ಬೆಂಗಳೂರು: ಕಳೆದ 15 ಆವೃತ್ತಿಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡವು ಕಪ್ ಗೆಲ್ಲದೆ ಇದ್ದರೂ ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡಿಲ್ಲ. ಪ್ರತಿ ಭಾರಿ IPL ಶುರುವಾಗುವುದಕ್ಕೂ ಮುನ್ನ ಈ ಸಲ ಕಪ್ ನಮ್ದೆ ಎಂದು ಹೇಳುವ ಮೂಲಕ ಬೆಂಬಲ ಸೂಚಿಸುತ್ತಾ ಬಂದಿದ್ದಾರೆ.
ಇನ್ನು ಸಿಲಿಕಾನ್ ಸಿಟಿಯಲ್ಲಿ IPL ಕ್ರೇಜ್ ಹೆಚ್ಚಿದ್ದು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ-ಮುಂಬೈ, ಆರ್ಸಿಬಿ-ಎಲ್ಎಸ್ಜಿ ನಡುವಿನ ಪಂದ್ಯಗಳ ಟಿಕೆಟ್ ವಿತರಣೆ ಮಾಡಲಾಗಿದ್ದು ಅಭಿಮಾನಿಗಳು ಮುಗಿಬಿದ್ದಿದ್ದಾರೆ.
ಪಂದ್ಯದ ಟಿಕೆಟ್ ಪಡೆಯಲು ಅಭಿಮಾನಿಗಳು ರಾತ್ರಿ 1 ಘಂಟೆಯಿಂದ ಸರತಿ ಸಾಲಿನಲ್ಲಿ ನಿಂತಿದ್ದು ಟಿಕೆಟ್ ಪಡೆಯಲು ರಾತ್ರಿ ಇಡೀ ಜಾಗರಣೆ ಮಾಡಿದ್ದಾರೆ. ಕಬ್ಬನ್ ಪಾರ್ಕ್ ವೃತ್ತದಿಂದ ಶುರುವಾಗಿ ಅನಿಲ್ ಕುಂಬ್ಳೆ ವೃತ್ತದವರೆಗೂ ಸುಮಾರು 10,000 ಸಾವಿರಕ್ಕೂ ಹೆಚ್ಚಿನ ಅಭಿಮಾನಿಗಳು 2 ಕಿಲೋಮೀಟರ್ ಕ್ಯೂನಲ್ಲಿ ನಿಂತಿದ್ದರು ಎಂದು ವರದಿಯಾಗಿದೆ.
ಇದನ್ನೂ ಓದಿ: ಈ ಬಾರಿ ಐಪಿಎಲ್ನಲ್ಲಿ 10 ಕನ್ನಡಿಗರು; ಆರ್ಸಿಬಿಯಲ್ಲಿ ಕರುನಾಡ ಕುಡಿಗಳು ಎಷ್ಟು ಜನ?
ಕೋವಿಡ್ ಕಾರಣದಿಂದ ಕಳೆದ ಮೂರು ಆವೃತ್ತಿಗಳನ್ನು ಒಂದೇ ಸ್ಥಳದಲ್ಲಿ ನಡೆಸಲಾಗಿತ್ತು. ಈ ಭಾರಿ IPL ಪಂದ್ಯವಾಳಿಗಳನ್ನು ತವರು ಹಾಗೂ ಎದುರಾಳಿ ನೆಲದಲ್ಲಿ ತಂಡಗಳು ಆಡಲಿವೆ.
ಮಾರ್ಚ್ 31ರಿಂದ IPL ಪ್ರಾರಂಭವಾಗಲಿದ್ದು ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟಾನ್ಸ್ ಹಾಗೂ ಚೆನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ.