ಬೆಂಗಳೂರು: ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಐದಾರು ಕೊಳಗೇರಿ ಪ್ರದೇಶಗಳಿಗೆ ಕಳೆದ 20 ದಿನಗಳಿಂದ ಆಹಾರ ಪೂರೈಕೆ ಮಾಡುತ್ತಿದ್ದಾರೆ ಆರ್ಜೆ ಮಯೂರ ರಾಘವೇಂದ್ರ. ನಿತ್ಯ ಬೆಳಗ್ಗೆ 150ಕ್ಕೂ ಅಧಿಕ ಉಪಾಹಾರ ಪೊಟ್ಟಣ, ಮಧ್ಯಾಹ್ನ 700 ಊಟದ ಬಾಕ್ಸ್, ರಾತ್ರಿ 150 ಊಟ ಸೇರಿ ಪ್ರತಿದಿನ 1000ಕ್ಕೂ ಹೆಚ್ಚು ಜನರ ಹೊಟ್ಟೆ ತುಂಬಿಸುತ್ತಿದ್ದಾರೆ. ಮಯೂರ ಜತೆಗ ಕೌಶಿಕ್ ಸೇರಿ ಒಟ್ಟು 12 ಜನರ ತಂಡ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಟೀಮ್ ಮಾಡಿಕೊಂಡು ಸ್ಲಂ ಪ್ರದೇಶಗಳಿಗೆ ತೆರಳಿ ಆಹಾರ ಹಂಚಿಕೆ ಮಾಡುತ್ತಿದ್ದಾರೆ. ಮೊದಲಿಗೆ ಈ 12 ಜನರ ತಂಡ ಕೈಲಾದ ಮಟ್ಟಿಗೆ ಹಣ ವಿನಿಯೋಗಿಸಿತ್ತು. ಬಳಿಕ ಸೋಶಿಯಲ್ ಮೀಡಿಯಾದಲ್ಲಿ ದೇಣಿಗೆ ನೀಡುವಂತೆ ಕೋರಿತ್ತು. ಅದರಂತೆ, ದುಬೈ, ಕತಾರ, ನೆದರ್ಲ್ಯಾಂಡ್, ಲಂಡನ್, ಬೆಂಗಳೂರು ಸೇರಿ ಎಲ್ಲ ಕಡೆಗಳಿಂದ ಹಣದ ನೆರವು ಹರಿದು ಬರುತ್ತಿದ್ದು, ಏಪ್ರಿಲ್ 30ರ ವರೆಗೂ ಲಾಕ್ಡೌನ್ ವಿಸ್ತರಣೆ ಆದರೂ ಅಲ್ಲಿಯವರೆಗೂ ಊಟದ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ ಮಯೂರ ರಾಘವೇಂದ್ರ.
ಸಲ್ಮಾನ್ ಖಾನ್ ಕಂಠದಲ್ಲಿ ‘ಪ್ಯಾರ್ ಕರೊನಾ’ ಗೀತೆ; ಜಾಗೃತಿ ಕಾರ್ಯಕ್ಕೆ ಕೈ ಹಾಕಿದ ಬಾಲಿವುಡ್ ಸ್ಟಾರ್; ಕಿರು ಟೀಸರ್ ಬಿಡುಗಡೆಯಾಗಿದೆ ನೋಡಿ..