More

    ಹಾಡ ಹಗಲೇ ಮಹಿಳೆಯ ಕೈ ಕಟ್ಟಿ ದರೋಡೆ! ಮಾರಕಾಸ್ತ್ರ ತೋರಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ಹಣ ಹೊತ್ತೊಯ್ದ ಕಿರಾತಕರು!

    ಬೆಂಗಳೂರು: ವಿದ್ಯಾರಣ್ಯಪುರದಲ್ಲಿ ಹಾಡ ಹಗಲೇ ಮನೆಗೆ ನುಗ್ಗಿದ ದರೋಡೆಕೋರರು ಒಂಟಿಯಾಗಿದ್ದ ಮಹಿಳೆಯ ಕೈ ಕಟ್ಟಿ 170 ಗ್ರಾಂ ಚಿನ್ನಾಭರಣ, 2 ಲಕ್ಷ ರೂ. ನಗದು ದೋಚಿರುವ ಘಟನೆ ನಡೆದಿದೆ. ತಿಂಡ್ಲು ಮುಖ್ಯರಸ್ತೆಯ ಬಸವ ಸಮಿತಿ ಲೇಔಟ್ ನಿವಾಸಿ ಸುಭಾಷ್ ಎಂಬುವವರ ಮನೆಯಲ್ಲಿ ಶನಿವಾರ ಬೆಳಗ್ಗೆ 10 ಗಂಟೆಗೆ ಪ್ರಕರಣ ನಡೆದಿದೆ.

    ಪೀಣ್ಯದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸುಭಾಷ್ ವಿದ್ಯಾರಣ್ಯಪುರದಲ್ಲಿ ಪತ್ನಿ ಜಯಶ್ರೀ ಜತೆ ವಾಸಿಸುತ್ತಿದ್ದಾರೆ. ಶನಿವಾರ ಬೆಳಗ್ಗೆ 8.45ರಲ್ಲಿ ಎಂದಿನಂತೆ ಸುಭಾಷ್ ಕೆಲಸಕ್ಕೆ ಹೋಗಿದ್ದರು.

    ಬೆಳಗ್ಗೆ 10 ಗಂಟೆಗೆ ಇವರ ಮನೆಗೆ ನುಗ್ಗಿದ ದರೋಡೆಕೋರರು ಏಕಾಏಕಿ ಜಯಶ್ರೀ ಅವರ ಹಿಂಭಾಗದಿಂದ ತಲೆಯನ್ನು ಬಗ್ಗಿಸಿ ತಮ್ಮ ಸುಳಿವು ಸಿಗದಂತೆ ಎಚ್ಚರಿಕೆ ವಹಿಸಿದ್ದರು. ನಂತರ ಅವರ ಕೈಯನ್ನು ಹಗ್ಗದಿಂದ ಕಟ್ಟಿ ಮಾರಕಾಸ್ತ್ರ ತೋರಿಸಿ ಮನೆಯಲ್ಲಿ ಚಿನ್ನಾಭರಣ ಇಟ್ಟಿರುವ ಸ್ಥಳದ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಬೀರುವಿನಲ್ಲಿದ್ದ 170 ಗ್ರಾಂ ಚಿನ್ನಾಭರಣ, 2 ಲಕ್ಷ ರೂ. ನಗದು ಹಣವನ್ನು ದೋಚಿ ಕ್ಷಣಮಾತ್ರದಲ್ಲಿ ಪರಾರಿಯಾಗಿದ್ದರು. ಕೂಡಲೇ ನೆರೆ-ಹೊರೆಯವರಿಗೆ ವಿಷಯ ತಿಳಿಸಿದ ಜಯಶ್ರೀ, ವಿದ್ಯಾರಣ್ಯಪುರ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಕೃತ್ಯ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಆರೋಪಿಗಳ ಮುಖ ನೋಡದ ಮಹಿಳೆ
    ದರೋಡೆಕೋರರು ಮೊದಲೇ ಸಂಚು ರೂಪಿಸಿ ಕೃತ್ಯ ಎಸಗಿರುವ ಸಾಧ್ಯತೆಗಳಿವೆ. ಜಯಶ್ರಿ ಅವರ ಹಿಂಭಾಗದಿಂದ ಬಂದು ಅವರ ತಲೆಯನ್ನು ಕೆಳಗೆ ಮಾಡಿ ಹಿಡಿದುಕೊಂಡಿದ್ದ ಹಿನ್ನೆಯಲ್ಲಿ ಆರೋಪಿಗಳ ಮುಖವನ್ನು ಇವರು ನೋಡಿರಲಿಲ್ಲ. ತಮ್ಮ ಸುಳಿವು ಸಿಗಬಾರದು ಎಂದ ಕಾರಣಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ಆರೋಪಿಗಳು ಈ ರೀತಿಯಾಗಿ ಮಾಡಿರುವ ಸಾಧ್ಯತೆಗಳಿವೆ.
    ಕೃತ್ಯ ನಡೆದ ಆಸು-ಪಾಸಿನಲ್ಲಿ ಅಳವಡಿಸಲಾದ ಸಿಸಿ ಕ್ಯಾಮರಾ ಪರಿಶೀಲಿಸಿ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಲ್ಸ್​ ಮೀಟರ್​ ಪೂರೈಕೆ ನೆಪದಲ್ಲಿ 7 ಲಕ್ಷ ವಂಚನೆ; ಸ್ಟೇಷನರಿ ಅಂಗಡಿ ಮಾಲೀಕನಿಂದ ದೂರು

    17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…

    ಬಾಸ್​ ಮರ್ಮಾಂಗವನ್ನೇ ಕತ್ತರಿಸಿ ಪೊಲೀಸರಿಗೆ ಕರೆ ಮಾಡಿದ ಮಹಿಳೆ! ಕಾರಣ ಕೇಳಿ ಬೆಚ್ಚಿಬಿದ್ದ ಪೊಲೀಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts