More

    ಅದೇ ಕೊನೇ ಊಟ, ಕೊನೆಯ ಕೂಟ; ತಹಸೀಲ್ದಾರ್​ ಕಚೇರಿ ಆಯೋಜಿಸಿದ್ದ ಪಾರ್ಟಿಯಲ್ಲಿ ನೌಕರನ ಸಾವು

    ಕೊಪ್ಪಳ: ತಹಸೀಲ್ದಾರ್​ ಕಚೇರಿಯೊಂದು ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟದಲ್ಲಿ ಸಂಭ್ರಮದ ಬೆನ್ನಿಗೇ ಶೋಕ ಆವರಿಸಿದೆ. ಮಾತ್ರವಲ್ಲ, ಅಲ್ಲಿನ ನೌಕರನೊಬ್ಬನ ಪಾಲಿಗೆ ಅದೇ ಕೊನೇ ಊಟ, ಕೊನೆಯ ಕೂಟ ಎಂಬಂತಾಗಿದೆ.

    ಕೊಪ್ಪಳ ತಾಲೂಕಿನ ಬಸಾಪುರ ಗ್ರಾಮದ ಬಳಿ ಇರುವ ರೆಸಾರ್ಟ್​ವೊಂದರಲ್ಲಿ ಈ ದುರಂತ ಸಂಭವಿಸಿದೆ. ಕೊಪ್ಪಳ ತಹಸೀಲ್ದಾರ ಕಚೇರಿ ವತಿಯಿಂದ ಇಲ್ಲಿ ವಾರ್ಷಿಕ ಕೂಟ ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ಹಾಜರಾಗಿದ್ದ ಕಂದಾಯ ಇಲಾಖೆಯ ಎಸ್​ಡಿಎ, ರಾಯಚೂರು ಮೂಲದ ತಾಯಪ್ಪ (26) ಎಂಬಾತ ಸಾವಿಗೀಡಾಗಿದ್ದಾನೆ.

    ತಹಸೀಲ್ದಾರ್ ಕಚೇರಿ ವತಿಯಿಂದ ಭಾನುವಾರ ಇಲ್ಲಿ ವಾರ್ಷಿಕ ಕ್ರೀಡಾಕೂಟದ ಸಲುವಾಗಿ ಸಂತೋಷ ಕೂಟ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಊಟ ಮುಗಿದ ಬಳಿಕ ಸ್ವಿಮ್ಮಿಂಗ್​ಪೂಲ್​ಗೆ ಬಿದ್ದು ತಾಯಪ್ಪ ಸಾವಿಗೀಡಾಗಿದ್ದಾನೆ.

    ತಾಯಪ್ಪ ಕೊಪ್ಪಳದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಪತಿಯ ಸಾವಿನಿಂದ ಪತ್ನಿ ದಿಗ್ಭ್ರಾಂತಳಾಗಿದ್ದು, ಕೊಪ್ಪಳ ಜಿಲ್ಲೆ ಮುನಿರಾಬಾದ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಅನ್ನಭಾಗ್ಯಕ್ಕೆ ಮತ್ತೆ ವಕ್ಕರಿಸಿದ ಸರ್ವರ್ ಭೂತ: ಪಡಿತರ ಪಡೆಯಲು ಕಾರ್ಡ್‌ದಾರರ ಪರದಾಟ

    ದೇವರ ಹುಂಡಿಯಲ್ಲಿ ಸಿಕ್ಕಿತು ವಿಕೃತ ಕೋರಿಕೆಯ ಹರಕೆ ಚೀಟಿ; ನರಳಿ ನರಳಿ ಸಾಯಲಿ ಎಂದು ಬೇಡಿಕೆ!

    ವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts