ಬೆಂಗಳೂರು: ಅಚ್ಚರಿಯಾದರೂ ಇದು ಸತ್ಯ. ಕರೊನಾ ಎಂಬುದು ಸಂಬಂಧಗಳ ಮಧ್ಯೆ ಭಯ-ಆತಂಕಗಳನ್ನು ತಂದಿಟ್ಟು ವರ್ಷವೇ ಕಳೆದಿದೆ. ಎರಡನೇ ಅಲೆ ಬಂದ ಬಳಿಕವಂತೂ ಇದು ಇನ್ನೂ ಹೆಚ್ಚಾಗಿದೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂಬಂತೆ, ಕೋವಿಡ್ನಿಂದ ಸಾವಿಗೀಡಾದ ಸಾವಿರಾರು ಜನರ ಅಸ್ಥಿಗಳು ಇಂದು ಚಿತಾಗಾರಗಳಲ್ಲಿ ‘ವಾರಸುದಾರ’ರಿಲ್ಲದೆ ಹಾಗೆಯೇ ಬಿದ್ದಿವೆ!
ಈ ವಿಷಯವನ್ನು ಕಂದಾಯ ಸಚಿವ ಆರ್. ಅಶೋಕ್ ಅವರೇ ಬಹಿರಂಗಪಡಿಸಿದ್ದಾರೆ. ‘‘ಚಿತಾಗಾರಗಳಲ್ಲಿ ಇರುವ ಇನ್ನೂ 1 ಸಾವಿರಕ್ಕೂ ಅಧಿಕ ಅಸ್ಥಿಗಳನ್ನು ಸಂಬಂಧಿಕರು ತೆಗೆದುಕೊಂಡು ಹೋಗಿಲ್ಲ. ನಾವು ಸಂಬಂಧಿಸಿದವರಿಗೆ ಕರೆ ಮಾಡಿ ಸಂಪರ್ಕಿಸಲು ಪ್ರಯತ್ನಿಸಿದರೆ ಅವರು ಫೋನ್ಗಳನ್ನು ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾರೆ. ಹೀಗಾಗಿ ಸರ್ಕಾರವು ಗೌರವಯುತವಾಗಿ ಅವುಗಳ ಸಾಮೂಹಿಕ ವಿಸರ್ಜನೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ’’ ಎಂದು ಹೇಳಿದರು.
ಎಸ್ಆರ್ಎಸ್ ಟ್ರಾವೆಲ್ಸ್ ಮಾಲೀಕ ರಾಜಶೇಖರ್ ವಿಧಿವಶ: ಕೋವಿಡ್-19 ಸೋಂಕಿಗೆ ಬಲಿ
ಸಾಯುವವನು ಎಲ್ಲಿ ಬೇಕಾದ್ರೂ ಸಾಯಲಿ, ನಾನು ಇಲ್ಲಿ ಕೋವಿಡ್ ಸೆಂಟರ್ ತೆರೆಯಲ್ಲ: ಬಿಜೆಪಿ ಶಾಸಕರ ಖಡಾಖಂಡಿತ ಮಾತು