ಬೆಂಗಳೂರು: ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಗರಂ ಆಗಿರುವ ಶಾಸಕ ಸಿಟಿ ರವಿ, ಯಾರ ಬಳಿಯಾದ್ರು ಆಧಾರ ಇದ್ರೆ ತನಿಖಾ ಸಂಸ್ಥೆ ಮುಂದೆ ಬಹಿರಂಗ ಪಡಿಸಲಿ ಎಂದು ಸವಾಲು ಎಸೆದಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಕಾಂಗ್ರೆಸ್ಗೆ ಯಾರ ಮೇಲೆ ನಂಬಿಕೆ ಇದೆಯೋ ಅಲ್ಲಿ ದಾಖಲೆ ಕೊಡಲಿ, ನ್ಯಾಯಾಂಗದ ಮೇಲೆ ನಂಬಿಕೆ ಇದ್ರೆ ಅಲ್ಲಿಯೇ ದಾಖಲೆ ತೋರಿಸಲಿ, ಇಲ್ಲವೇ ಸಿಬಿಐ ಮೇಲೆ ವಿಶ್ಚಾಸ ಇದ್ರೆ ಅದಕ್ಕೆ ಕೊಡಲಿ ಎಂದು ತಿರುಗೇಟು ನೀಡಿದರು.
ಬಿಟ್ ಕಾಯಿನ್ ಬಗ್ಗೆ ತನಿಖೆ ಮಾಡಿಸಿದ್ದು ಬಿಜೆಪಿ ಸರ್ಕಾರ. ಅದಕ್ಕಿಂತ ಮುಂಚೆ ಶ್ರೀಕಿಗೆ ಯಾರ ಜೊತೆ ಸಂಬಂಧ ಇತ್ತು, ಮಲ್ಯ ಟವರ್ನಲ್ಲಿ ಆತ ಯಾರ ಜೊತೆ ಪಾರ್ಟಿ ಮಾಡ್ತಿದ್ದ. ಬಿಜೆಪಿ ಎಂಎಲ್ಎಎ ಮಗನ ಜೊತೆಗಾ..? ಅಥವಾ ಕಾಂಗ್ರೆಸ್ ಎಂಎಲ್ಎ ಮಗನ ಜೊತೆಗಾ..?ಎಂದು ಚಾಟಿ ಬೀಸಿದ್ದಾರೆ.
ಅವತ್ತು ಮಲ್ಯ ಟವರ್ನಲ್ಲಿ ಶಾಸಕನ ಮಗ ದೌರ್ಜನ್ಯ ಮಾಡಿದಾಗ ಆತ ಯಾರ ಜೊತೆ ಇದ್ದ? ಗಾಳಿಯಲ್ಲಿ ಗುಂಡು ಹಾರಿಸೋದು ಬಿಟ್ಡು, ಆಧಾರ ಕೊಟ್ಟು ತನಿಖೆ ಮಾಡಿಸಲಿ, ಈ ಪ್ರಕರಣವನ್ನು ಸರ್ಕಾರ ಮುಚ್ಚಿಟ್ಟಿಲ್ಲ, ತನಿಖೆ ನಡೆಸುತ್ತಿದೆ. ನಿರ್ದಿಷ್ಟವಾದ ಆಧಾರ ಇದ್ರೆ ಯಾರಿಗಾದರೂ ಕೊಡಲಿ ಎಂದರು
ಯಾವ ನ್ಯಾಯಾಂಗದ ಮೇಲೂ ಕಾಂಗ್ರೆಸ್ಗೆ ನಂಬಿಕೆ ಇಲ್ಲದಿದ್ದರೆ ಇಟಲಿಗೆ ಆದ್ರೂ ಕೊಡಲಿ. ತಪ್ಪು ಮಾಡಿದ್ರೆ, ಯಾವುದೇ ಪಾರ್ಟಿ ಆಗಿರಲಿ, ಉಪ್ಪು ತಿಂದೋರು ನೀರು ಕುಡೀತ್ತಾರೆ. ನಾವು ಕೂಡ ಒಂದು ಗುಂಡು ಹಾರಿಸಬಹುದ, ಒಬ್ಬ ಮಾಜಿ ಮುಖ್ಯಮಂತ್ರಿ ಮಗನಿಗೆ ಸಂಬಂಧ ಇದೆ ಅಂತಾ ಹೇಳಬಹುದು, ಅವಾಗ ಎಲ್ಲಾ ಮಾಜಿ ಸಿಎಂಗಳು ಬೆನ್ನು ಮುಟ್ಟಿ ನೋಡಿಕೊಳ್ತಾರೆ. ಆ ಮನುಷ್ಯ ಪಂಚೆ ಉಟ್ಕೊಂಡು ಬರ್ತಾರಲ್ಲ ಅವರದ್ದೇ ಅಂತಾ ಹೇಳಬಹುದು, ಅವಾಗ ಪಂಚೆ ಉಟ್ಟೋರೆಲ್ಲಾ ಮುಟ್ಟಿ ನೋಡಿಕೊಳ್ಳುತ್ತಾರೆ, ಆದರೆ ಹಾಗಂತ ಆ ರೀತಿ ನಾವು ಹೇಳೋಕೆ ಆಗುತ್ತಾ? ಅನುಮಾನ ರೀತಿಯ ಹೇಳಿಕೆ ಬಿಟ್ಟು, ಸ್ಪಷ್ಟ ಪುರಾವೆ ಇಡಲಿ. ನಿರ್ದಿಷ್ಟವಾಗಿ ಅವರು ಹೆಸರು ಹೇಳಲಿ ಎಂದು ಕೆಂಡ ಕಾರಿದ್ದಾರೆ.
ಮುಂದುವರೆದಿದೆ ಬಿಜೆಪಿ ಮುಖಂಡರ ಮೇಲೆ ಶೂಟ್ಔಟ್: ಸಾವು-ಬದುಕಿನ ನಡುವೆ ಹೋರಾಡುತ್ತಿರುವ ನಾಯಕ
ಅಡಕೆ ಬೆಳೆಗಾರರಿಗೆ ಶಾಕ್ ನೀಡಿದ ಸಂಸದ- ಬ್ಯಾನ್ ಮಾಡಿ, ಜನರು ಸೇವಿಸದಂತೆ ನಿಷೇಧಿಸಿ ಎಂದು ಪ್ರಧಾನಿಗೆ ಪತ್ರ!