More

    ರಂಗಭೂಮಿ, ಸಿನಿಮಾ, ನಟನೆ ಬಗ್ಗೆ ಅದ್ಭುತ ಚರ್ಚೆ … ನವಾಜುದ್ದೀನ್​ ಮನೆಯಲ್ಲಿ ರಿಷಭ್​

    ಮುಂಬೈ: ಇತ್ತೀಚೆಗಷ್ಟೇ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್​ ನಟ ನವಾಜುದ್ದೀನ್​ ಸಿದ್ದೀಖಿ ಮತ್ತು ಕನ್ನಡದ ರಿಷಭ್​ ಶೆಟ್ಟಿ ಭೇಟಿಯಾಗಿದ್ದು, ರಿಷಭ್​ ಕಂಡರೆ ತಮಗೆ ಹೊಟ್ಟೆಕಿಚ್ಚು ಎಂದು ನವಾಜುದ್ದೀನ್​ ಹೇಳಿಕೊಂಡಿದ್ದು ವರದಿಯಾಗಿದೆ. ನವಾಜುದ್ದೀನ್​ ಮತ್ತು ರಿಷಭ್​ ಬೇಟಿ ಇಷ್ಟಕ್ಕೇ ಮುಗಿದಿಲ್ಲ. ರಿಷಭ್​ ಅವರನ್ನು ತಮ್ಮ ಮೆನೆಗೆ ಕರೆದುಕೊಂಡು ಹೋಗಿರುವ ನವಾಜುದ್ದೀನ್​ ಅಲ್ಲಿ ಸತ್ಕಾರ ಮಾಡುವುದರ ಜತೆಗೆ ರಂಗಭೂಮಿ, ಸಿನಿಮಾ, ನಟನೆ ಮುಂತಾದ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದಾರೆ.

    ಇದನ್ನೂ ಓದಿ: ದಿ ಟಾಪ್​ ಟೆನ್ಸ್​ ಜಗತ್ತಿನ ಸಾರ್ವಕಾಲಿಕ ಅತ್ಯುತ್ತಮ ನಿರ್ದೇಶಕರ ಪಟ್ಟಿಯಲ್ಲಿ ಉಪೇಂದ್ರ … ಎಷ್ಟನೇ ಸ್ಥಾನ ಗೊತ್ತಾ?

    ಹೌದು, ಮುಂಬೈನ ಸಂವಾದದಲ್ಲಿ ಭಾಗವಹಿಸಿದ್ದ ರಿಷಭ್​ ಶೆಟ್ಟಿ, ಪ್ರಮೋದ್​ ಶೆಟ್ಟಿ ಮುಂತಾದವರನ್ನು ನವಾಜುದ್ದೀನ್​ ತಮ್ಮ ಮನೆಗೆ ಆಹ್ವಾನಿಸಿದ್ದಾರೆ. ಅಲ್ಲಿ ಹಲವು ವಿಷಯಗಳ ಕುರಿತು ಚರ್ಚೆ ಮಾಡಿದ್ದಾರೆ. ನವಾಜುದ್ದೀನ್​ ಮನೆಯಲ್ಲಿ ತಾವಿರುವ ಫೋಟೋಗಳನ್ನು ಸೋಷಿಯಲ್​ ಮೀಡಿಯಾ ಮೂಲಕ ಹಂಚಿಕೊಂಡಿರುವ ರಿಷಭ್​, ಅದಕ್ಕೆ ನವಾಜುದ್ದೀನ್​ಗೆ ಧನ್ಯವಾದ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಅವರು ತಮ್ಮ ಸ್ಫೂರ್ತಿ ಎಂದು ಹೇಳಿಕೊಂಡಿದ್ದಾರೆ.

    ಇದಕ್ಕೆ ಪ್ರತಿಕ್ರಿಯಿಸಿರುವ ನವಾಜುದ್ದೀನ್​ ಸಿದ್ದೀಕಿ, ‘ಈ ಚರ್ಚೆ ಇನ್ನೂ ಮುಗಿದಿಲ್ಲ. ಸದ್ಯದಲ್ಲೇ ಇನ್ನಷ್ಟು ಮುಂದುವರೆಯಲಿದೆ’ ಎಂದು ಹೇಳಿಕೊಂಡಿದ್ದಾರೆ. ಈ ಮೂಲಕ ತಮ್ಮ ಮತ್ತು ರಿಷಭ್​ ಅವರ ಭೇಟಿ ಮತ್ತು ಗೆಳೆತನ ಇಷ್ಟಕ್ಕೇ ಮುಗಿದಿಲ್ಲ, ಇನ್ನೂ ಮುಂದುವರೆಯಲಿದೆ ಎಂದು ಸೂಚ್ಯವಾಗಿ ಹೇಳಿದ್ದಾರೆ.

    ಇದನ್ನೂ ಓದಿ: ‘ಪ್ರಜೆಯೇ ಪ್ರಭು’ ಎನ್ನುತ್ತಿದ್ದಾರೆ ಪ್ರಿಯಾಂಕಾ ಉಪೇಂದ್ರ …

    ಇದಕ್ಕೂ ಮುನ್ನ ಸಂವಾದದಲ್ಲಿ ರಿಷಭ್​ ಕುರಿತು ಮಾತನಾಡಿದ್ದ ನವಾಜುದ್ದೀನ್​, ‘ಅವರನ್ನು ನೋಡಿದರೆ ನಿಜಕ್ಕೂ ಹೊಟ್ಟೆಕಿಚ್ಚು ಆಗುತ್ತದೆ. ಇದು ಕೆಟ್ಟ ರೀತಿಯ ಹೊಟ್ಟೆಕಿಚ್ಚು ಅಲ್ಲ. ಆತ ಅಂತಹ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ಈ ರೀತಿಯ ಹೊಟ್ಟೆ ಕಿಚ್ಚು ನಿಮ್ಮನ್ನು ಕಾಲ್ಬೆರಳುಗಳ ಮೇಲೆ ನಿಲ್ಲುವಂತೆ ಮಾಡುತ್ತದೆ ಮತ್ತು ಪರಿಶ್ರಮ ಪಡುವಂತೆ ಹುರಿದುಂಬಿಸುತ್ತದೆ’ ಎಂದು ಹೇಳಿದ್ದರು.

    ರಿಷಭ್​ ಶೆಟ್ಟಿ ಕಂಡರೆ ಹೊಟ್ಟೆಕಿಚ್ಚಂತೆ! ಕಾಂತಾರ ಯಶಸ್ಸಿನ ಬಗ್ಗೆ ನವಾಜುದ್ದೀನ್​ ಸಿದ್ದಿಖಿ ಆಡಿದ ಮಾತುಗಳಿವು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts