್ತಿದ್ದರು. ಬಸ್ಸಿನ ಚಾಲಕ ನಿದ್ದೆ ಮಾಡಿದ್ದೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಮೃತಪಟ್ಟವರನ್ನು ಒಂದು ವರ್ಷದ ಮಗು, ಕೈಲಾಶ್ ಮೇದಾ (48) ಮತ್ತು ಮೀರಾಬಾಯಿ (46) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಗುಜರಾತ್‌ ಮೂಲದವರು.

    ಜಿಲ್ಲಾ ಕೇಂದ್ರದಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಚಂದ್‌ಪುರ ಗ್ರಾಮದ ಬಳಿ ಈ ದುರ್ಘಟನೆ ಸಂಭವಿಸಿದೆ. ಬಸ್​ ಮೇಲ್​ಖೋದ್ರಾ ನದಿಯ ಸೇತುವೆ ಮೇಲೆ ಹೋಗುತ್ತಿದ್ದಾಗ ಬಸ್ ಚಲಾಯಿಸುತ್ತಿದ್ದ ವೇಳೆ ಚಾಲಕ ನಿದ್ರೆಗೆ ಜಾರಿದ್ದಾನೆ. ನಿಯಂತ್ರಣ ತಪ್ಪಿದ ಬಸ್‌ ನದಿಗೆ ಉರುಳಿಬಿದ್ದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.

    ಎಸ್​ಪಿ ಮನೋಜ್​ಕುಮಾರ್​ ಹಾಗೂ ಜಿಲ್ಲಾಧಿಕಾರಿ ಮನೋಜ್ ಪುಷ್ಪ್ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಗಾಯಾಳುಗಳಿಗೆ ಸೂಕ್ತ ವೈದ್ಯಕೀಯ ನೆರವು ನೀಡುವಂತೆ ವೈದ್ಯರಿಗೆ ಸೂಚಿಸಿದ್ದಾರೆ.

    VIDEO: ವಿಜಯನಗರ ಕ್ರೀಡಾಂಗಣದಲ್ಲಿ ಪೊಲೀಸರಿಂದ ‘ಟಿಣಿಂಗ, ಮಿಣಿಂಗ ಟಿಶ್ಯಾ’- ಖುಷಿಯ ಮೂಡ್‌ನಲ್ಲಿ ಖಾಕಿಪಡೆ

    ಪ್ರಾಣಕ್ಕೆ ಕುತ್ತಾಯ್ತು ಪರೋಪಕಾರ! ಆಡಿನ ಮರಿ ರಕ್ಷಿಸಲು ಹೋಗಿ ಜೀವ ಕಳೆದುಕೊಂಡ ಮಂಗಳೂರು ಯುವಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts