More

    ಗ್ರಾಮಿಣ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ

    ಮಾನ್ವಿ: ಮಾನ್ವಿ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಅಧ್ಯತೆ ನೀಡಲಾಗುವುದು ಎಂದು ಶಾಸಕ ಹಂಪಯ್ಯನಾಯಕ ತಿಳಿಸಿದರು.

    ಇದನ್ನೂ ಓದಿ: ರಸ್ತೆ ಮೇಲೆ ಹರಿಯುತ್ತಿದೆ ಕೊಳಚೆ ನೀರು

    ತಾಲೂಕಿನ ಬೆಟ್ಟದೂರುನಿಂದ ಬೆಟ್ಟದೂರು ತಾಂಡದವರೆಗೆ 2.7 ಕಿ.ಮೀ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಶನಿವಾರ ಮಾತನಾಡಿದರು.
    ಲ್ಯಾಂಡ್ ಆರ್ಮಿ ಇಲಾಖೆ ಕೆಕೆಆರ್‌ಡಿಬಿ ಯೋಜನೆಯಲ್ಲಿ 1.50 ಕೋಟಿ ರೂ.ವೆಚ್ಚದ ಢಾಂಬರೀಕರಣದ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಹಳ್ಳಿಗಳಲ್ಲಿ ರಸ್ತೆ, ಕುಡಿಯುವ ನೀರು ಇತರೆ ಮೂಲಸೌಲಭ್ಯಗಳ ಜತೆಗೆ ಶಿಕ್ಷಣಕ್ಕೂ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.

    ತಾಪಂ ಮಾಜಿ ಅಧ್ಯಕ್ಷ ಚನ್ನಬಸವ ಬೆಟ್ಟದೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಗಪೂರ್‌ಸಾಬ್, ಮುಖಂಡರಾದ ಬಾಲಸ್ವಾಮಿ ಕೊಡ್ಲಿ, ಸಮ್ದಾನನಾಯ್ಕ, ಬಿಕೆ ಅಮರೇಶಪ್ಪ, ತಾಪಂ ಸದಸ್ಯ ಗೋವಿಂದರಾಜ್ ವಕೀಲ, ಸೈಯ್ಯದ್ ಮುಸ್ತಾಫ್, ಕರೆಪ್ಪ, ಯಂಕಣ್ಣ ಕಾರಬಾರಿ, ಶಂಕರನಾಯಕ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts