More

    VIDEO| ಕಾರು ಅಪಘಾತದ ಬಳಿಕ ಮೊದಲ ಬಾರಿ ಬ್ಯಾಟ್​ ಹಿಡಿದ ರಿಷಭ್​ ಪಂತ್​, ವಿಡಿಯೋ ವೈರಲ್​

    ಬೆಂಗಳೂರು: ಕಾರು ಅಪಘಾತದಲ್ಲಿ ಗಂಭೀರ ಗಾಯಕ್ಕೊಳಗಾಗಿ ಇದೀಗ ಚೇತರಿಕೆಯ ಹಾದಿಯಲ್ಲಿರುವ ಟೀಮ್​ ಇಂಡಿಯಾದ ವಿಕೆಟ್​ ಕೀಪರ್​-ಬ್ಯಾಟರ್​ ರಿಷಭ್​ ಪಂತ್​, ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಪಂದ್ಯದಲ್ಲಿ ಬ್ಯಾಟಿಂಗ್​ ನಡೆಸಿದರು. ಈ ಮೂಲಕ ಸಕಾರಾತ್ಮಕ ಸೂಚನೆಯನ್ನು ರವಾನಿಸಿರುವ ರಿಷಭ್​ ಪಂತ್​, ಮುಂದಿನ ವರ್ಷಾರಂಭದಲ್ಲಿ ನಡೆಯಲಿರುವ ಪ್ರವಾಸಿ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಭಾರತ ತಂಡದ ಪರ ಮರಳಿ ಕಣಕ್ಕಿಳಿಯುವ ಗುರಿಯನ್ನು ಹೊಂದಿದ್ದಾರೆ.

    ಕಳೆದ ವರ್ಷಾಂತ್ಯದಲ್ಲಿ ಡೆಹ್ರಾಡೂನ್​-ದೆಹಲಿ ನಡುವಿನ ಹೆದ್ದಾರಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಪಂತ್​ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದರು. ಆದರೆ ಅವರಿಗೆ ಹಲವು ಗಾಯಗಳಾಗಿದ್ದವು. ಈ ಪೈಕಿ ಬಲಮೊಣಕಾಲಿನ ಗಾಯ ಗಂಭೀರವಾಗಿತ್ತು. ಇದಕ್ಕಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿ ಇದೀಗ ಚೇತರಿಕೆ ಕಾಣುತ್ತಿದ್ದಾರೆ.

    ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಜೆಎಸ್​ಡಬ್ಲ್ಯು ಫೌಂಡೇಷನ್​ ವತಿಯಿಂದ ಬಳ್ಳಾರಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ 25 ವರ್ಷದ ಪಂತ್​, ನಂತರ ಸೌಹಾರ್ದ ಪಂದ್ಯದಲ್ಲಿ ಬ್ಯಾಟಿಂಗ್​ಗೂ ಇಳಿದರು. ಕೆಲ ಎಸೆತಗಳನ್ನು ಎದುರಿಸಿದ ಪಂತ್​, ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡರು. ಐಪಿಎಲ್​ನಲ್ಲಿ ಪಂತ್​ ನಾಯಕರಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್​ ತಂಡಕ್ಕೆ ಜೆಎಸ್​ಡಬ್ಲ್ಯು ಗ್ರೂಪ್​ ಸಹ-ಮಾಲೀಕನಾಗಿದೆ.

    ರಿಷಭ್​ ಪಂತ್​ ಈಗಾಗಲೆ ನೆಟ್ಸ್​ನಲ್ಲಿ ಬ್ಯಾಟಿಂಗ್​ ಅಭ್ಯಾಸ ಆರಂಭಿಸಿದ್ದಾರೆ ಎಂದು ಬಿಸಿಸಿಐ ಕಳೆದ ತಿಂಗಳೇ ಅವರ ಫಿಟ್ನೆಸ್​ ಬಗ್ಗೆ ತಾಜಾ ಮಾಹಿತಿಯನ್ನು ಒದಗಿಸಿತ್ತು. ಜನವರಿ 25ರಿಂದ ನಡೆಯಲಿರುವ ಪ್ರವಾಸಿ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಭಾರತ ತಂಡ 5 ಪಂದ್ಯಗಳನ್ನು ಆಡಲಿದ್ದು, ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ 3ನೇ ಆವೃತ್ತಿಯಲ್ಲಿ ಇದು ಮಹತ್ವದ ಸರಣಿಯಾಗಿದೆ. ಇದಕ್ಕೆ ಮುನ್ನ ಏಷ್ಯಾಕಪ್​-ವಿಶ್ವಕಪ್​ ಮತ್ತು ವರ್ಷಾಂತ್ಯದ ದಕ್ಷಿಣ ಆಫ್ರಿಕಾ ಪ್ರವಾಸವನ್ನು ರಿಷಭ್​ ಪಂತ್​ ತಪ್ಪಿಸಿಕೊಳ್ಳಲಿದ್ದಾರೆ. ಜನವರಿ 5ರಂದು ಆರಂಭಗೊಳ್ಳಲಿರುವ ರಣಜಿ ಟ್ರೋಫಿ, ಪಂತ್​ಗೆ ಫಿಟ್ನೆಸ್​ ಸಾಬೀತುಪಡಿಸಲು ಪ್ರಮುಖ ವೇದಿಕೆ ಎನಿಸಲಿದೆ.

    ಕ್ರೀಡೆಯನ್ನು ಆನಂದಿಸಿ
    ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಪಂತ್​, ಕ್ರೀಡೆಯನ್ನು ಆನಂದಿಸಲು ಕರೆ ನೀಡಿದರು. ‘ನೀವು ದೊಡ್ಡವರಾಗಿ ಬೆಳಯಲಾರಂಭಿಸುತ್ತಿದ್ದಂತೆ, ಕ್ರೀಡೆಯನ್ನು ಆನಂದಿಸುವುದನ್ನು ನಿಲ್ಲಿಸುತ್ತೀರಿ. ಜೀವನದಲ್ಲಿ ಎದುರಾಗುವ ಒತ್ತಡಗಳು ಅದಕ್ಕೊಂದು ಕಾರಣ. ಜೀವನದಲ್ಲಿ ಯಶಸ್ಸು ಕಾಣುವ ಸಲುವಾಗಿ ಕ್ರೀಡೆಯಿಂದ ದೂರ ಉಳಿಯುತ್ತೀರಿ. ಆದರೆ ಜೀವನದಲ್ಲಿ ಯಾವತ್ತೂ ಆನಂದವನ್ನು ಮಿಸ್​ ಮಾಡಿಕೊಳ್ಳಬಾರದು’ ಎಂದು ಪಂತ್​ ಹೇಳಿದ್ದಾರೆ.

    ಅಕ್ಷಯ್​ ಕುಮಾರ್​ ಅವರ ಆ ಸಹಾಯದಿಂದಾಗಿ ನಷ್ಟದಿಂದ ಪಾರಾಗಿತ್ತು ಡೆಲ್ಲಿ ತಂಡ!

    ಫಾರ್ಮ್​ಹೌಸ್​ನಲ್ಲಿ ಕ್ರಿಕೆಟ್​ ಪಿಚ್​ ನಿರ್ಮಿಸುವ ಸುದ್ದಿ ಬಗ್ಗೆ ವಿರಾಟ್​ ಕೊಹ್ಲಿ ನೀಡಿದ ಪ್ರತಿಕ್ರಿಯೆ ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts