More

    ಆರ್​​ಎಸ್​ಎಸ್​ ಶಿಬಿರಕ್ಕೆ ಬರುವಂತೆ ಮಾಜಿ ಮುಖ್ಯಮಂತ್ರಿಗಳಿಬ್ಬರಿಗೆ ಆಹ್ವಾನ!; ಟೀಕಿಸೋ ಮೊದಲು ಶಿಬಿರಕ್ಕೆ ಬಂದು ವಿಷ್ಯ ತಿಳ್ಕೊಳಿ ಅಂತ ಪತ್ರ..

    ಮಂಡ್ಯ: ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರು ಇತ್ತೀಚೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ಆಕ್ಷೇಪಾರ್ಹವಾಗಿ ಮಾತನಾಡಿದ್ದ ಹಿನ್ನೆಲೆಯಲ್ಲಿ ಅವರಿಬ್ಬರಿಗೂ ಈಗ ಆರ್​ಎಸ್​ಎಸ್​ ಶಿಬಿರಕ್ಕೆ ಬರುವಂತೆ ಕೋರಿ ಆಹ್ವಾನ ಕಳಿಸಲಾಗಿದೆ.

    ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಸೋಮನಹಳ್ಳಿ ವಿದ್ಯಾಸಂಸ್ಥೆಯಲ್ಲಿ ಅ.17ರಿಂದ ಏಳು ದಿನಗಳ ಕಾಲ ಆರ್​ಎಸ್​ಎಸ್​ ಪ್ರಾಥಮಿಕ ಶಿಕ್ಷಾ ವರ್ಗ ಶಿಬಿರ ನಡೆಯಲಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಬಿರದಲ್ಲಿ ಪಾಲ್ಗೊಂಡು ಆರ್​ಎಸ್​ಎಸ್​ನ ಮಹತ್ವ ತಿಳಿದುಕೊಳ್ಳಿ. ಆರ್​ಎಸ್​ಎಸ್​ ಶಿಬಿರದಲ್ಲಿ ಸಂಸ್ಕಾರದ ಬಗ್ಗೆ ಹೇಳಿಕೊಡಲಾಗುತ್ತದೆ. ಏಳು ದಿನಗಳಲ್ಲಿ ನಿಮ್ಮನ್ನು ಪರಿಪೂರ್ಣವಾಗಿ ಗಟ್ಟಿಗೊಳಿಸಿ ಈ ದೇಶಕ್ಕೆ ಹಾಗೂ ಸಮಾಜಕ್ಕೆ ನಿಮ್ಮನ್ನು ಆರ್​ಎಸ್​ಎಸ್​ ಅರ್ಪಣೆ ಮಾಡುತ್ತದೆ ಎಂದು ಪತ್ರಮುಖೇನ ಕರೆಯಲಾಗಿದೆ.

    ಇದನ್ನೂ ಓದಿ: ರಾಜ್ಯದಲ್ಲಿ ಇನ್ನೆರಡು ದಿನ ಮಳೆ ಮತ್ತಷ್ಟು ಬಿರುಸು; ನಾಳೆ ಆರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್..

    ಶಿಬಿರಕ್ಕೆ ಬರುವಾಗ ತಟ್ಟೆ, ಲೋಟ,‌‌‌ ಬೆಡ್​ಶೀಟ್​, ಜಮಕಾನ ಹಾಗೂ ಎರಡು ಜೊತೆ ಬಟ್ಟೆ ತೆಗೆದುಕೊಂಡು ಬನ್ನಿ. ಅದರಲ್ಲೂ ಆರ್​ಎಸ್​ಎಸ್​ ಗಣವೇಷದಲ್ಲಿ ಶಿಬಿರದಲ್ಲಿ ಪಾಲ್ಗೊಂಡು, ಬಳಿಕ ಆರ್​ಎಸ್​ಎಸ್​ ಬಗ್ಗೆ ಮಾತನಾಡಿ ಎಂದು ಆರ್​ಎಸ್​ಎಸ್​ ಕಾರ್ಯಕರ್ತ ಶಿವಕುಮಾರ್ ಆರಾಧ್ಯ ಇಬ್ಬರೂ ಮಾಜಿ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದಾರೆ.

    ಆರ್​​ಎಸ್​ಎಸ್​ ಶಿಬಿರಕ್ಕೆ ಬರುವಂತೆ ಮಾಜಿ ಮುಖ್ಯಮಂತ್ರಿಗಳಿಬ್ಬರಿಗೆ ಆಹ್ವಾನ!; ಟೀಕಿಸೋ ಮೊದಲು ಶಿಬಿರಕ್ಕೆ ಬಂದು ವಿಷ್ಯ ತಿಳ್ಕೊಳಿ ಅಂತ ಪತ್ರ.. ಆರ್​​ಎಸ್​ಎಸ್​ ಶಿಬಿರಕ್ಕೆ ಬರುವಂತೆ ಮಾಜಿ ಮುಖ್ಯಮಂತ್ರಿಗಳಿಬ್ಬರಿಗೆ ಆಹ್ವಾನ!; ಟೀಕಿಸೋ ಮೊದಲು ಶಿಬಿರಕ್ಕೆ ಬಂದು ವಿಷ್ಯ ತಿಳ್ಕೊಳಿ ಅಂತ ಪತ್ರ.. ಆರ್​​ಎಸ್​ಎಸ್​ ಶಿಬಿರಕ್ಕೆ ಬರುವಂತೆ ಮಾಜಿ ಮುಖ್ಯಮಂತ್ರಿಗಳಿಬ್ಬರಿಗೆ ಆಹ್ವಾನ!; ಟೀಕಿಸೋ ಮೊದಲು ಶಿಬಿರಕ್ಕೆ ಬಂದು ವಿಷ್ಯ ತಿಳ್ಕೊಳಿ ಅಂತ ಪತ್ರ..

    ಮನೆ ಬೀಗ-ಬಾಗಿಲು ಮುರಿಯದೆ, ಕನ್ನ ಹಾಕದೆ ಕಳವು ಮಾಡುತ್ತಿದ್ದ ಕಳ್ಳನ ಬಂಧನ; ಸಂಬಂಧಿಕರ ಮನೆಯನ್ನೂ ಬಿಡಲಿಲ್ಲ..

    ಹನಿಟ್ರ್ಯಾಪ್​ ಗ್ಯಾಂಗ್ ಅರೆಸ್ಟ್​: ಮೈಮುಟ್ಟದೆ ಬಟ್ಟೆ ಬಿಚ್ಚಿಸುತ್ತಿದ್ದರು, ಫೀಮೇಲ್ ಹೆಸರಲ್ಲಿ ಬ್ಲ್ಯಾಕ್​ಮೇಲ್ ಮಾಡುತ್ತಿದ್ದರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts