More

    ಎರಡು ಬಸ್ಸುಗಳ ನಡುವೆ ಭೀಕರ ಅಪಘಾತ: ಐವರ ಸಾವು- ಹಲವರ ಸ್ಥಿತಿ ಚಿಂತಾಜನಕ

    ಹರಿಯಾಣ: ಎರಡು ಬಸ್‌ಗಳು ಡಿಕ್ಕಿಯಾದ ಪರಿಣಾಮ ಐವರು ಮೃತಪಟ್ಟಿರುವ ಘಟನೆ ಹರಿಯಾಣದ ಅಂಬಾಲಾ-ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

    ಚಲಿಸುತ್ತಿದ್ದ ಬಸ್‌ಗೆ ಹಿಂದಿನಿಂದ ಬಂದ ಮತ್ತೊಂದು ಬಸ್‌ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ. ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೀಲಿಂಗ್‌ ಟಚ್‌ ಆಸ್ಪತ್ರೆಯ ಸಮೀಪದಲ್ಲಿ ಈ ದುರಂತ ನಡೆದಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ದೆಹಲಿಯತ್ತ ಹೋಗುತ್ತಿದ್ದ ಬಸ್‌ಗೆ ಹಿಂಬದಿಯಿಂದ ಬಂದ ಮತ್ತೊಂದು ಬಸ್‌ ಡಿಕ್ಕಿ ಹೊಡೆದಿದೆ. ಎರಡು ಬಸ್‌ಗಳು ನಜ್ಜುಗುಜ್ಜಾಗಿವೆ. ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಎಸ್‌ಐ ನರೇಶ್‌ ಮಾಹಿತಿ ನೀಡಿದ್ದಾರೆ.

    ಈ ದಾರಿ ಬದ್ಲು ಆ ದಾರಿಯಲ್ಲಿ ಹೋದ ಸಿಎಂ ಬೆಂಗಾವಲು ವಾಹನ: ಸೀಟಿ ಊದಿ ಊದಿ ಹೈರಾಣಾದ ಪೊಲೀಸರು!

    ಜೀನ್ಸ್‌ ಧರಿಸಿ, ಮೊಬೈಲ್‌ ಇಟ್ಕೊಂಡ ಹುಡುಗಿಯರಿಗೆ ಮೋದಿ ಇಷ್ಟವಾಗಲ್ಲ ಎಂದ ದಿಗ್ವಿಜಯ ಸಿಂಗ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts