ಲಖನೌ: ಉತ್ತರ ಪ್ರದೇಶ ಎಂದಾಕ್ಷಣ ನೆನಪಾಗುವುದು ಹಾಥರಾಸ್ ಮತ್ತು ಲಖೀಂಪುರ. ಗ್ಯಾಂಗ್ರೇಪ್ ಪ್ರಕರಣದಲ್ಲಿ ಕಳೆದ ವರ್ಷ ಹಾಥರಾಸ್ ಬಿಜೆಪಿ ಸರ್ಕಾರವನ್ನು ಭಾರಿ ಮುಜುಗರಕ್ಕೆ ಈಡು ಮಾಡಿದ್ದರೆ, ಕೃಷಿ ಕಾಯ್ದೆ ವಿರೋಧಿಸಿ ನಡೆದ ಹಿಂಸಾಚಾರ ಪ್ರಕರಣದಿಂದ ಲಖೀಂಪುರ ವಿದೇಶಗಳಲ್ಲಿಯೂ ಸಂಚಲನ ಸೃಷ್ಟಿಸಿತ್ತು. ವಿರೋಧ ಪಕ್ಷಗಳು ಈ ಎರಡು ಪ್ರದೇಶಗಳನ್ನು ಮುಂದಿಟ್ಟುಕೊಂಡು ಉತ್ತರ ಪ್ರದೇಶದ ಆಡಳಿತಾರೂಢ ಬಿಜೆಪಿ ಮೇಲೆ ಹರಿಹಾಯ್ದಿದ್ದವು. ಮಾತ್ರವಲ್ಲದೇ ಚುನಾವಣೆ ವೇಳೆಯೂ ಈ ಪ್ರಕರಣಗಳನ್ನೇ ಬಂಡವಾಳ ಮಾಡಿಕೊಂಡು ಪ್ರಚಾರ ನಡೆಸಿದ್ದವು.
‘
ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೂ ಈ ವಿಷಯಗಳು ಚರ್ಚೆ ಆಗಿತ್ತು. ಈ ಎರಡು ಪ್ರಕರಣಗಳಿಂದ ಬಿಜೆಪಿಗೆ ಹಿನ್ನಡೆಯಾಗಲಿದೆ ಎಂಬ ವಿಶ್ಲೇಷಣೆ ಕೇಳಿ ಬಂದಿದ್ದವು.
ಆದರೆ ಇದೀಗ ವಿರೋಧ ಪಕ್ಷಗಳೂ ತಲೆತಗ್ಗಿಸುವಂಥ ಫಲಿತಾಂಶ ಸದ್ಯ ಈ ಎರಡೂ ಪ್ರದೇಶಗಳಲ್ಲಿ ಕಂಡುಬಂದಿದೆ. ಏಕೆಂದರೆ ಹಾಥರಾಸ್ ಮತ್ತು ಲಖೀಂಪುರ ಜಿಲ್ಲೆಯ ಎಲ್ಲ ಕೇತ್ರದಲ್ಲಿ ಬಿಜೆಪಿ ಆರಂಭಿಕ ಮುನ್ನಡೆ ಸಾಧಿಸಿದೆ. ಇದರಿಂದಾಗಿ, ಮತದಾರರು ಈ ಪ್ರಕಣದ ಬಗ್ಗೆ ತಲೆ ಕೆಡಿಸಿಕೊಳ್ಳದೇ ಬಿಜೆಪಿಗೆ ಭರ್ಜರಿ ಗೆಲುವು ತರಿಸಿಕೊಡುವಲ್ಲಿ ಮುಂದಾಗಿದ್ದಾರೆ.
ಒಟ್ಟು 403 ಕ್ಷೇತ್ರಗಳ ಪೈಕಿ ಬಹುಮತಕ್ಕೆ 203 ಸ್ಥಾನಗಳ ಅಗತ್ಯವಿದೆ. 2017ರ ಚುನಾವಣೆಯಲ್ಲಿ ಬಿಜೆಪಿ 312, ಬಿಎಸ್ಪಿ 19, ಎಸ್ಪಿ+ಕಾಂಗ್ರೆಸ್ 54, ಇತರರು 18 ಸ್ಥಾನವನ್ನು ಗೆದ್ದಿದ್ದರು.
ಬೆಳಗ್ಗೆ 10 ಗಂಟೆಯ ವೇಳೆಗೆ, ಬಿಜೆಪಿ 270, ಎಸ್ಪಿ 106, ಬಿಸ್ಪಿ 3, ಕಾಂಗ್ರೆಸ್ 4, ಇತರರು 5 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಮ್ಯಾಜಿಕ್ ನಂಬರ್ ದಾಟಿದ ಬಿಜೆಪಿ: ಮತ್ತೆ ಅಧಿಕಾರದ ಗದ್ದುಗೆ ಏರುವತ್ತ ಸಿಎಂ ಯೋಗಿ ಹೆಜ್ಜೆ