More

    ಆರ್ ಆರ್ ನಗರ, ಶಿರಾ ಗೆಲ್ಲಲು ‘ಗುಪ್ತಚರರ’ ಟೀಂ ರಚಿಸಿದ ಡಿಕೆಶಿ!

    ಬೆಂಗಳೂರು: ಶಿರಾ ಮತ್ತು ಆರ್​ಆರ್​ ನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್​-ಬಿಜೆಪಿ-ಕಾಂಗ್ರೆಸ್​ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಶತಾಯಗತಾಯ ಗೆಲ್ಲಲ್ಲೇಬೇಕೆಂದು ಈ ಮೂರೂ ಪಕ್ಷಗಳು ಜಿದ್ದಿಗೆ ಬಿದ್ದವರಂತೆ ಹೋರಾಡುತ್ತಿದ್ದಾರೆ. ಈ ಎರಡೂ ಕ್ಷೇತ್ರಗಳನ್ನು ತನ್ನದಾಗಿಸಿಕೊಳ್ಳಲು ರಣತಂತ್ರ ಹೆಣೆದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​, ಪ್ರತ್ಯೇಕ ಟೀಂ ರಚಿಸಿದ್ದಾರೆ.

    ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಸಂಸದ ಡಿ.ಕೆ. ಸುರೇಶ್ ನೇತೃತ್ವದಲ್ಲಿ ತಂಡ ರಚನೆಯಾಗಿದೆ. ಕನಕಪುರದಿಂದ ಟೀಂ ರೆಡಿ ಮಾಡಿರುವ ಡಿ.ಕೆ. ಸುರೇಶ್, ಅಣ್ಣ ಡಿಕೆಶಿ ಅಣತಿಯಂತೆ ಪಕ್ಷದ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಇನ್ನು ಶಿರಾ ಕ್ಷೇತ್ರಕ್ಕೆ ಕೆ.ಎನ್.ರಾಜಣ್ಣರ ಪುತ್ರ ರಾಜೇಂದ್ರ ನೇತೃತ್ವದಲ್ಲಿ ಯಂಗ್ ಟೀಂ ರಚನೆಯಾಗಿದೆ. ಈ ಎರಡೂ ಟೀಂ ಆಯಾ ಕ್ಷೇತ್ರದಲ್ಲಿ ಚುನಾವಣೆ ಕೆಲಸದ ಜತೆಗೆ ಗುಪ್ತಚರವಾಗಿ ಕೆಲಸ ಮಾಡಲಿವೆ.

    ಆರ್​ಆರ್ ನಗರ ಮತ್ತು ಶಿರಾದಲ್ಲಿ ಪಕ್ಷದ ವಿರುದ್ಧ ಕೆಲಸ ಮಾಡುವವರ ವಿರುದ್ಧವೂ ಡಿಕೆಶಿ ಗುಪ್ತಚರರನ್ನು ಬಿಟ್ಟಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಯುವಕರ ಟೀಂ ಕಟ್ಟಿಕೊಂಡಿರುವ ಡಿಕೆಶಿ, ಚುನಾವಣಾ ಪ್ರಚಾರಕ್ಕೆ ಇಳಿಯಲು ಸಜ್ಜಾಗಿದ್ದಾರೆ.

    ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೈಫಲ್ಯಗಳ ವಿರುದ್ಧ ಗುರುವಾರ ಧ್ವನಿ ಮುದ್ರಿಕೆಯನ್ನು ಕಾಂಗ್ರೆಸ್​ ಬಿಡುಗಡೆ ಮಾಡಿದೆ.

    ಸೊಸೆ ವಿರುದ್ಧ ಗುಡುಗಿದ ಗೌರಮ್ಮ ಕುರಿತು ಡಿ.ಕೆ.ರವಿ ಪತ್ನಿಯಿಂದ ಸ್ಫೋಟಕ ಹೇಳಿಕೆ

    VIDEO| ಪ್ರಯಾಣಿಕರ ತಂಗುದಾಣದಲ್ಲಿ ದೈತ್ಯ ಕರಡಿ! ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೆ ಸಂಚಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts