ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ಆತ್ಮನಿರ್ಭರ್ ಭಾರತ ಯೋಜನೆಯಿಂದಾಗಿ ಇದಾಗಲೇ ಹಲವಾರು ಯುವಕರು ಉದ್ಯೋಗಾವಕಾಶ ಕಂಡುಕೊಂಡಿದ್ದಾರೆ, ಇದರ ಜತೆಗೆ ವಿದೇಶಿ ವಸ್ತುಗಳ ಮೇಲಿನ ಅವಲಂಬನೆ ತಗ್ಗಿದ್ದು, ಭಾರತಕ್ಕೆ ಹಲವಾರು ರೀತಿಯಲ್ಲಿ ಉಪಯೋಗಗಳೂ ಆಗಿವೆ.
ಅದರ ಮುಂದುವರೆದಿರುವ ಭಾಗವಾಗಿ ಇದೀಗ ಆತ್ಮನಿರ್ಭರ್ ಭಾರತ್ ಯೋಜ್ಗಾರ್ ಯೋಜನೆ 3.0 ಘೋಷಣೆಯಾಗಿದೆ. ಈ ಕುರಿತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ನಡೆದಿರುವ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಹೊಸದಾಗಿ ಕಡಿಮೆ ಸಂಬಳದ ಉದ್ಯೋಗ ಪಡೆದುಕೊಂಡಿರುವ ಯುವಜನರಿಗೆ ಈ ಯೋಜನೆ ಬಹು ಮಹತ್ತರ ಪಾತ್ರ ವಹಿಸಿದೆ ಎಂದು ನಿರ್ಮಲಾ ಹೇಳಿದ್ದಾರೆ.
ಇದನ್ನೂ ಓದಿ: ಹೊಸ ವರ್ಷಾಚರಣೆಗೆ ಕಡಿವಾಣ- ಇಲ್ಲಿ ಮೋಜು ಮಸ್ತಿ ಮಾಡಲು ಬಯಸಿದವರಿಗೆ ನಿರಾಸೆ
ಏನಿದು ಯೋಜನೆ?
ಶೇ.12ರಷ್ಟು ನೌಕರರ ಇಪಿಎಫ್ ಹಾಗೂ ಶೇ.12ರಷ್ಟು ಸಂಸ್ಥೆಯ ಇಪಿಎಫ್ ಸೇರಿದಂತೆ ಒಟ್ಟು ಶೇ.24ರಷ್ಟನ್ನು ಸಂಪೂರ್ಣವಾಗಿ ಕೇಂದ್ರ ಸರ್ಕಾರವೇ ಭರಿಸುವ ಯೋಜನೆ ಇದಾಗಿದೆ. ಈ ಯೋಜನೆಯು ಅಕ್ಟೋಬರ್ 1ರಿಂದ ಅನ್ವಯ ಆಗುವಂತೆ ಜಾರಿಗೆ ಬಂದಿದ್ದು, 2021ರ ಜೂನ್ 30ರವರೆಗೂ ಜಾರಿಯಲ್ಲಿ ಇರಲಿದೆ.
ಇದರ ಲಾಭ ಪಡೆಯಬೇಕು ಎಂದರೆ, ನೌಕರರ ಭವಿಷ್ಯ ನಿಧಿ ಸಂಸ್ಥೆಗೆ (ಇಪಿಎಫ್ಒ) ಅಡಿ ನೋಂದಾವಣಿಗೊಂಡಿರುವ ಸಂಸ್ಥೆಗಳು ನೇಮಕ ಮಾಡಿಕೊಂಡಿರುವ ಉದ್ಯೋಗಿಗಳು ಇಪಿಎಫ್ಒ ಯೋಜನೆಯ ವ್ಯಾಪ್ತಿಗೆ ಬರದಿದ್ದರೆ ಹಾಗೂ 2020ರ ಮಾರ್ಚ್1 ರಿಂದ ಸೆಪ್ಟೆಂಬರ್ 30ರ ಒಳಗೆ ಉದ್ಯೋಗ ಕಳೆದುಕೊಂಡಿರುವ ನೌಕರರು ಇದರ ಪ್ರಯೋಜನ ಪಡೆಯಲಿದ್ದಾರೆ. 15 ಸಾವಿರ ರೂಪಾಯಿಗಳಿಗಿಂತ ಕಡಿಮೆ ಸಂಬಳ ಹೊಂದಿರುವ ಉದ್ಯೋಗಿಗಳಿಗೆ ಇದರ ಪ್ರಯೋಜನ ಸಿಗಲಿದೆ.
50ಕ್ಕಿಂತ ಕಡಿಮೆ ಸಿಬ್ಬಂದಿ ಇರುವ ಸಂಸ್ಥೆಗಳು ಕನಿಷ್ಠ 2 ಹೊಸ ಉದ್ಯೋಗಿಗಳನ್ನು ಹಾಗೂ 50ಕ್ಕಿಂತ ಹೆಚ್ಚಿಗೆ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳು ಕನಿಷ್ಠ ಐದು ಮಂದಿ ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದ್ದರೆ ಈ ಸೌಲಭ್ಯ ಸಿಗಲಿದೆ.
ಡ್ರೈವಿಂಗ್ ಕಲಿಯುವವರೇ ಎಚ್ಚರ… ಟೆಕ್ಕಿಯಿಂದ ಎರಡೂವರೆ ಲಕ್ಷ ದೋಚಿದ ತರಬೇತುದಾರ!
ಗೂಗಲ್ ಬಳಕೆದಾರರಿಗೆ ಬಿಗ್ ಶಾಕ್- ಇನ್ಮುಂದೆ ಫೋಟೋ, ವಿಡಿಯೋಗಳಿಗೆ ಶುಲ್ಕ!