More

    12ರಿಂದ ರೇಣುಕಾ ವಿಜಯ ಪುರಾಣ

    ಗೊರೇಬಾಳ: ರವಡಕುಂದಾ ಸಂಸ್ಥಾನ ಹಿರೇಮಠದಲ್ಲಿ ಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ 21ನೇ ಹಾಗೂ ಮರಿ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ 3ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಜ.12ರಿಂದ 23ರವರೆಗೆ ಶ್ರೀ ಜಗದ್ಗುರು ರೇಣುಕಾವಿಜಯ ಮಹಾ ಪುರಾಣ ಆಯೋಜಿಸಲಾಗಿದೆ ಎಂದು ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

    ಗ್ರಾಮದ ಶರಣಬಸವೇಶ್ವರ ದೇವಾಲಯದಲ್ಲಿ ಗ್ರಾಮದ ಪ್ರಮುಖರ ಸಭೆಯಲ್ಲಿ ಶುಕ್ರವಾರ ಮಾತನಾಡಿದರು. ಪುರಾಣ ಪ್ರವಚನಕಾರರಾಗಿ ಗದಗನ ಡಾ.ಎಂ.ಕಲ್ಲಿನಾಥ ಶಾಸ್ತ್ರಿ, ಪುರಾಣ ವಾಚಕರಾಗಿ ನಾಗರಾಳ ಬೃಹನ್ಮಠದ ಎನ್.ಎಂ.ಜಗದೀಶಾರಾಧ್ಯ ಗವಾಯಿ ಆಗಮಿಸಲಿದ್ದು, ಸಂಗನಕಲ್ ಗ್ರಾಮದ ಯೋಗೀಶ ಕುಮಾರ್ ಬಣಕಾರ ತಬಲಾ ಹಾಗೂ ಸಿಂಧನೂರಿನ ಶಾಂತವೀರಯ್ಯ ಸ್ವಾಮಿ ದಿಲ್ ರುಬಾ ಸಾಥ್ ನೀಡಲಿದ್ದಾರೆ ಎಂದರು.

    ಜ.23ರಂದು ಬ್ರಾಹ್ಮಿ ಮಹೂರ್ತದಲ್ಲಿ ಗದ್ದುಗೆಗೆ ರುದ್ರಾಭಿಷೇಕ, 8ಕ್ಕೆ ಜಂಗಮ ಗಣಾರಾಧನೆ , 11ಕ್ಕೆ ಪೂಜ್ಯರ ಪುಣ್ಯಸ್ಮರಣೋತ್ಸವದೊಂದಿಗೆ ಪುರಾಣ ಮಂಗಲಗೊಳ್ಳುವುದು. ಬಂಗಾರಿ ಕ್ಯಾಂಪ್ ಸಿದ್ದಾಶ್ರಮದ ಡಾ.ಸಿದ್ದರಾಮೇಶ್ವರ ಶರಣರು, ರವಡಕುಂದಾ ಸಂಸ್ಥಾನ ಹಿರೇಮಠದ ವೀರೇಶಯ್ಯ ಸ್ವಾಮೀಜಿ ನೇತೃತ್ವ ಹಾಗೂ ಭಕ್ತರ ಸಹಕಾರದೊಂದಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾಗಿ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಪ್ರಮುಖರಾದ ಆರ್.ಬಸವನಗೌಡ, ನೆಟೆಕಲ್ ಭೀಮನಗೌಡ, ನಾಗರಬೆಂಚಿ ಬಸವನಗೌಡ, ಶರಣೇಗೌಡ ಪೊಲೀಸ್ ಪಾಟೀಲ್, ಇಂಗಳಗಿ ಸೋಮನಗೌಡ, ಇಂಗಳಗಿ ಶರಣೇಗೌಡ, ಆರ್.ಮೊಹನರಡ್ಡಿ, ರಂಗನಾಥ ಗೌಡನಬಾಯಿ, ಗೌಡ್ರ ಯಂಕನಗೌಡ, ಮಲ್ಲಿಕಾರ್ಜುನ ಗೌಡ, ಸಣ್ಣ ಶರಣೇಗೌಡ, ದೇವೆಂದ್ರಗೌಡ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts