More

    ಕಷ್ಟ ಹೇಳ್ಕೊಂಡು ಕಣ್ಣೀರಿಟ್ಟ ಮನೆಗೆಲಸದವಳಿಗೆ ನಯನತಾರಾ ಏನು ಮಾಡಿದ್ರು ಗೊತ್ತಾ? ವಿಘ್ನೇಶ್​ ತಾಯಿ ಹೇಳಿದ್ದಿಷ್ಟು…

    ಚೆನ್ನೈ: ನಿರ್ದೇಶಕ ವಿಘ್ನೇಶ್​ ಶಿವನ್​ ಅವರ ತಾಯಿ ಮೀನಾ ಕುಮಾರಿ ತಮ್ಮ ಮಗ ಮತ್ತು ಸೊಸೆ ನಯನತಾರಾರನ್ನು ಮನಸಾರೆ ಹೊಗಳಿದ್ದಾರೆ. ನನ್ನ ಜೀವನದಲ್ಲೇ ನಯನಾತಾರಾಳಂತಹ ವಿನಮ್ರ ಹಾಗೂ ಅತ್ಯಂತ ಕಾಳಜಿಯುಳ್ಳ ಮಹಿಳೆಯನ್ನು ನಾನು ನೋಡಿಲ್ಲ. ಕಷ್ಟ ಅಂತಾ ಯಾರೇ ಬಂದರೂ ಅಂತವರಿಗೆ ಸಹಾಯ ಮಾಡುವುದಕ್ಕೆ ಕೊಂಚವೂ ಹಿಂದೇಟು ಹಾಕುವುದಿಲ್ಲ ಎಂದು ಹೊಗಳಿದ್ದಾರೆ.

    ಹ್ಯಾಪಿ ಮೈಡ್ಸ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ ಅನ್ನು ಉದ್ಘಾಟಿಸಿದ ಮೀನಾ ಕುಮಾರಿ, ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ಜವಾಬ್ದಾರಿಯ ಮಹತ್ವದ ಕುರಿತು ಮಾತನಾಡಿದರು.

    ನನ್ನ ಮಗ ವಿಘ್ನೇಶ್​ ಮತ್ತು ಸೊಸೆ ನಯನತಾರಾ ಶ್ರಮಜೀವಿಗಳು. ಅವರ ಮನೆಯಲ್ಲಿ ಎಂಟು ಜನ ಮನೆಗೆಲಸದವರಿದ್ದಾರೆ. ಅದರಲ್ಲಿ ನಾಲ್ವರು ಮಹಿಳೆಯರು ಮತ್ತು ನಾಲ್ವರು ಪುರುಷರು. ಅವರಲ್ಲಿ ಒಬ್ಬರು 4 ಲಕ್ಷ ರೂಪಾಯಿ ಸಾಲದ ಬಗ್ಗೆ ಮತ್ತು ಅದರಿಂದ ಜೀವನ ಕಷ್ಟಕರವಾಗಿರುವುದರ ಬಗ್ಗೆ ನಯನಾ ಬಳಿ ಹೇಳಿಕೊಂಡರು. ಅದನ್ನು ಕೇಳಿದ ನಯನಾ ತಕ್ಷಣವೇ ಅಷ್ಟೂ ಮೊತ್ತವನ್ನು ಅವಳಿಗೆ ಪಾವತಿಸಿ ಎಲ್ಲ ಸಾಲಗಳನ್ನು ತೀರಿಸಿದರು.

    ಅಷ್ಟು ಮೊತ್ತವನ್ನು ತ್ವರಿತವಾಗಿ ನೀಡುವುದಕ್ಕೆ ವಿಶಾಲ ಹೃದಯ ಮತ್ತು ಕೊಡುವ ಮನಸ್ಸು ಇರಬೇಕು. ಇದಲ್ಲದೆ ಹಣ ತೆಗೆದುಕೊಳ್ಳುವ ಮಹಿಳೆ ಸಹ ಅರ್ಹಳಾಗಿರಬೇಕು. ಅದಕ್ಕೆ ಆಕೆ ಅರ್ಹಳಾಗಿದ್ದಳು. ಕಳೆದ 2-3 ವರ್ಷಗಳಿಂದ ಮನೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾಳೆ. ಒಮ್ಮೆ ನಟಿಯ ತಾಯಿ ಅವರು ಧರಿಸಿದ್ದ ಚಿನ್ನದ ಬಳೆಯನ್ನು ಮನೆಗೆಲಸದಳಿಗೆ ನೀಡಿದ್ದರು. ಇದು ಪರಸ್ಪರ ನಂಬಿಕೆಗೆ ಕಾರಣವಾಗಿದೆ. ನಾವು ಒಂದು ಸ್ಥಳದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ, ನಮ್ಮ ಕಷ್ಟದ ಸಮಯದಲ್ಲಿ ಸಹಾಯ ಮಾಡಲು ಯಾರಾದರೂ ಸಹ ಮುಂದೆ ಬರುತ್ತಾರೆ ಎಂದು ಮೀನಾ ಕುಮಾರಿ ಹೇಳಿದರು. (ಏಜೆನ್ಸೀಸ್​)

    ಚಿಕ್ಕಮಗಳೂರಿನ ಬಾಬಾಬುಡನ್ ಗಿರಿ ದತ್ತ ಪೀಠದಲ್ಲಿ ದತ್ತ ಜಯಂತಿಗೆ ಹೈಕೋರ್ಟ್ ಅಸ್ತು

    ದೇವಳದ ಬಳಿ ಧರ್ಮ ಸಂಘರ್ಷ; ಹನುಮ ಜನ್ಮಭೂಮಿಯಲ್ಲೂ ಬಿಗುವಿನ ವಾತಾವರಣ..

    ಪತಿಯ ಮುಂದೆ ಪ್ರದರ್ಶಿಸು ಸಾರ್ವಜನಿಕರ ಮುಂದಲ್ಲ! ಟ್ರೋಲ್​ಗೆ ಗುರಿಯಾದ ನಿವೇದಿತಾರ ಹೊಸ ಅವತಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts