ತುಮಕೂರು: ಜನರೇ ತಂಗುದಾಣಗಳತ್ತ ಹೋಗೋ ಮುನ್ನ ಎಚ್ಚರ! ಸ್ವಲ್ಪ ಯಾಮಾರಿದರೂ ಪ್ರಾಣಕ್ಕೆ ಸಂಚಕಾರ ಕಟ್ಟಿಟ್ಟ ಬುತ್ತಿ!
ಹೌದು, ಇಲ್ಲಿನ ದೃಶ್ಯ ನೋಡಿದ್ರೆ ಹೀಗೆ ಹೇಳಬೇಕನ್ನಿಸುತ್ತದೆ. ನಿತ್ಯ ನೂರಾರು ಜನರು ವಾಯುವಿಹಾರಕ್ಕೆಂದು ಬೆಳ್ಳಂಬೆಳಗ್ಗೆ ಮತ್ತು ಸಂಜೆ ವೇಳೆ ಬರುವ ದಾರಿಯಲ್ಲೇ ದೈತ್ಯ ಕರಡಿಯೊಂದು ಕಾಣಿಸಿಕೊಂಡಿದೆ. ಅಷ್ಟೇ ಅಲ್ಲ ಇದು ಪ್ರವಾಸಿ ತಾಣ ಕೂಡ.
ನಗರದ ಕೂಗಳತೆ ದೂರದಲ್ಲೇ ಇರುವ ದೇವರಾಯನದುರ್ಗ ಮತ್ತು ನಾಮದಚಿಲುಮೆಗೆ ಪ್ರವಾಸಿಗರು ಮಾತ್ರವಲ್ಲ ಸುತ್ತಮುತ್ತಲ ಜನರು ನಿತ್ಯ ವಾಯುವಿಹಾರಕ್ಕೆ ಬರುತ್ತಾರೆ. ಅರಣ್ಯ ಪ್ರದೇಶದಲ್ಲಿರುವ ಈ ಸ್ಥಳಕ್ಕೆ ಬರುವ ಮಾರ್ಗಮಧ್ಯೆ ಅಲ್ಲಲ್ಲೇ ಕುಳಿತು ಹರಟೆ ಹೊಡೆಯುವವರಿಗೇನೂ ಕಮ್ಮಿ ಇಲ್ಲ. ಇಂತಹ ಸ್ಥಳದಲ್ಲಿ ಕರಡಿ, ಚಿರತೆ ಸೇರಿದಂತೆ ಕಾಡುಪ್ರಾಣಿಗಳ ಚಲನವಲನ ಇದೆ ಎಂಬುದು ಗೊತ್ತಿರುವ ವಿಷಯವೇ. ಆದರೆ ಇಲ್ಲಿನ ಬಸ್ ನಿಲ್ದಾಣದಲ್ಲಿರುವ ಪ್ರಯಾಣಿಕರ ತಂಗುದಾಣದಲ್ಲಿ ರಾತ್ರಿ ವೇಳೆ ದೈತ್ಯ ಕರಡಿಯೊಂದು ಆಶ್ರಯ ಪಡೆಯುತ್ತಿದೆ..!
ಹಾಗಾಗಿ ಹೇಳಿದ್ದು, ತಂಗುದಾಣಗಳತ್ತ ಹೋಗೋ ಮುನ್ನ ಎಚ್ಚರ! ಅರಣ್ಯ ವ್ಯಾಪ್ತಿಯಲ್ಲಿನ ಈ ತಂಗುದಾಣದಲ್ಲಿ ಮನುಷ್ಯರೇ ಇರಬೇಕಂತಿಲ್ಲ, ಕಾಡುಪ್ರಾಣಿಗಳೂ ಕೆಲಕಾಲ ವಾಸ್ತವ್ಯ ಹೂಡಿರುತ್ತವೆ. ಇಂತಹದ್ದೇ ಘಟನೆ ನಾಮಚಿಲುಮೆ ಕ್ರಾಸ್ನ ಪ್ರಯಾಣಿಕರ ತಂಗದಾಣದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ. ತಂಗುದಾಣದಲ್ಲಿ ಯಾರೋ ವ್ಯಕ್ತಿ ಬಿದ್ದಿದ್ದಾರೆ ಎಂದು ಕಾರಿನಲ್ಲಿ ತೆರಳುತ್ತಿದ್ದವರು ಹತ್ತಿರ ಹೋಗುತ್ತಿದ್ದಂತೆ ಅದು ಕರಡಿ ಎಂದು ಗೊತ್ತಾಗುತ್ತಿದ್ದಂತೆ ಗಾಬರಿಯಾಗಿದ್ದಾರೆ. ಕೂಡಲೇ ಅಲ್ಲಿಂದ ಕರಡಿ ಹೊರ ಹೋಗಿದೆ. ಈ ವಿಡಿಯೋ ವೈರಲ್ ಆಗಿದೆ.
ಬಸ್ ನಿಲ್ದಾಣದಲ್ಲಿ ಇರೋದು ಮನುಷ್ಯನಲ್ಲ! ಮತ್ತೇನು?
ಇದು ರಾಜ್ಯದ ಪ್ರಸಿದ್ಧ ಸ್ಥಳ. ನಗರ ಪ್ರದೇಶದ ಕೂಗಳತೆ ದೂರದಲ್ಲೇ ಇದೆ. ವನ್ಯ ಸಂಪತ್ತಿನಿಂದ ಕಂಗೊಳಿಸುವ ಈ ಪ್ರದೇಶಕ್ಕೆ ನಿತ್ಯ ನೂರಾರು ಜನ ವಾಕಿಂಗ್ ಬರುತ್ತಾರೆ. ಈ ದಾರಿಯಲ್ಲಿರುವ ಪ್ರಯಾಣಿಕರ ತಂಗುದಾಣದಲ್ಲಿ ದೈತ್ಯ ಕರಡಿ ಪ್ರತ್ಯಕ್ಷವಾಗಿದೆ!ಹೆಚ್ಚಿನ ವಿವರಕ್ಕಾಗಿ https://bit.ly/3lqdMu0
Posted by Vijayavani on Thursday, October 8, 2020
ಸೊಸೆ ವಿರುದ್ಧ ಗುಡುಗಿದ ಗೌರಮ್ಮ ಕುರಿತು ಡಿ.ಕೆ.ರವಿ ಪತ್ನಿಯಿಂದ ಸ್ಫೋಟಕ ಹೇಳಿಕೆ
ರಸ್ತೇಲಿ ಓವರ್ಟೇಕ್ ಮಾಡಿದ್ರೆ ಆನೆ ಬರುತ್ತೆ!
ರಸ್ತೇಲಿ ಓವರ್ಟೇಕ್ ಮಾಡಿದ್ರೆ ಆನೆ ಬರುತ್ತೆ!ಚಾಮರಾಜನಗರ-ತಮಿಳುನಾಡು ಗಡಿ ಪ್ರದೇಶ ಕಾರಾಪಾಳ್ಯದ ಬಳಿ ಹೆದ್ದಾರಿಯಲ್ಲಿ ಕಾಡಾನೆಗಳು ವಾಹನಗಳನ್ನು ಅಡ್ಡಗಟ್ಟಿ ಕೆಲ ಕಾಲ ಆತಂಕ ಸೃಷ್ಟಿಸಿದ್ದವು. ಅಲ್ಲದೆ ಲಾರಿಯೊಂದನ್ನು ಹಿಂದಿಕ್ಕಲು ಮುನ್ನುಗ್ಗುತ್ತಿದ್ದ ಸರಕು ತುಂಬಿದ ಬುಲೆರೋ ಪಿಕ್ ಅಪ್ ವಾಹನವನ್ನ ತಡೆದು ರಸ್ತೆಬದಿಗೆ ತಳ್ಳಿದ ಆನೆ ಮತ್ತು ಮರಿಯಾನೆ ದೃಶ್ಯ ವೈರಲ್ ಆಗಿದೆ. #Elephant #Bandipur
Posted by Vijayavani on Wednesday, October 7, 2020